ಹೊಸ ಪ್ರಭೇದದ ಬಿಲಗಪ್ಪೆ 
ವಿಶೇಷ

ಬೆಂಗಳೂರು ಹೊರವಲಯದಲ್ಲಿ ಹೊಸ ಪ್ರಭೇದದ ಬಿಲಗಪ್ಪೆ ಪತ್ತೆ!

ಬೆಂಗಳೂರಿನ ಹೊರವಲಯದಲ್ಲಿ ಹೊಸ ಪ್ರಭೇದದ ಬಿಲಗಪ್ಪೆಯನ್ನು ಪ್ರಾಣಿ ವಿಜ್ಞಾನಿಗಳು ಪತ್ತೆ ಹಚ್ಚಿದ್ದು, ಇದಕ್ಕೆ ಸ್ಪೆರೋಥೆಕಾ ಎಂದು ನಾಮಕರಣ ಮಾಡಿದ್ದಾರೆ. 

ಬೆಂಗಳೂರು: ಬೆಂಗಳೂರಿನ ಹೊರವಲಯದಲ್ಲಿ ಹೊಸ ಪ್ರಭೇದದ ಬಿಲಗಪ್ಪೆಯನ್ನು ಪ್ರಾಣಿ ವಿಜ್ಞಾನಿಗಳು ಪತ್ತೆ ಹಚ್ಚಿದ್ದು, ಇದಕ್ಕೆ ಸ್ಪೆರೋಥೆಕಾ ಎಂದು ನಾಮಕರಣ ಮಾಡಿದ್ದಾರೆ. 

ಹೊಸ ಪ್ರಭೇದವನ್ನು ಮೌಂಟ್ ಕಾರ್ಮೆಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪಿ.ದೀಪಕ್ ಮತ್ತು ತಂಡ ಪತ್ತೆ ಮಾಡಿದೆ. ಅರಣ್ಯ ಪ್ರದೇಶದಲ್ಲಿ ಹೆಚ್ಚಾಗಿ ಉಭಯಚರಿಗಳನ್ನು ಪತ್ತೆ ಮಾಡಲಾಗುತ್ತದೆ. ಆದರೆ, ಬೆಂಗಳೂರಿನ ಹೊರವಲಯದಲ್ಲಿ ಉಭಯಚರಿಗಳನ್ನು ದಾಖಲಿಸುವ ಪ್ರಯತ್ನದಲ್ಲಿ ಹೊಸ ಜಾತಿಯ ಬಿಲಗಪ್ಪೆ ಪತ್ತೆಯಾಗಿದೆ.ಸಿಲಿಕಾನ್ ಸಿಟಿ ಬೆಂಗಳೂರಿನ ಗೌರವಾರ್ಥವಾಗಿ ಈ ಹೌಸ ಪ್ರಭೇದಕ್ಕೆ ಸ್ಪೆರೋಥೆಕಾ ಬೆಂಗಳೂರುಎಂದು ನಾಮಕರಣ ಮಾಡಲಾಗಿದೆ. 

ಈ ಹೊಸ ಪ್ರಭೇದವನ್ನು ದಕ್ಷಿಣ ಏಷ್ಯಾದಾದ್ಯಂತ ಕಂಡು ಬರುವ ಸ್ಪೆರೋಥಿಕಾ ಪ್ರಭೇದದ ಕಪ್ಪೆಗಳೊಂದಿಗೆ ಬಾಹ್ಯವಿಜ್ಞಾನ ಮತ್ತು ಅನುವಂಶಿಕ ವ್ಯತ್ಯಾಸಗಳ ಆಧಾರದ ಮೇಲೆ ವಿವರಿಸಲಾಗಿದೆ. ಪತ್ತೆಯಾಗಿರುವ ಬಿಲಗಪ್ಪೆಯ ಬಗ್ಗೆ ಅಂತರಾಷ್ಟ್ರೀಯ ಜರ್ನಲ್ ಆದ ನ್ಯೂಜಿಲ್ಯಾಂಡಿನ ಝೋಟಾಕ್ಸಾ ದಲ್ಲಿ ಪ್ರಕಟಿಸಲಾಗಿದೆ. 

ಬೆಂಗಳೂರು ನಗರೀಕರಣದ ಹೆಚ್ಚಳದಿಂದ ಇಲ್ಲಿನ ಜಲಮೂಲ ಮಲಿನಗೊಂಡಿರುವ ಪರಿಣಾಮ ಕಪ್ಪೆಗಳು ನಗರ ಪ್ರದೇಶಗಳಲ್ಲಿ ವಿನಾಶದ ಹಾದಿ ಹಿಡಿದಿವೆ. ಸ್ಪೆರೋಥೆಕಾ ಬೆಂಗಳೂರು ಕಪ್ಪೆಯ ವಾಸದ ವಿಸ್ತರಣಾ ವ್ಯಾಪ್ತಿ ಮತ್ತು ಸಂತಾನೋತ್ಪತ್ತಿ, ಇತಿಹಾಸದ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನಗಳು ನಡೆಯಬೇಕಿದೆ ಎಂದು ಭಾರತೀಯ ಪ್ರಾಣಿ ಸಂಸ್ಥಾನದ ವಿಜ್ಞಾನಿ ಡಾ,ದಿನೇಶ್ ತಿಳಿಸಿದ್ದಾರೆ. 

ಹೊಸ ಪ್ರಭೇದದ ಪತ್ತೆಯನ್ನು ಪಿ.ದೀಪಕ್ ಅವರು, ಫ್ರಾನ್ಸ್'ನ ನ್ಯಾಷನಲ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿಯ ವಿಜ್ಞಾನಿ ಡಾ.ಅನ್ನೆಮರಿ ಓಹ್ಲರ್, ಐಐಎಸ್ಸಿ ಪ್ರೊಫೆಸರ್ ಡಾ.ಕಾರ್ತಿಕ್ ಶಂಕರ್, ಭಾರತೀಯ ಪ್ರಾಣಿ ಸಂಸ್ಥಾನದ ವಿಜ್ಞಾನಿಗಳಾದ ಡಾ.ದಿನೇಶ್, ಡಾ.ಬಿ.ಹೆಚ್.ಚನ್ನಕೇಶವಮೂರ್ತಿ, ಮೈಸೂರು ಯುವರಾಜ ಕಾಲೇಜಿನ ಪ್ರೊ.ಜೆ.ಎಸ್.ಆಶಾದೇವಿಯವರೊಂದಿಗೆ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ