ಡ್ರೈವರ್ ರಹಿತ ಕಾರು 
ವಿಜ್ಞಾನ-ತಂತ್ರಜ್ಞಾನ

ಡ್ರೈವರ್ ರಹಿತ ಕಾರು ಸಂಶೋಧನೆ: ಪುಣೆ ವಿದ್ಯಾರ್ಥಿಗಳ ಸಾಧನೆ

ತ್ರೀ ಈಡಿಯಟ್ಸ್ ಸಿನಿಮಾದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ದೈನಂದಿನ ಜೀವನಕ್ಕೆ ಬೇಕಾದ ಉಪಕರಣಗಳ ತಯಾರಿಯಲ್ಲಿ ತೊಡಗಿರುವುದನ್ನು ತೋರಿಸಲಾಗಿತ್ತು. ಪುಣೆಯ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಅಂಥದ್ದೇ ಒಂದು ವಿನೂತನ ಸಂಶೋಧನೆ ಮಾಡಿದ್ದಾರೆ.

ಮುಂಬೈ: ತ್ರೀ ಈಡಿಯಟ್ಸ್ ಸಿನಿಮಾದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ದೈನಂದಿನ ಜೀವನಕ್ಕೆ ಬೇಕಾದ ಉಪಕರಣಗಳ ತಯಾರಿಯಲ್ಲಿ ತೊಡಗಿರುವುದನ್ನು ತೋರಿಸಲಾಗಿತ್ತು. ಪುಣೆಯ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಅಂಥದ್ದೇ ಒಂದು ವಿನೂತನ ಸಂಶೋಧನೆ ಮಾಡಿದ್ದಾರೆ. ಅವರು ಚಾಲಕರಹಿತ ಕಾರೊಂದನ್ನು ಅಭಿವೃದ್ಧಿ ಪಡಿಸಿದ್ದಾರೆ. ಯಶ್ ಕೇಸ್ಕರ್, ಸುಧಾಂಶು, ಸೌರಭ್, ಶುಭಾಂಗ್, ಪ್ರೇಮಾ ಹಾಗೂ ಪ್ರತ್ಯಕ್ ಈ ತಂಡದಲ್ಲಿದ್ದಾರೆ.

ಈ ಕಾರು ಕೃತಕ ಬುದ್ಧಿಮತ್ತೆ ಅಂದರೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಆಧಾರದಲ್ಲಿ ತಯಾರು ಮಾಡಲಾಗಿದೆ. ಪುಣೆಯ ಎಂಐಟಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಈ ಸಾಧನೆಯನ್ನು ಮಾಡಿದ್ದಾರೆ. 

ಭಾರತದಲ್ಲಿ ಸಂಭವಿಸುತ್ತಿರುವ ಅಪಘಾತಗಳಿಗೆ ಪ್ರಮುಖವಾಗಿ ಚಾಲಕರು ಎಸಗುವ ತಪ್ಪುಗಳು ಕಾರಣವಾಗಿರುತ್ತದೆ, ಹೀಗಾಗಿ ಚಾಲಕರ ಅಗತ್ಯ ಬೀಳದ ಕಾರು ತಯಾರಿಗೆ ಅದುವೇ ಪ್ರೇರಣೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. 

ಈ ಕಾರು ವಿದ್ಯುತ್ ಶಕ್ತಿಯನ್ನು ಆಧರಿಸಿ ಕಾರ್ಯಚರಿಸುತ್ತದೆ ಎನ್ನುವುದು ವಿಶೇಷ. ಈ ಕಾರಿನ ಸ್ಟಿಯರಿಂಗ್, ಕ್ಸೆಲ್ರೇಟರ್ ಮತ್ತು ಬ್ರೇಕುಗಳನ್ನು ಆರ್ಟಿಫಿಷಿಯಲ್ ತಂತ್ರಜ್ಞಾನ ನಿಯಂತ್ರಿಸುತ್ತದೆ. ಈ ಕಾರಿನಲ್ಲಿ ಹಲವು ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅದರ ಮುಖಾಂತರ ಕಾರಿನಲ್ಲಿರುವ ಕಂಪ್ಯೂಟರ್ ರಸ್ತೆಯ ಮೇಲೆ ಗಮನ ಇರಿಸಿ ಕಾರು ಚಾಲನೆ ಮಾಡುತ್ತದೆ.

ಸದ್ಯ ಅಳವಡಿಸಲಾಗಿರುವ ಬ್ಯಾಟರಿ ಪೂರ್ತಿ ಚಾರ್ಜ್ ಆಗಲು 4 ಗಂಟೆ ತೆಗೆದುಕೊಳ್ಳಲಿದ್ದು, 40 ಕಿ.ಮೀ ಪ್ರಯಾಣ ನಡೆಸುತ್ತದೆ. ಈ ಕಾರಿನ ತಂತ್ರಜ್ಞಾನ ಕೇವಲ ಪ್ರಯಾಣ ಕ್ಷೇತ್ರ ಮಾತ್ರವಲ್ಲದೆ, ಕೃಷಿ, ಗಣಿಗಾರಿಕೆ ಸೇರಿದಂತೆ ಹಲವೆಡೆ ವಿಸ್ತರಿಸಬಹುದು ಎಂದು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT