1987 ರಿಂದಲೂ ಆರತಿ, ಪೂಜೆ ಮಾಡುತ್ತಿರುವ ರೋಬೋಟ್!: ರೊಬೋಟಿಕ್ಸ್ ಶಬ್ದ ಹೊಸದಾಗಿದ್ದಾಗ ತಯಾರಾಗಿದ್ದ ಯಂತ್ರ! 
ವಿಶೇಷ

1987 ರಲ್ಲೇ ರೊಬೋಟ್ ಆರತಿ, ಪೂಜೆ: ರೊಬೋಟಿಕ್ಸ್ ಪರಿಕಲ್ಪನೆ ಹೊಸದಾಗಿದ್ದಾಗಲೇ ತಯಾಗಿತ್ತು ಯಂತ್ರ!

ದೇವರ ಪೂಜೆಗೂ ರೋಬೋಟ್ ಗಳನ್ನು ಬಳಕೆ ಮಾಡುವುದು ಇಂದಿನ ಯಾಂತ್ರಿಕ ಯುಗದಲ್ಲಿ ಅಚ್ಚರಿ ಎಂದೇನು ಅನಿಸುವುದಿಲ್ಲ. ಇಂತಹ ಪರಿಕಲ್ಪನೆಯನ್ನು ರೊಬೋಟಿಕ್ಸ್ ಶಬ್ದವೇ ಹೊಸದಾಗಿದ್ದಾಗ ಜಾರಿಗೆ

ತಿರುವನಂತಪುರಂ: ದೇವರ ಪೂಜೆಗೂ ರೋಬೋಟ್ ಗಳನ್ನು ಬಳಕೆ ಮಾಡುವುದು ಇಂದಿನ ಯಾಂತ್ರಿಕ ಯುಗದಲ್ಲಿ ಅಚ್ಚರಿ ಎಂದೇನು ಅನಿಸುವುದಿಲ್ಲ. ಇಂತಹ ಪರಿಕಲ್ಪನೆಯನ್ನು ರೊಬೋಟಿಕ್ಸ್ ಶಬ್ದವೇ ಹೊಸದಾಗಿದ್ದಾಗ ಜಾರಿಗೆ ತಂದಿದ್ದವರ ಯಶೋಗಾಥೆ  ಮಾತ್ರ ಅಚ್ಚರಿಯದ್ದೇ ಸರಿ. 
ವಿಎಸ್ ಸಾಬು 1987 ರಲ್ಲೇ ದೇವರಿಗೆ ಆರತಿ, ಪೂಜೆ ಮಾಡುವ ರೊಬೋಟ್ ನ್ನು ತಯಾರಿಸಿದ್ದರು. ಈ ಯಂತ್ರವನ್ನು ತಯಾರಿಸಿ 32 ವರ್ಷಗಳೇ ಕಳೆದಿದ್ದರೂ ಅಯ್ಯಪ್ಪ ವಿಗ್ರಹಕ್ಕೆ ಆರತಿ, ಪೂಜೆ ಮಾಡುವ ಮೂಲಕ ಈಗಲೂ ಕಾರ್ಯನಿರ್ವಹಿಸುತ್ತಿದೆ. 
ವಿಎಸ್ ಸಾಬು ತಯಾರಿಸಿದ ರೋಬೋಟ್, ದೇಶದಲ್ಲಿ ಮೊದಲ ಸ್ವಾಯತ್ತ ರೋಬೋಟ್ ಆಗಿದ್ದು, ಶೈಕ್ಷಣಿಕ ಉದ್ದೇಶಕ್ಕಾಗಿ ಸಂಶೋಧನಾ ಮತ್ತು ಅಭಿವೃದ್ಧಿ ಪ್ರಯೋಗಾಲಯದಲ್ಲಿ ನಿರ್ಮಾಣಗೊಂಡಿತ್ತು. ಈ ಆವಿಷ್ಕಾರವನ್ನು ಸ್ವತಃ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ಕಚೇರಿ ಹಾಗೂ ಕೇರಳದ ತಾಂತ್ರಿಕ ಶಿಕ್ಷಣ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿತ್ತು. 
"ಈ ರೋಬೋಟ್ ನ್ನು ಧಾರ್ಮಿಕ ಬಳಕೆಗಾಗಿ, ವಾಣಿಜ್ಯ ಉದ್ದೇಶಗಳಿಗೆ ಬಳಸುವ ಯೋಚನೆ ನನಗೆ ಇರಲಿಲ್ಲ. ಆದರೆ ಈ ರೋಬೋಟ್, ಆರತಿ, ದೇವರ ವಿಗ್ರಹಕ್ಕೆ ಹಾರ ಹಾಕುವುದು ಸೇರಿದಂತೆ ಬಹುತೇಕ ಕೆಲಸಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ" ಎನ್ನುತ್ತಾರೆ ಎಲೆಕ್ಟಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಮಾಡಿರುವ ವಿಎಸ್ ಸಾಬು.  
ಸುಮಾರು 40 ಕೆ. ಜಿ ತೂಕವಿರುವ ಈ ರೋಬೋಟ್ ನ್ನು ಸ್ಕ್ರ್ಯಾಪ್ ಹಾಗೂ ಇತರ ವಸ್ತುಗಳನ್ನು ಬಳಸಿ ತಯಾರಿಸಲಾಗಿದ್ದು, 8-ಬಿಟ್ ಮೈಕ್ರೋ ಪ್ರೊಸೆಸರ್, 5 ಮೋಟರ್ ಗಳನ್ನು ಬಳಕೆ ಮಾಡಲಾಗಿದೆ. ಈ ರೋಬೋಟ್ ನ್ನು ಮ್ಯಾನುಯಲ್‌ ಆಗಿಯೂ ನಿಯಂತ್ರಿಸಬಹುದಾಗಿದೆ. 150 ವ್ಯಾಟ್ ಗಳಷ್ಟು ವಿದ್ಯುತ್ ಶಕ್ತಿಯಿಂದ ಚಾಲನೆ ಮಾಡಬಹುದಾದ ರೊಬೋಟ್ ಶೇ.98 ರಷ್ಟು ನಿಖರತೆ ಹೊಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT