ಇಸ್ರೋ 
ವಿಜ್ಞಾನ-ತಂತ್ರಜ್ಞಾನ

ಸೂರ್ಯ, ಚಂದ್ರಯಾನದ ಬಳಿಕ ಇಸ್ರೋ ಮುಂದಿನ ಯೋಜನೆ ಯಾವುದು?: ಇಲ್ಲಿದೆ ಮಾಹಿತಿ

ಭಾರತದ ಚಂದ್ರಯಾನ-3 ಹಾಗೂ ಆದಿತ್ಯ ಎಲ್-1 ಯೋಜನೆಗಳು ಯಶಸ್ವಿಯಾಗಿದ್ದು, ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಈಗ ಖಗೋಳಶಾಸ್ತ್ರಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆಧುನೀಕರಣಗೊಳ್ಳುವುದಕ್ಕೆ ಯೋಜನೆ ಸಿದ್ಧಪಡಿಸಿದೆ. 

ಭಾರತದ ಚಂದ್ರಯಾನ-3 ಹಾಗೂ ಆದಿತ್ಯ ಎಲ್-1 ಯೋಜನೆಗಳು ಯಶಸ್ವಿಯಾಗಿದ್ದು, ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಈಗ ಖಗೋಳಶಾಸ್ತ್ರಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆಧುನೀಕರಣಗೊಳ್ಳುವುದಕ್ಕೆ ಯೋಜನೆ ಸಿದ್ಧಪಡಿಸಿದೆ. 

ಎಕ್ಸ್ ಪೋಸ್ಯಾಟ್ (ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹ)  ಭಾರತದ ಮೊದಲ ಸಮರ್ಪಿತ ಪೋಲಾರಿಮೆಟ್ರಿ ಮಿಷನ್ ಆಗಿರಲಿದ್ದು, ತೀವ್ರವಾದ ಪರಿಸ್ಥಿತಿಗಳಲ್ಲಿ ಪ್ರಕಾಶಮಾನವಾದ ಖಗೋಳ ಎಕ್ಸ್-ರೇ ಮೂಲಗಳ ವಿವಿಧ ಚಲನೆಗಳನ್ನು ಅಧ್ಯಯನ ಮಾಡುವ ಉದ್ದೇಶ ಹೊಂದಿದೆ ಕಡಿಮೆ ಭೂ ಕಕ್ಷೆಯಲ್ಲಿ ಈ ಬಾಹ್ಯಾಕಾಶ ನೌಕೆ ಎರಡು ಪೇಲೋಡ್ ಗಳನ್ನು ಹೊತ್ತೊಯ್ಯಲಿದೆ.

ಹೇಗೆ ಕಾರ್ಯನಿರ್ವಹಿಸಲಿದೆ ಪೋಲಾರಿಮೆಟ್ರಿ ಮಿಷನ್?

ಪ್ರಾಥಮಿಕ ಪೇಲೋಡ್ POLIX (ಎಕ್ಸ್-ಕಿರಣಗಳಲ್ಲಿನ ಪೋಲಾರಿಮೀಟರ್ ಉಪಕರಣ) ಪೋಲಾರಿಮೆಟ್ರಿ ನಿಯತಾಂಕಗಳನ್ನು (ಧ್ರುವೀಕರಣದ ಡಿಗ್ರಿ ಮತ್ತು ಕೋನ) ಖಗೋಳ ಮೂಲದ 8-30 ಕೆವಿ ಫೋಟಾನ್‌ಗಳ ಮಧ್ಯಮ ಎಕ್ಸ್-ರೇ ಶಕ್ತಿಯ ವ್ಯಾಪ್ತಿಯಲ್ಲಿ ಅಳೆಯುತ್ತದೆ.  ISRO ಪ್ರಕಾರ XSPECT (X-ray ಸ್ಪೆಕ್ಟ್ರೋಸ್ಕೋಪಿ ಮತ್ತು ಟೈಮಿಂಗ್) ಪೇಲೋಡ್ 0.8-15 keV ಶಕ್ತಿಯ ವ್ಯಾಪ್ತಿಯಲ್ಲಿ ಸ್ಪೆಕ್ಟ್ರೋಸ್ಕೋಪಿಕ್ ಮಾಹಿತಿಯನ್ನು ನೀಡುತ್ತದೆ.

ಪೋಲಾರಿಮೆಟ್ರಿ ಉದ್ದೇಶವೇನು?

ಎಕ್ಸ್ ಪೋಸ್ಯಾಟ್ ಉಡಾವಣೆಗೆ ಸಜ್ಜುಗೊಂಡಿದೆ ಎಂದು ಬಾಹ್ಯಾಕಾಶ ಸಂಸ್ಥೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ವಿವಿಧ ಖಗೋಳ ಮೂಲಗಳಿಂದ ಹೊರಹೊಮ್ಮುವ  ಕಪ್ಪು ರಂಧ್ರ, ನ್ಯೂಟ್ರಾನ್ ಸ್ಟಾರ್, ಆಕ್ಟೀವ್ ಗ್ಯಾಲಾಕ್ಟಿಕ್ ನ್ಯೂಕ್ಲೈ, ಪಲ್ಸರ್ ವಿಂಡ್ ನೆಬ್ಯುಲಾಗಳ ಮೂಲ ಸಂಕೀರ್ಣ ಸಂಕೀರ್ಣ ಭೌತಿಕ ಪ್ರಕ್ರಿಯೆಗಳಾಗಿದ್ದು, ಅದನ್ನು ಅರಿಯುವುದು ಸವಾಲಿನ ಸಂಗತಿಯಾಗಿದೆ. 

ವಿವಿಧ ಬಾಹ್ಯಾಕಾಶ-ಆಧಾರಿತ ವೀಕ್ಷಣಾಲಯಗಳ ಸ್ಪೆಕ್ಟ್ರೋಸ್ಕೋಪಿಕ್ ಮತ್ತು ಸಮಯದ ಮಾಹಿತಿಯು ಮಾಹಿತಿಯ ಸಂಪತ್ತನ್ನು ಒದಗಿಸುತ್ತದೆಯಾದರೂ ಅಂತಹ ಮೂಲಗಳಿಂದ ಹೊರಹೊಮ್ಮುವ ನಿಖರವಾದ ಸ್ವರೂಪವು ಇನ್ನೂ ಖಗೋಳಶಾಸ್ತ್ರಜ್ಞರಿಗೆ ಆಳವಾದ ಸವಾಲುಗಳನ್ನು ಒಡ್ಡುತ್ತದೆ. ಇಂತಹ ಎಮಿಷನ್ ಪ್ರಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಪೋಲಾರಿಮೆಟ್ರಿ ಮಿಷನ್ ಸಹಕಾರಿಯಾಗಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT