ಸೋಮವಾರ ಕೊನೆಯುಸಿರೆಳೆದ ೧೧೩ ವರ್ಷದ ಅಜ್ಜಿ ಕೃಷ್ಣಮ್ಮಾಲ್ 
ವಿಶೇಷ

೧೧೩ ವರ್ಷದ ಅಜ್ಜಿಯ ಅಂತ್ಯಸಂಸ್ಕಾರಕ್ಕೆ ೧೦೦ ಕ್ಕೂ ಹೆಚ್ಚು ಮೊಮ್ಮಕ್ಕಳು, ಮುಮ್ಮಕ್ಕಳು, ಮರಿಮಕ್ಕಳು

೧೧೩ ವರ್ಷದ ಕೃಷ್ಣಮ್ಮಾಲ್ ಅಜ್ಜಿ ಸೋಮವಾರ ಧರ್ಮಪುರಿಯಲ್ಲಿ ಕೊನೆಯುಸಿರೆಳೆದಿದ್ದು ಅವರ ಅಂತ್ಯಸಂಸ್ಕಾರಕ್ಕೆ ತಮ್ಮ ಪೀಳಿಗೆಯ ಮೊಮ್ಮಕ್ಕಳು, ಮುಮ್ಮಕ್ಕಳು,

ಧರ್ಮಪುರಿ: ೧೧೩ ವರ್ಷದ ಕೃಷ್ಣಮ್ಮಾಲ್ ಅಜ್ಜಿ ಸೋಮವಾರ ಧರ್ಮಪುರಿಯಲ್ಲಿ ಕೊನೆಯುಸಿರೆಳೆದಿದ್ದು ಅವರ ಅಂತ್ಯಸಂಸ್ಕಾರಕ್ಕೆ ತಮ್ಮ ಪೀಳಿಗೆಯ ಮೊಮ್ಮಕ್ಕಳು, ಮುಮ್ಮಕ್ಕಳು, ಮರಿಮಕ್ಕಳೆಲ್ಲ ಸಂತತಿಯೇ ೧೦೦ ಹೆಚ್ಚು ಜನ ಸೇರಿದ್ದರು.

೧೯೦೨ ಮೇ ೨೬ ರಂದು ಜನಿಸಿದ ಈ ಮಹಾತಾಯಿ ತಮ್ಮ ಐದು ಪೀಳಿಗೆಯೆ ಸಂತತಿ ಆರೋಗ್ಯಕರ ಜೀವನ ನಡೆಸುವುದನ್ನು ಕಣ್ಣಾರೆ ಕಂಡಿದ್ದಾರಂತೆ. ಮೂರು ವರ್ಷಗಳ  ಹಿಂದೆಯಷ್ಟೇ ಅಜ್ಜಿಯ 110 ನೇ ಹುಟ್ಟುಹಬ್ಬ ಆಚರಿಸಲು ಕುಟುಂಬವೆಲ್ಲ ಒಟ್ಟಿಗೆ ಸೇರಿತ್ತು.

ಅವರ ಮೊಮ್ಮಕ್ಕಳಲ್ಲಿ ಒಬ್ಬರಾದ ವೆಂಹಟಾಚಲಮ್ (೬೫), ನಿವೃತ್ತ ಸರ್ಕಾರಿ ನೌಕರ ಹೇಳುವಂತೆ "ಕೃಷ್ಣಮ್ಮಾಲ್ ಅವರು ಸೇಲಮ್ ಜಿಲ್ಲೆಯ ಸವುರಿಯೂರ್ ನಲ್ಲಿ ಜನಿಸಿದ್ದು. ಅವರು ಧರ್ಮಪುರಿಯ ಮುನ್ನುಸಾಮಿ ಅವರನ್ನು ಮದುವೆಯಾದರು. ಅವರ ಮಗಳು ಸರಸ್ವತಿ ನನ್ನ ತಾಯಿ. ಹೀಗೆ ನಮ್ಮ ಪೀಳಿಗೆ ಜನ್ಮ ತಳೆದದ್ದು"

"ಅವರು ಒಳ್ಳೆಯ ಜೀವನ ಶೈಲಿ ಮತ್ತು ಆಹಾರದಿಂದ ಸುಧೀರ್ಘ ಆರೋಗ್ಯಕರ ಜೀವನ ನಡೆಸಿದರು. ಅವರಿಗೆ ಯಾವುದೇ ರೋಗ ಇರಲಿಲ್ಲ. ಕನಿಷ್ಠ ಜ್ವರ ಅಥವಾ ತಲೆನೋವೂ ಕೂಡ ಅವರಿಗೆ ಬಂದಿರಲಿಲ್ಲ. ನಮ್ಮ ತಂದೆ ಕೂಡ ೮೪ ವರ್ಷ ಬದುಕಿದ್ದರು" ಎಂದು ವಿವರಿಸುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT