ನಾಪತ್ತೆಯಾಗಿರುವ ಏರ್ ಏಷ್ಯಾ ವಿಮಾನ 
ವಿಶೇಷ

ವಿಮಾನಗಳ ಕಣ್ಮರೆ ಹಿಂದೆ...

162 ಮಂದಿಯನ್ನು ಹೊತ್ತು ಇಂಡೋನೇಷ್ಯಾದಿಂದ ಸಿಂಗಾಪುರ...

162 ಮಂದಿಯನ್ನು ಹೊತ್ತು ಇಂಡೋನೇಷ್ಯಾದಿಂದ ಸಿಂಗಾಪುರಕ್ಕೆ ಹೊರಟಿದ್ದ ಏರ್ ಏಷ್ಯಾ ವಿಮಾನ ಭಾನುವಾರ ನಾಪತ್ತೆಯಾಗಿರುವುದು, 10 ತಿಂಗಳ ಹಿಂದೆ ಕಣ್ಮರೆಯಾದ ಮಲೇಷ್ಯಾದ ಎಂಎಚ್ 370 ವಿಮಾನದ ಕಹಿನೆನಪನ್ನು ಮರುಕಳಿಸುವಂತೆ ಮಾಡಿದೆ. ಎರಡೂ ವಿಮಾನಗಳು ಇದ್ದಕ್ಕಿದ್ದಂತೆ ನಿಯಂತ್ರಣಾ ಕೊಠಡಿಯ ಸಂಪರ್ಕ ಕಳೆದುಕೊಂಡು ಅಚ್ಚರಿ ರೀತಿ ಮಾಯವಾಗಿವೆ. ಘಟನೆಯಲ್ಲಿ ಸಾಮ್ಯತೆ ಇದ್ದರೂ ಎರಡೂ ವಿಮಾನಗಳ ಕಣ್ಮರೆಯಲ್ಲಿ ಕೆಲವೊಂದು ವಿಚಾರಗಳು ಭಿನ್ನವಾಗಿವೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ವಿಮಾನದ ಬಗ್ಗೆ

  • ಏರ್‌ಏಷ್ಯಾವು ಕ್ಷಿಪ್ರ ಬೆಳವಣಿಗೆ ಹೊಂದುತ್ತಿದ್ದ, ಅಗ್ಗದ ದರದ ಉತ್ತಮ ವಿಮಾನವಾಗಿತ್ತು. ಇದು ಆಗ್ನೇಯ ಏಷ್ಯದಾದ್ಯಂತ ಸೇವೆ ನೀಡುತ್ತಿತ್ತು. ಈ ಕಂಪನಿಯ ಎಲ್ಲ 80 ವಿಮಾನಗಳೂ 5 ವರ್ಷದ ಕೆಳಗಷ್ಟೇ ತಯಾರಾದವು.
  • ಇದು ಸಿಂಗಲ್ ಏಸಲ್ ಏರ್‌ಬಸ್ ಎ320-200 ಆಗಿದ್ದು 2008ರಲ್ಲಿ ನಿರ್ಮಾಣವಾದದ್ದು. ಏರ್‌ಬಸ್ ಎ320 ಸರಣಿ ಜೆಟ್‌ಗಳ ಆಪರೇಟರ್‌ಗಳಲ್ಲಿ ಏರ್ ಏಷ್ಯಾವೂ ಒಂದು.
  • ಏರ್ ಏಷ್ಯಾದ ಸುರಕ್ಷಣಾ ದಾಖಲೆಗಳಲ್ಲಿ ಒಂದೇ ಒಂದು ತೊಡಕಾಗಿಲ್ಲ.
ಹವಾಮಾನ
  • ವಿಮಾನ ಹಾರಾಡುವ ವೇಳೆ ಮೋಡ ಕವಿದಿತ್ತು. ಜತೆಗೆ, ಭಾರಿ ಮಿಂಚುಗಳು ಬಡಿಯುತ್ತಿದ್ದವು. ಹವಾಮಾನವು ಪ್ರತಿಕೂಲವಾತಿತ್ತು.
  • ಏರ್‌ಏಷ್ಯಾ ಪೈಲಟ್‌ನಿಂದಾಗಲೀ, ಸಿಬ್ಬಂದಿಯಿಂದಾಗಲೀ ಅಪಾಯದ ಸೂಚನೆ ಬಂದಿರಲಿಲ್ಲ. ಆದರೆ, ಜಕಾರ್ತಾದ ಏರ್ ಟ್ರಾಫಿಕ್ ಕಂಟ್ರೋಲರ್ ಜತೆ ಸಂಪರ್ಕ ಸಾಧಿಸಿದ್ದ ಪೈಲಟ್, ಪ್ರತಿಕೂಲ ಹವಾಮಾನದ ಬಗ್ಗೆ ವಿವರಿಸಿದ್ದು, ತಮ್ಮ ವಿಮಾನದ ಎತ್ತರವನ್ನು 32 ಸಾವಿರದಿಂದ 38 ಸಾವಿರ ಅಡಿಗೆ ಎತ್ತರಿಸಲು ಅವಕಾಶ ನೀಡುವಂತೆ ಕೋರಿದ್ದರು. ಹಾಗಾಗಿ ವಿಮಾನ ಕಣ್ಮರೆಯಾಗಲು ಪ್ರತಿಕೂಲ ಹವಾಮಾನವೇ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವಿಮಾನದ ಬಗ್ಗೆ
  • ಈ ವಿಮಾನವು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದ ಸರ್ಕಾರಿ ಸ್ವಾಮ್ಯದ ವಿಮಾನವಾಗಿತ್ತು.
  • ಎಂಎಚ್370 ವಿಮಾನವು ಬೋಯಿಂಗ್ 777-200 ಆಗಿದ್ದು, 2002ರಲ್ಲಿ ನಿರ್ಮಾಣವಾದದ್ದು.
ಹವಾಮಾನ
  • ಎಂಎಚ್ 370 ವಿಮಾನ ಕಣ್ಮರೆಯಾದಾಗ ಆಗಸವು ತಿಳಿಯಾಗಿತ್ತು. ಆ ಸಮಯದಲ್ಲಿ ಯಾವುದೇ ಪ್ರತಿಕೂಲ ಹವಾಮಾನ ಇರಲಿಲ್ಲ.
  • ವಿಮಾನದ ಪೈಲಟ್‌ನಿಂದಾಗಲೀ, ಸಿಬ್ಬಂದಿಯಿಂದಾಗಲೀ ಯಾವುದೇ ಅಪಾಯದ ಸೂಚನೆ ಬಂದಿರಲಿಲ್ಲ. ಜತೆಗೆ, ವಿಮಾನವು ವಿಯೆಟ್ನಾಂ ವಾಯುಗಡಿಯತ್ತ ಚಲಿಸುತ್ತಿದ್ದಂತೆ ನಿಯಂತ್ರಮಾ ಕೊಠಡಿಗೆ ಪೈಲಟ್, 'ಶುಭ ರಾತ್ರಿ' ಎಂಬ ಸಂದೇಶ ಕಳುಹಿಸಿದ್ದರು. ಹಾಗಾಗಿ ವಿಮಾನ ಯಾವುದೇ ಅಪಾಯಕ್ಕೆ ಸಿಲುಕ್ಕಿದ್ದ ಸುಳಿವೇ ಸಿಗಲಿಲ್ಲ.
ಸಂವಹನ
ಪೈಲಟ್‌ಗಳು
ಸಂವಹನ
ಪೈಲಟ್‌ಗಳು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT