ಸಾಂದರ್ಭಿಕ ಚಿತ್ರ 
ವಿಶೇಷ

ತಮಿಳುನಾಡಿನ ಈ ಗ್ರಾಮದಲ್ಲಿ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ

ಇವಿಆರ್ ಪೆರಿಯಾರ್ ಅವರ ತತ್ವಗಳಿಂದ ಪ್ರೇರಿತರಾದ ಸಂಘಟನೆಯೊಂದರ ಸದಸ್ಯರು ಅಂತರ್ಜಾತಿ ಜೋಡಿಯ ವಿವಾಹ ನೆರವೇರಿಸಿದ ಘಟನೆ ಪೊಲ್ಲಚಿಯ...

ಕೊಯಂಬತ್ತೂರು: ಇವಿಆರ್ ಪೆರಿಯಾರ್ ಅವರ ತತ್ವಗಳಿಂದ ಪ್ರೇರಿತರಾದ ಸಂಘಟನೆಯೊಂದರ ಸದಸ್ಯರು ಅಂತರ್ಜಾತಿ ಜೋಡಿಯ ವಿವಾಹ ನೆರವೇರಿಸಿದ ಘಟನೆ ಪೊಲ್ಲಚಿಯ ಕಲಿಯಪ್ಪಫೌಂದೆನ್ಪುದುರಿನಲ್ಲಿ ನಡೆದಿದೆ.

ಪೆರಿಯರ್ ದ್ರಾವಿಡ ಕಜ್ಹಗಮ್ ಸಂಘಟನೆಯ ಸ್ಥಾಪಕ ಕೆ.ಎಸ್.ನಾಗರಾಜನ್ ಮತ್ತು ಸ್ಥಳೀಯರು ಹೇಳುವ ಪ್ರಕಾರ, ಜಾತಿ ತಾರತಮ್ಯದ ವಿರುದ್ಧ ಇಡೀ ಗ್ರಾಮಸ್ಥರು ಹೋರಾಟಕ್ಕಿಳಿದಿದ್ದಾರೆ. ಪ್ರಸ್ತುತ ಗ್ರಾಮದ 300 ಕುಟುಂಬಗಳಲ್ಲಿ 20 ಮಂದಿ ತಮ್ಮ ಜಾತಿಯವರನ್ನು ಬಿಟ್ಟು ಬೇರೆ ಜಾತಿಯವರನ್ನು ಮದುವೆಯಾಗಿದ್ದಾರೆ. ಕೆಲವೊಮ್ಮೆ ಮನೆಯವರ ವಿರೋಧದಿಂದ ಓಡಿ ಹೋಗುವ ಜೋಡಿಗಳು ಈ ಗ್ರಾಮದಲ್ಲಿ ಆಶ್ರಯ ಪಡೆಯುತ್ತಾರಂತೆ.

ಮೊನ್ನೆ ಶನಿವಾರ ಸ್ಟಾಲಿನ್ ಮತ್ತು ಕೃತಿಕಾ ಎಂಬ ಅಂತರ್ಜಾತಿ ಜೋಡಿಗಳು ಸುಮಾರು 400 ಅತಿಥಿಗಳ ಸಮ್ಮುಖದಲ್ಲಿ ಮದುವೆಯಾದರು. ಕೃತಿಕಾ ಮತ್ತು ಸ್ಟಾಲಿನ್ ಅವರ ಪೋಷಕರು ವಧೂ ವರರ ಹುಡುಕಾಟ ನಡೆಸುತ್ತಿದ್ದರಂತೆ. ಆಗ ಸಂಘಟನೆಯ ಕಾರ್ಯಕರ್ತರು ಪೋಷಕರನ್ನು ಭೇಟಿ ಮಾಡಿ ಬೇರೆ ಜಾತಿಯೊಳಗೆ ಮದುವೆ ಮಾಡಿಸುವಂತೆ ಮನವಿ ಮಾಡಿಕೊಂಡರಂತೆ.

ನಾಗರಾಜನ್ ಮತ್ತು ಅವರ ತಂಡದ ಸದಸ್ಯರು ಕಳೆದ 15 ವರ್ಷಗಳಿಂದ ಜಾತಿ ತಾರತಮ್ಯವನ್ನು ಹೋಗಲಾಡಿಸಲು ಅಂತರ್ಜಾತಿ ವಿವಾಹದ ಬಗ್ಗೆ ಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ. ನಾವು ಪೂಂಚೋಲೈ ಎಂಬ ಸಾಮಾಜಿಕ ಅಭಿವೃದ್ಧಿ ಸಂಘಟನೆಯನ್ನು ನಡೆಸುತ್ತಿದ್ದು ಅದು ಬಾಲಕಿಯರ ಶಿಕ್ಷಣಕ್ಕೆ ಉತ್ತೇಜನ ಮತ್ತು ಜಾತಿ ತಾರತಮ್ಯದ ವಿರುದ್ಧ ಹೋರಾಡುವ ಕೆಲಸದಲ್ಲಿ ನಿರತವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT