ಇಂಡೋನೇಷ್ಯಾ ಕರೆನ್ಸಿ 
ವಿಶೇಷ

ನೀವು ನಂಬ್ತಿರೋ ಇಲ್ವೋ, ಭಾರತದಲ್ಲಲ್ಲ, ಕಟ್ಟಾ ಮುಸ್ಲಿಂ ರಾಷ್ಟ್ರದ ನೋಟಿನಲ್ಲಿದ್ದಾನೆ ಗಣೇಶ!

ವಿಘ್ನ ವಿನಾಯಕ, ಗಣಗಳ ಅಧಿಪತಿ, ವರಸಿದ್ಧಿ ವಿನಾಯಕನಿಗೆ ಅಗ್ರ ಪೂಜೆ ಸಲ್ಲಿಸುತ್ತಾರೆ. ಇನ್ನು ಭಾರತದಲ್ಲಿ ಅಲ್ಲದೆ ಹಲವು ರಾಷ್ಟ್ರಗಳಲ್ಲೂ ಸಹ ಗಣೇಶನ ಆರಾಧನೆ ನಡೆಯುತ್ತಿದೆ. ಇನ್ನು ಕಟ್ಟಾ ಮುಸ್ಲಿಂ ರಾಷ್ಟ್ರವೊಂದರ ನೋಟಿನ ಮೇಲೆ ಗಣೇಶ ಸ್ಥಾನಪಡೆದಿರುವುದು ಅಚ್ಚರಿಯೇ ಸರಿ.

ವಿಘ್ನ ವಿನಾಯಕ, ಗಣಗಳ ಅಧಿಪತಿ, ವರಸಿದ್ಧಿ ವಿನಾಯಕನಿಗೆ ಅಗ್ರ ಪೂಜೆ ಸಲ್ಲಿಸುತ್ತಾರೆ. ಇನ್ನು ಭಾರತದಲ್ಲಿ ಅಲ್ಲದೆ ಹಲವು ರಾಷ್ಟ್ರಗಳಲ್ಲೂ ಸಹ ಗಣೇಶನ ಆರಾಧನೆ ನಡೆಯುತ್ತಿದೆ. ಇನ್ನು ಕಟ್ಟಾ ಮುಸ್ಲಿಂ ರಾಷ್ಟ್ರವೊಂದರ ನೋಟಿನ ಮೇಲೆ ಗಣೇಶ ಸ್ಥಾನಪಡೆದಿರುವುದು ಅಚ್ಚರಿಯೇ ಸರಿ.

ಇನ್ನು ನೋಟಿನಲ್ಲಿ ಗಣೇಶನ ಚಿತ್ರವಿರುವುದು ಭಾರತದ ನೋಟುಗಳಲ್ಲಲ್ಲ. ಅದು ಇಂಡೋನೇಷ್ಯಾದ ನೋಟಿನ ಮೇಲೆ. ಬರೋಬ್ಬರಿ 20 ಸಾವಿರ ರುಪಾಯಿ ನೋಟಿನ ಮೇಲೆ ಗಣೇಶನ ಚಿತ್ರವನ್ನು ಬಳಸಿಕೊಳ್ಳಲಾಗಿದೆ. ಇದು ಬಾದಾಮಿ ಚಾಲುಕ್ಯರ ಕಾಲದಲ್ಲಿನ ವಾತಾಪಿ ಗಣಪತಿಯನ್ನೇ ಹೋಲುತ್ತದೆ.

ಇಂಡೋನೇಷ್ಯಾದಲ್ಲಿ ಸುಮಾರು 87ರಷ್ಟು ಮುಸ್ಲಿಂ ಜನಸಂಖ್ಯೆ ಹೊಂದಿದ್ದು ಹಿಂದೂಗಳ ಸಂಖ್ಯೆ ಕೇವಲ 3ರಷ್ಟು. ಹೀಗಿದ್ದರೂ 20 ಸಾವಿರ ರುಪಾಯಿ ನೋಟಿನ ಮೇಲೆ ಗಣಪತಿ ಫೋಟೋವನ್ನು ಹಾಕಲಾಗಿದೆ. ಗಣೇಶನ ಫೋಟೋ ಪಕ್ಕದಲ್ಲಿ ಇಂಡೋನೇಷ್ಯಾದ ಸ್ವಾತಂತ್ರ್ಯ ಹೋರಾಟಗಾರ ಕೀ ಹಾಜಾರ್ ಫೋಟೋವೂ ಇದೆ. 

ಶತಮಾನಗಳ ಹಿಂದೆ ಇಂಡೋನೇಷ್ಯಾದಲ್ಲಿ ಹಿಂದೂ ಸಂಪ್ರದಾಯ ಆಚರಣೆಯಲ್ಲಿತ್ತು. ಹೀಗಾಗಿ ಈಗಲೂ ಕೂಡ ಆ ಸಂಪ್ರದಾಯವನ್ನೂ ಅಲ್ಲಿ ಮುಂದುವರೆಸಿಕೊಂಡು ಬರಲಾಗಿದೆ. ಅಲ್ಲದೇ ಇಂಡೋನೇಷ್ಯಾದಲ್ಲಿ ಗಣೇಶ ದೇವರನ್ನು ಕಲೆ, ವಿಜ್ಞಾನ ಮತ್ತು ಜ್ಞಾನದ ಅಧಿದೇವತೆ ಎಂದು ನಂಬಿದ್ದಾರೆ. 

ಇಂಡೋನೇಷ್ಯಾ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದಾಗ ಅಲ್ಲಿ 20 ಸಾವಿರದ ನೋಟನ್ನು ಜಾರಿಗೆ ತರಲಾಯಿತು. ಆ ನೋಟಿನ ಮೇಲೆ ಗಣೇಶನ ಚಿತ್ರವನ್ನು ಮುದ್ರಿಸಲಾಗಿತ್ತು. ಇದಾದ ಬಳಿಕ ಅಲ್ಲಿನ ಅರ್ಥ ವ್ಯವಸ್ಥೆ ಹತೋಟಿಗೆ ಬಂತಂತೆ. ಹೀಗಾಗಿಯೇ ಅಲ್ಲಿನ ಸರ್ಕಾರ ಇಂದಿಗೂ ಸಹ ನೋಟಿನ ಮೇಲೆ ಗಣೇಶನ ಚಿತ್ರವನ್ನು ಮುದ್ರಿಸುತ್ತಿದೆ. 

ಬಾಲಿವುಡ್ ಚಿತ್ರ ನಿರ್ಮಾಪಕ ತಂಜು ಗಾರ್ಗ್ ಇತ್ತೀಚೆಗಷ್ಟೇ ಇಂಡೋನೇಷ್ಯಾಗೆ ಭೇಟಿ ನೀಡಿದ್ದರು. ಅಲ್ಲದೇ ಅಲ್ಲಿನ ನೋಟಿನ ಮೇಲೆ ಗಣೇಶನ ಚಿತ್ರವನ್ನು ನೋಡಿ ಶಾಕ್ ಆಗಿದ್ದಾರೆ. ನೋಟಿನ ಫೋಟೋವನ್ನು ಟ್ವೀಟ್ ಮಾಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಬಕಾರಿ ಅಕ್ರಮ ಕೇಸ್‌: ಲೋಕೋಪಯೋಗಿ ಸಚಿವರಿಗೆ ED ಶಾಕ್‌; ಸತೀಶ್ ಜಾರಕಿಹೊಳಿ ಡಾಲರ್ಸ್ ಕಾಲೋನಿ ಮನೆ ಮೇಲೆ ದಾಳಿ !

Nepal floods: 4 ಅಂತಸ್ತಿನ ಕಟ್ಟಡದ ಮೇಲೆ ಪ್ರವಾಹದ ರುದ್ರನರ್ತನ, ಸಾವಿನ ಸಂಖ್ಯೆ 1,365ಕ್ಕೆ ಏರಿಕೆ, 5,326 ಮಂದಿ ಇನ್ನೂ ನಾಪತ್ತೆ, ಹೊಸ Video ವೈರಲ್!

ಸೌದಿ ಮೇಲೆ ಕ್ಷಿಪಣಿ ದಾಳಿ; Houthi ಉಗ್ರರ ವಿರುದ್ಧ ಸಿಡಿದೆದ್ದ ಭಾರತ, 'ನೌಕಾಯಾನ ಸ್ವಾತಂತ್ರ್ಯಕ್ಕೆ ಬೆದರಿಕೆ ಒಡ್ಡುವ ದಾಳಿ ಒಪ್ಪಲ್ಲ' ಎಂದು ಗುಡುಗು

US-Iran ಸಂಘರ್ಷ ತಾರಕಕ್ಕೆ: ತೈಲ ಟ್ಯಾಂಕರ್ ದಾಳಿಗೆ Tehran ಪ್ರತಿಕಾರ; ಜೋರ್ಡಾನ್‌ ಅಮೆರಿಕ ಸೇನಾ ನೆಲೆ ಮೇಲೆ ಭೀಕರ ಕ್ಷಿಪಣಿ ದಾಳಿ, Hormuz ಬಿಕ್ಕಟ್ಟು ಮತ್ತಷ್ಟು ಉಲ್ಬಣ..!

West Asia Conflict: ಇರಾನ್ ಆರ್ಥಿಕ ಬೆನ್ನೆಲುಬಿಗೆ ಅಮೆರಿಕ ಪೆಟ್ಟು: ಸಮುದ್ರದ ಮಧ್ಯದಲ್ಲೇ 5 ಬೃಹತ್ ತೈಲ ಹಡಗುಗಳು ಗುರಿಯಾಗಿಸಿ ದಾಳಿ, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ..!