ರಕ್ಷಾ ಬಂಧನ 
ವಿಶೇಷ

ರಕ್ಷಾ ಬಂಧನ ಉಡುಗೊರೆ: ಕಳೆದುಹೋದ ತಂಗಿ ವಾಪಸ್ ಬಂದು ರಾಖಿ ಕಟ್ಟಿದಳು!

ಕಳೆದು ಹೋಗಿದ್ದ ಸಹೋದರಿ ಐದು ವರ್ಷಗಳ ಬಳಿಕ ಬಂದು ರಾಖಿ ಕಟ್ಟಿದಾಗ ಅಣ್ಣನಿಗೆ ಆಗುವ ಖುಷಿ, ಸಂಭ್ರಮ ಅಷ್ಟಿಟ್ಟಲ್ಲ. ಇಂತ ಅದ್ಭುತ ಘಟನೆ ಜೈಪುರದಲ್ಲಿ ನಡೆದಿದೆ...

ಜೈಪುರ: ಕಳೆದು ಹೋಗಿದ್ದ ಸಹೋದರಿ ಐದು ವರ್ಷಗಳ ಬಳಿಕ ಬಂದು ರಾಖಿ ಕಟ್ಟಿದಾಗ ಅಣ್ಣನಿಗೆ ಆಗುವ ಖುಷಿ, ಸಂಭ್ರಮ ಅಷ್ಟಿಟ್ಟಲ್ಲ. ಇಂತ ಅದ್ಭುತ ಘಟನೆ ಜೈಪುರದಲ್ಲಿ ನಡೆದಿದೆ.

ಅಣ್ಣ ಮಹೇಶ್ ನಿಗೆ ಐದು ವರ್ಷಗಳ ಹಿಂದೆ ಕಳೆದು ಹೋಗಿದ್ದ ಸಹೋದರಿ ಮಮತಾ ಪವಿತ್ರ ರಕ್ಷಾ ಬಂಧನದ ಈ ದಿನದಂದೆ ಅತ್ಯಾಶ್ಚರ್ಯದ ಉಡುಗೊರೆ ಎಂಬಂತೆ ಕಳೆದುಹೋದ ಸಹೋದರಿ ಸಿಕ್ಕಿದ್ದಾಳೆ. ಆತನಿಗೆ ರಕ್ಷಾಬಂಧನ ಕಟ್ಟಿ ಸಂಭ್ರಮಿಸಿದ್ದಾಳೆ. ಅಂತೆಯೇ ಆತನಿಗೆ ಪಾಲಿಗೆ ಇಂದು ಸುದಿನವಾಗಿದೆ.

ಐದು ವರ್ಷಗಳ ಹಿಂದೆ ಬಾಲಕಿ ಮಮತಾಳನ್ನು ಯಾರೋ ಅಪಹರಿಸಿ ಬಲವಂತದಿಂದ ಆಕೆಯನ್ನು ಭಿಕ್ಷಾಟನೆಗೆ ಬಳಸಿಕೊಂಡಿದ್ದರು. ಈ ತಿಂಗಳ ಆದಿಯಲ್ಲಿ ಮಮತಾಳನ್ನು ಇತರ ಮೂರು ಮಕ್ಕಳೊಂದಿಗೆ ಪಾರುಗೊಳಿಸಲಾಗಿತ್ತು ಮತ್ತು ಅವರಿಗೆ ಅಜ್‌ಮೇರ್‌ನ ಬಾಲನಿಕೇತನದಲ್ಲಿ ಆಸರೆ ಕಲ್ಪಿಸಲಾಗಿತ್ತು. ಮನೆಯವರು ಕೊಟ್ಟ ಗುರುತು, ವಿವರ ಇತ್ಯಾದಿಗಳನ್ನು ಪರಾಮರ್ಶಿಸಿ ಶಿಶು ಕಲ್ಯಾಣ ಸಮಿತಿ ಸದಸ್ಯರು ಮಮತಾಳನ್ನು ಆಕೆಯ ಮನೆಯವರಿಗೆ ಹಸ್ತಾಂತರಿಸಿದರು.

2010ರ ಮಾರ್ಚ್‌ 30ರಂದು ನಾಗೋರ್‌ ಜಿಲ್ಲೆಯ ನವನಗರದಲ್ಲಿ ನಡೆದಿದ್ದ ಜಾತ್ರೆಯ ಸಂದರ್ಭದಲ್ಲಿ ಮಮತಾ ಅಪಹರಣವಾಗಿತ್ತು. ಮಮತಾಳ ತಂದೆ ವೃತ್ತಿಯಲ್ಲಿ ಚಮಗಾರ. ಈಗ ಆತ ಜೀವಂತವಿಲ್ಲ. ಮಮತಾ ಕಳೆದು ಹೋದ ಬಳಿಕ ಆಕೆಯ ಮನೆಯವರೆಲ್ಲ ಬಹಳವಾಗಿ ಆಕೆಯನ್ನು ಹುಡುಕಾಡಿದರೂ ಪ್ರಯೋಜನವಾಗಿರಲಿಲ್ಲ. ಹಾಗಾಗಿ ಅವರು 2010ರ ಮಾರ್ಚ್‌ 30ರಂದು ಮಮತಾ ಕಳೆದು ಹೋದಳೆಂದು ಪೊಲೀಸರಿಗೆ ದೂರು ನೀಡಿದರು.

ಆದರೆ ಒಂದು ತಿಂಗಳ ಬಳಿಕ ಮಮತಾ ಬಲೂನು ಮಾರುವವನೊಬ್ಬನ ವಶದಲ್ಲಿ ಇರುವುದನ್ನು ಯಾರೋ ಕಂಡು ಮಾಹಿತಿ ನೀಡಿದರು. ಆದರೆ ಆ ಬಲೂನು ಮಾರುವವನೇ ಅನಂತರ ನಾಪತ್ತೆಯಾದ. ಇದನ್ನು ಅನುಸರಿಸಿ 2010ರ ಏಪ್ರಿಲ್‌ 11ರಂದು ಮಮತಾ ಅಪಹರಣವಾಗಿರುವ ಬಗ್ಗೆ ದೂರು ದಾಖಲಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

SCROLL FOR NEXT