ಇಸ್ರೋ 
ವಿಜ್ಞಾನ-ತಂತ್ರಜ್ಞಾನ

ಸೂರ್ಯ, ಚಂದ್ರಯಾನದ ಬಳಿಕ ಇಸ್ರೋ ಮುಂದಿನ ಯೋಜನೆ ಯಾವುದು?: ಇಲ್ಲಿದೆ ಮಾಹಿತಿ

ಭಾರತದ ಚಂದ್ರಯಾನ-3 ಹಾಗೂ ಆದಿತ್ಯ ಎಲ್-1 ಯೋಜನೆಗಳು ಯಶಸ್ವಿಯಾಗಿದ್ದು, ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಈಗ ಖಗೋಳಶಾಸ್ತ್ರಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆಧುನೀಕರಣಗೊಳ್ಳುವುದಕ್ಕೆ ಯೋಜನೆ ಸಿದ್ಧಪಡಿಸಿದೆ. 

ಭಾರತದ ಚಂದ್ರಯಾನ-3 ಹಾಗೂ ಆದಿತ್ಯ ಎಲ್-1 ಯೋಜನೆಗಳು ಯಶಸ್ವಿಯಾಗಿದ್ದು, ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಈಗ ಖಗೋಳಶಾಸ್ತ್ರಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆಧುನೀಕರಣಗೊಳ್ಳುವುದಕ್ಕೆ ಯೋಜನೆ ಸಿದ್ಧಪಡಿಸಿದೆ. 

ಎಕ್ಸ್ ಪೋಸ್ಯಾಟ್ (ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹ)  ಭಾರತದ ಮೊದಲ ಸಮರ್ಪಿತ ಪೋಲಾರಿಮೆಟ್ರಿ ಮಿಷನ್ ಆಗಿರಲಿದ್ದು, ತೀವ್ರವಾದ ಪರಿಸ್ಥಿತಿಗಳಲ್ಲಿ ಪ್ರಕಾಶಮಾನವಾದ ಖಗೋಳ ಎಕ್ಸ್-ರೇ ಮೂಲಗಳ ವಿವಿಧ ಚಲನೆಗಳನ್ನು ಅಧ್ಯಯನ ಮಾಡುವ ಉದ್ದೇಶ ಹೊಂದಿದೆ ಕಡಿಮೆ ಭೂ ಕಕ್ಷೆಯಲ್ಲಿ ಈ ಬಾಹ್ಯಾಕಾಶ ನೌಕೆ ಎರಡು ಪೇಲೋಡ್ ಗಳನ್ನು ಹೊತ್ತೊಯ್ಯಲಿದೆ.

ಹೇಗೆ ಕಾರ್ಯನಿರ್ವಹಿಸಲಿದೆ ಪೋಲಾರಿಮೆಟ್ರಿ ಮಿಷನ್?

ಪ್ರಾಥಮಿಕ ಪೇಲೋಡ್ POLIX (ಎಕ್ಸ್-ಕಿರಣಗಳಲ್ಲಿನ ಪೋಲಾರಿಮೀಟರ್ ಉಪಕರಣ) ಪೋಲಾರಿಮೆಟ್ರಿ ನಿಯತಾಂಕಗಳನ್ನು (ಧ್ರುವೀಕರಣದ ಡಿಗ್ರಿ ಮತ್ತು ಕೋನ) ಖಗೋಳ ಮೂಲದ 8-30 ಕೆವಿ ಫೋಟಾನ್‌ಗಳ ಮಧ್ಯಮ ಎಕ್ಸ್-ರೇ ಶಕ್ತಿಯ ವ್ಯಾಪ್ತಿಯಲ್ಲಿ ಅಳೆಯುತ್ತದೆ.  ISRO ಪ್ರಕಾರ XSPECT (X-ray ಸ್ಪೆಕ್ಟ್ರೋಸ್ಕೋಪಿ ಮತ್ತು ಟೈಮಿಂಗ್) ಪೇಲೋಡ್ 0.8-15 keV ಶಕ್ತಿಯ ವ್ಯಾಪ್ತಿಯಲ್ಲಿ ಸ್ಪೆಕ್ಟ್ರೋಸ್ಕೋಪಿಕ್ ಮಾಹಿತಿಯನ್ನು ನೀಡುತ್ತದೆ.

ಪೋಲಾರಿಮೆಟ್ರಿ ಉದ್ದೇಶವೇನು?

ಎಕ್ಸ್ ಪೋಸ್ಯಾಟ್ ಉಡಾವಣೆಗೆ ಸಜ್ಜುಗೊಂಡಿದೆ ಎಂದು ಬಾಹ್ಯಾಕಾಶ ಸಂಸ್ಥೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ವಿವಿಧ ಖಗೋಳ ಮೂಲಗಳಿಂದ ಹೊರಹೊಮ್ಮುವ  ಕಪ್ಪು ರಂಧ್ರ, ನ್ಯೂಟ್ರಾನ್ ಸ್ಟಾರ್, ಆಕ್ಟೀವ್ ಗ್ಯಾಲಾಕ್ಟಿಕ್ ನ್ಯೂಕ್ಲೈ, ಪಲ್ಸರ್ ವಿಂಡ್ ನೆಬ್ಯುಲಾಗಳ ಮೂಲ ಸಂಕೀರ್ಣ ಸಂಕೀರ್ಣ ಭೌತಿಕ ಪ್ರಕ್ರಿಯೆಗಳಾಗಿದ್ದು, ಅದನ್ನು ಅರಿಯುವುದು ಸವಾಲಿನ ಸಂಗತಿಯಾಗಿದೆ. 

ವಿವಿಧ ಬಾಹ್ಯಾಕಾಶ-ಆಧಾರಿತ ವೀಕ್ಷಣಾಲಯಗಳ ಸ್ಪೆಕ್ಟ್ರೋಸ್ಕೋಪಿಕ್ ಮತ್ತು ಸಮಯದ ಮಾಹಿತಿಯು ಮಾಹಿತಿಯ ಸಂಪತ್ತನ್ನು ಒದಗಿಸುತ್ತದೆಯಾದರೂ ಅಂತಹ ಮೂಲಗಳಿಂದ ಹೊರಹೊಮ್ಮುವ ನಿಖರವಾದ ಸ್ವರೂಪವು ಇನ್ನೂ ಖಗೋಳಶಾಸ್ತ್ರಜ್ಞರಿಗೆ ಆಳವಾದ ಸವಾಲುಗಳನ್ನು ಒಡ್ಡುತ್ತದೆ. ಇಂತಹ ಎಮಿಷನ್ ಪ್ರಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಪೋಲಾರಿಮೆಟ್ರಿ ಮಿಷನ್ ಸಹಕಾರಿಯಾಗಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT