ವಿವೇಕ್ ಶಾನಭಾಗ್ (ಸಂಗ್ರಹ ಚಿತ್ರ) 
ವಿಶೇಷ

'ಊರು ಭಂಗ' ಕೃತಿ ಬಿಡುಗಡೆ, ಬರೆದ ಮೇಲೆ ಎಲ್ಲವೂ ಸ್ವ-ಅನುಭವವೇ ಎಂದ ವಿವೇಕ್

ಕನ್ನಡದ ಪ್ರಮುಖ ಕಥೆಗಾರ ವಿವೇಕ್ ಶಾನಭಾಗ್ ಅವರ ಮೂರನೆ ಕಾದಂಬರಿ 'ಊರು ಭಂಗ' ಕೃತಿಯನ್ನು ಕಥೆಗಾರ

ಬೆಂಗಳೂರು: ಕನ್ನಡದ ಪ್ರಮುಖ ಕಥೆಗಾರ ವಿವೇಕ್ ಶಾನಭಾಗ್ ಅವರ ಮೂರನೆ ಕಾದಂಬರಿ 'ಊರು ಭಂಗ' ಕಾದಂಬರಿಯನ್ನು ಕಥೆಗಾರ, ಗೀತ ರಚನಕಾರ ಜಯಂತ ಕಾಯ್ಕಿಣಿ ನಗರದ ಇಂಡಿಯನ್ ಇನ್ಷ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಭಾನುವಾರ ಅನಾವರಣಗೊಳಿಸಿದರು.


ನಂತರ ನಡೆದ ಜಯಂತ ಕಾಯ್ಕಿಣಿ ಅವರೊಂದಿಗಿನ ಸಂವಾದದಲ್ಲಿ, ವಿವೇಕ್ ಶಾನಭಾಗ್ ತಮ್ಮ ಬರವಣಿಗೆಯ ಗುಟ್ಟುಗಳನ್ನು ಬಿಚ್ಚಿಟ್ಟರು. ತಮ್ಮ ಕಥೆ ಮತ್ತು ಕಾದಂಬರಿಗಳಲ್ಲಿ ಬರೆಯುವ ಸಂಗತಿಗಳು ತಮ್ಮ ಅನುಭವದ ಭಾಗವೇ ಎಂಬ ಪ್ರಶ್ನೆಗೆ, ತಾವು ಕಥೆ ಅಥವಾ ಕಾದಂಬರಿಯಲ್ಲಿ ಬರೆದ ಮೇಲೆ ಎಲ್ಲವೂ ನನ್ನ ಅನುಭವಕ್ಕೆ ಬಂದಂತೆಯೇ ಎಂಬ ಜಾಣ್ಮೆಯ ಉತ್ತರ ನೀಡಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿ ಕಾದಂಬರಿ ಮತ್ತು ಕಥೆ ಬರೆಯುವ ಕ್ರಿಯೆಯಲ್ಲಿನ ವ್ಯತ್ಯಾಸಗಳನ್ನು ವಿವರಿಸಿದ ವಿವೇಕ್, ಕಥೆಯಲ್ಲಿ ಹೇಳಲಾಗದ ಎಷ್ಟೋ ಸಂಗತಿಗಳನ್ನು ಕಾದಂಬರಿಗಳಲ್ಲಿ ಹೇಳಬಹುದು ಎಂದರು. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಉದಾಹರಣೆ ತೆಗೆದುಕೊಂಡು, ಕಾಡು ಒಂದು ಪಾತ್ರವಾಗಬಹುದಾದರೆ ಅದು ಕಾದಂಬರಿಯಲ್ಲಿ ಮಾತ್ರವೇ, ಕಥೆಯಲ್ಲಿ ಅದು ಅಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಕವಯತ್ರಿ ಪ್ರತಿಭಾ ನಂದಕುಮಾರ್ ಕಾದಂಬರಿಯ ಆಯ್ದ ಭಾಗಗಳನ್ನು ವಾಚಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT