ಸಾಂದರ್ಭಿಕ ಚಿತ್ರ 
ವಿಶೇಷ

ಭಾರತದಲ್ಲಿ ಇದೇ ಮೊದಲು: 3 ವರ್ಷದ ಮಗುವಿನ ದೇಹದಾನ ಮಾಡಿ ಮಾನವೀಯತೆ ಮೆರೆದ ಪೋಷಕರು!

ಅಂಗಾಂಗ ದಾನ ಮಾಡುವುದು ದೇಶದಲ್ಲಿ ಇತ್ತೀಚೆಗೆ ಎಲ್ಲೆಡೆ ಸ್ಪೂರ್ತಿಯಾಗಿದೆ, ಇದರಿಂದ ಎಲ್ಲಾ ಕಡೆ ಹಲವು ಮಂದಿ ಅಂಗಾಂಗ ದಾನ ಮಾಡುತ್ತಿದ್ದಾರೆ, ಆದರೆ ಇಲ್ಲೊಂದು ವಿಶಿಷ್ಟವಾದ ಪ್ರಕರಣ ನಡೆದಿದೆ,..

ಜೈಪುರ: ಅಂಗಾಂಗ ದಾನ ಮಾಡುವುದು ದೇಶದಲ್ಲಿ ಇತ್ತೀಚೆಗೆ ಎಲ್ಲೆಡೆ ಸ್ಪೂರ್ತಿಯಾಗಿದೆ, ಇದರಿಂದ ಎಲ್ಲಾ ಕಡೆ  ಹಲವು ಮಂದಿ ಅಂಗಾಂಗ ದಾನ ಮಾಡುತ್ತಿದ್ದಾರೆ, ಆದರೆ ಇಲ್ಲೊಂದು ವಿಶಿಷ್ಟವಾದ ಪ್ರಕರಣ ನಡೆದಿದೆ,
ಹುಟ್ಟಿನಿಂದಲೇ ಹೃದಯ ರೋಗದಿಂದ ಮೂರು ವರ್ಷದ ಹೆಣ್ಣು ಮಗು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿತ್ತು, ಆದರೆ ಆ ಮಗುವಿನ ಪೋಷಕರು ಮಗುವಿನ ದೇಹವನ್ನು ಮಣ್ಣು ಮಾಡದೇ ಮಗುವಿನ ದೇಹವನ್ನು ದಾನ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿ ಮಾದರಿಯಾಗಿದ್ದಾರೆ.
ಮೂರು ವರ್ಷದ ಬಾಲಕಿಯ ದೇಹವನ್ನು ಜೋಧ್ ಪುರ ಏಮ್ಸ್ ಗೆ ದಾನ ಮಾಡಲಾಗಿದೆ, ಇಷ್ಟು ಚತಿಕ್ಕ ವಯಸ್ಸಿನ ದೇಹದಾನ ಮಾಡಿರುವುದು ಇದೇ ಮೋದಲು ಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ, 
ಜೋಧ್ ಪುರ್ ರೋಡ್ ವೇಸ್ ಇಲಾಖೆಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿರುವ ಉಮೇದ್ ಸಿಂಗ್ ಮಗಳು ಜ್ಯೋತಿ ದೇಹವನ್ನು ದಾನ ಮಾಡಲಾಗಿದೆ, ಮೊದಲು ಆಕೆಯ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದೆವು, ಆದರೆ ಅದು ಸಾಧ್ಯವಾಗದು ಎಂದು ತಿಳಿದಾಗ ದೇಹದಾನ ಮಾಡಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ.
ನನ್ನ ಮಗಳ ದೇಹ ಇಡೀ ದೇಶಕ್ಕೆ ಉಪಯೋಗವಾಗುತ್ತದೆ ಎಂಬುದನ್ನು ತಿಳಿದಾಗ ನನ್ನ ಹೃದಯ ತುಂಬಿ ಬಂತು. ನಾವು ಯಾವಾಗಲು ಅವಳನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದೆವು, ಹೀಗಾಗಿ ನನ್ನ ಹೆಂಡತಿ ಜೊತೆ ಮಾತನಾಡಿ ಆಕೆಯನ್ನು ಒಪ್ಪಿಸಿ ಅಂಗಾಂಗ ದಾನ ಮಾಡಲು ನಿರ್ಧರಿಸಿದೆವು.
ಅದಕ್ಕಾಗಿ ಆಕೆಯ ದೇಹವನ್ನು ಜೋಧ್ ಪುರ ಆಸ್ಪತ್ರೆಗೆ ತಂದೆವು, ಆದರೆ ಅಂಗಾಂಗ ದಾನ ಮಾಡುವ ಸೌಲಭ್ಯ ಇಲ್ಲ ಎಂದು ವೈದ್ಯರು ಹೇಳಿದರು, ಹೀಗಾಗಿ ದೇಹದಾನ ಮಾಡಿದೆವು ಎಂದು ಹೇಳಿದ್ದಾರೆ.
ಜ್ಯೋತಿಯನ್ನು ಉಳಿಸಿಕೊಳ್ಳಲು ನಾವು ಎಲ್ಲಾ ರೀತಿಯಲ್ಲಿಯೂ ಪ್ರಯತ್ನಿಸಿದೆವು,ಹಲವು ನಗರದಿಂದ ತಜ್ಞ ವೈದ್ಯರನ್ನು ಕರೆತಂದು ಚಿಕಿತ್ಸೆ ಕೊಡಿಸಿದೆವು, ಆದರೆ .ಯಾವುದೇ ಪ್ರಯೋಜನವಾಗಲಿಲ್ಲ,
ಜೂನ್ 3 ರಂದು ಆಕೆಯ ಆರೋಗ್ಯ  ಹದಗೆಟ್ಟಿತ್ತು, ಆಗಾ ಜೋಧ್ ಪುರದ ಏಮ್ಸ್ ಆಸ್ಪತ್ರೆಗೆ ಕರೆತಂದೆವು, ಆಕೆಗೆ ಹೃದಯಾಘಾತವಾಗಿರುವುದಾಗಿ ವೈದ್ಯರು ಹೇಳಿದರು,.ಆಕೆಯನ್ನು ಐಸಿಯು ನಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಭಾನುವಾರ ಬೆಳಗ್ಗೆ ಆತ ಕೊನೆಯುಸಿರೆಳೆದಿದ್ದಾಳೆ, 
ಇಷ್ಟು ಸಣ್ಣ ವಯಸ್ಸಿನಲ್ಲಿಯೇ ದೇಹದಾನ ಮಾಡಿರುವುದು ಇದೇ ಮೊದಲಾಗಿದೆ ಎಂದು ವೈದ್ಯ ಡಾ. ಆಶೀಶ್ ನಯ್ಯರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT