ಆಧ್ಯಾತ್ಮಿಕ ನಾಯಕ ಶ್ರೀ ಎಂ 
ವಿಶೇಷ

ಮುಸ್ಲಿಂನಾಗಿ ಹುಟ್ಟಿದ್ರು, ಹಿಂದೂ ಧರ್ಮಗ್ರಂಥಗಳನ್ನೋದಿ ಯೋಗಿಯಾದ್ರು!

ಇತ್ತೀಚಿನ ದಿನಗಳಲ್ಲಿ ಅಂಧ ಧರ್ಮ ಪರಿಪಾಲನೆ ಹೆಚ್ಚುತ್ತಿದೆ. ವಿಶಾಲ ಮನೋಭಾವದ ಸ್ಥಿಮಿತ ಕಳೆದುಕೊಂಡು ತಾವೇ ಶ್ರೇಷ್ಠ ಎಂಬ ಪ್ರಜ್ಞೆಯಿಂದ ಹೊರ ಬಂದು ತತ್ವಜ್ಞಾನಿ...

ಇತ್ತೀಚಿನ ದಿನಗಳಲ್ಲಿ ಅಂಧ ಧರ್ಮ ಪರಿಪಾಲನೆ ಹೆಚ್ಚುತ್ತಿದೆ. ವಿಶಾಲ ಮನೋಭಾವದ ಸ್ಥಿಮಿತ ಕಳೆದುಕೊಂಡು ತಾವೇ ಶ್ರೇಷ್ಠ ಎಂಬ ಪ್ರಜ್ಞೆಯಿಂದ ಹೊರ ಬಂದು ತತ್ವಜ್ಞಾನಿ, ಆಧ್ಯಾತ್ಮಿಕ ನಾಯಕ ಶ್ರೀ ಎಂ ಎಂದೇ ಖ್ಯಾತರಾಗಿರುವ ಮುಮ್ತಾಜ್ ಅಲಿ ಅವರ ದಾರಿ ನಿರಂತರವಾದದ್ದು...

ಮುಸ್ಲಿಂರ ಪವಿತ್ರ ಗ್ರಂಥ ಕುರಾನ್ ಹಾಗೂ ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆ ಎರಡನ್ನು ಪಠಿಸಿರುವ ಅವರು, ಆಧ್ಯಾತ್ಮಿಕ ಚಿಂತನೆಗಳನ್ನು ತಮ್ಮ ಜೀವನದ ಆಸು ಹೊಕ್ಕಾಗಿ ಮಾಡಿಕೊಂಡು ದಾರ್ಶನಿಕ ದಾರಿಯಲ್ಲಿ ನಡೆಯುತ್ತಿದ್ದಾರೆ.

ನಾನು ಮುಸ್ಲಿಂನಲ್ಲ, ಹಿಂದೂನಲ್ಲ ನಾನೊಬ್ಬ ಮನುಷ್ಯ ಎಂಬ ಮನೋಭಾವ ಅವರದ್ದು, ಇದೇ ಉದ್ದೇಶದೊಂದಿಗೆ ಜನತೆಯಲ್ಲಿ ಜಾಗತಿ ಮೂಡಿಸುವ ಕೆಲಸಕ್ಕಾಗಿ ಪಾದಯಾತ್ರೆ ಕೈಗೊಂಡಿರುವುದು ಎಲ್ಲರಿಗೂ ತಿಳಿದ ವಿಚಾರವೇ.. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಮಾಜ ಸುಧಾರಕ ಶ್ರೀ ಎಂ ಅವರು ಮಾನವ ಏಕತಾ ಮಿಷನ್ ಮೂಲಕ ಜನವರಿ 12 ರಿಂದ ಪಾದಯಾತ್ರೆ ಕೈ ಗೊಂಡಿದ್ದರು.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 15ರಿಂದ 18 ತಿಂಗಳ ಕಾಲ ದೇಶದ 11 ರಾಜ್ಯಗಳಲ್ಲಿ ಸುಮಾರು 6,500 ಕಿ.ಮೀ. ದೂರ ಪಾದಯಾತ್ರೆ ಕೈಗೊಂಡಿದ್ದಾರೆ. ಅದೇ ರೀತಿ ದಿನಕ್ಕೆ 25 ಕಿ.ಮೀ ಕ್ರಮಿಸುವ ಮೂಲಕ ಇಲ್ಲಿಯವರೆಗೂ 2,500 ಕಿ. ಮೀ ಕ್ರಮಿಸಿದ್ದು, ಇದೀಗ ಪುಣೆ ತಲುಪಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಮಾನವೀಯತೆಗಿಂತ ಯಾವುದೇ ಧರ್ಮ ದೊಡ್ಡದಲ್ಲ ಎಂದು ನಂಬಿರುವ ಅವರು ಜನತೆಯಲ್ಲಿ ಜಾಗತಿ ಮೂಡಿಸುವ ಉದ್ದೇಶ ಅವರದ್ದಾಗಿದೆ. ಅಲ್ಲದೆ ಅವರ ಪಾದಯಾತ್ರೆ ಕೊನೆಯಾಗುವ ಮುನ್ನ ಅಖಂಡ ಭಾರತವನ್ನು ಕಾಣುವ ಮಹಾದಾಸೆ ಅವರದ್ದಾಗಿದೆ.

ವಿವೇಕಾನಂದರ ಜನ್ಮ ಜಯಂತಿಯಂದು ಕನ್ಯಾಕುಮಾರಿಯ ಗಾಂಧಿ ಸ್ಮಾರಕದಿಂದ ಪಾದಯಾತ್ರೆ ಆರಂಭಿಸಿದ್ದರು. ಭಾರತದ ಹಲವಾರು ನಗರ, ಗ್ರಾಮಗಳನ್ನು ಸಂಚರಿಸಲಿದ್ದು ಜನತೆಯಲ್ಲಿ ಜಾಗತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಪಾದಯಾತ್ರೆ ಯಾವುದೇ ಒಂದು ಧರ್ಮ, ಕೋಮು, ಜಾತಿ, ಪಕ್ಷಕ್ಕೆ ಸೇರದ ಕಾರಣ ಎಲ್ಲ ವರ್ಗದ ಜನತೆ ಪಾದಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಬೆಂಬಲ ಸೂಚಿಸುತ್ತಿದ್ದಾರೆ. ಪಾದಯಾತ್ರೆಯಲ್ಲಿ ಭಾಗವಹಿಸುವರಿಗೆ ಶಾಂತಿ ಮತ್ತು ಪ್ರಗತಿ, ಸಂತೋಷ ಮತ್ತು ಸ್ವಾಸ್ಥ್ಯ ಇವುಗಳನ್ನು ಹೊರತು ಬೇರೆ ಯಾವುದೇ ಬೇಡಿಕೆಗಳಿಲ್ಲ. ಒಟ್ಟಿನಲ್ಲಿ ಜಾಗತಿ ಮೂಡಿಸಿ ಸಮಾಜದಲ್ಲಿ ಶಾಂತಿ ಮೂಡಿಸುವುದು ಪಾದಯಾತ್ರೆಯ ಉದ್ದೇಶವಾಗಿದೆ.

ಶ್ರೀ ಎಂ ಅವರು ಪರಸ್ಪರ ಸೌಹಾರ್ದತೆ, ಸರ್ವರಿಗೂ ಸಮಾನತೆ, ಸುಸ್ಥಿರ ಜೀವನ, ಮಹಿಳಾ ಸಬಲೀಕರಣ, ಸಮುದಾಯ ಆರೋಗ್ಯ, ಶಿಕ್ಷಣ ಮತ್ತು ಯುವಜನ ಅಭಿವದ್ಧಿಯ ಬಗ್ಗೆ ಜನತೆಯಲ್ಲಿ ಜಾಗತಿ ಮೂಡಿಸುವ ದೃಷ್ಟಿಯಿಂದ ಮುನ್ನಡೆಯುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಿರಿಯ ನಾಯಕರೊಂದಿಗಿನ ಚರ್ಚೆ ಬಳಿಕ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ: ದೆಹಲಿಗೆ ತೆರಳುವ ಮುನ್ನ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ

ಡಿಕೆಶಿ ಪರ ಒಕ್ಕಲಿಗ ಸ್ವಾಮೀಜಿ ಬ್ಯಾಟಿಂಗ್, ಸಿದ್ದರಾಮಯ್ಯ ಪರ ಅಖಾಡಕ್ಕಿಳಿದ 'ಕಾಗಿನೆಲೆ' ಸ್ವಾಮೀಜಿ!

ತಮಿಳು ನಾಡು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ TVK ಪಕ್ಷ ಸೇರಿದ ಸೆಂಗೊಟ್ಟೈಯನ್

ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನಿಸಿದರೆ ಡಿಕೆಶಿಯನ್ನು CM ಆಗಿ ಒಪ್ಪಿಕೊಳ್ಳುವೆ : ಕುರ್ಚಿ ಕದನಕ್ಕೆ ಪರಮೇಶ್ವರ್ ಟ್ವಿಸ್ಟ್

CM ಪಟ್ಟಕ್ಕಾಗಿ ಕಿತ್ತಾಟ: ಡಿಕೆಶಿಗೆ 'ಹೈಕಮಾಂಡ್' ಒಲವು ತೋರಿದ್ರೆ, ಸಿದ್ದರಾಮಯ್ಯರ ಮುಂದಿನ ಪ್ಲಾನ್ ಏನು?

SCROLL FOR NEXT