ಇಂಡಸ್ ಶಾಲೆಯ ವಿದ್ಯಾರ್ಥಿಗಳು 
ವಿಶೇಷ

ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯಕೀಯ ಉಪಕರಣ ಒದಗಿಸಲು 3.3 ಲಕ್ಷ ರೂ. ಹಣ ಸಂಗ್ರಹಿಸಿದ ಬೆಂಗಳೂರಿನ ವಿದ್ಯಾರ್ಥಿಗಳು!

ಕೊರೋನಾ ಸಾಂಕ್ರಾಮಿಕ ರೋಗದ ಮೂರನೇ ಅಲೆ ಎದುರಿಸಲು ಬೆಂಗಳೂರಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ (ಪಿಎಚ್‌ಸಿ) ವೈದ್ಯಕೀಯ ಉಪಕರಣಗಳನ್ನು ನೀಡುವ ಸಲುವಾಗಿ ವಿದ್ಯಾರ್ಥಿಗಳ ತಂಡವೊಂದು ಹಣ ಸಂಗ್ರಹಿಸಿದೆ.

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗದ ಮೂರನೇ ಅಲೆ ಎದುರಿಸಲು ಬೆಂಗಳೂರಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ (ಪಿಎಚ್‌ಸಿ) ವೈದ್ಯಕೀಯ ಉಪಕರಣಗಳನ್ನು ನೀಡುವ ಸಲುವಾಗಿ ವಿದ್ಯಾರ್ಥಿಗಳ ತಂಡವೊಂದು ಹಣ ಸಂಗ್ರಹಿಸಿದೆ.

'ಬೆಳ್ಳಂದೂರು ಜೊತೆಗೆ' ಎಂಬ ಸಂಸ್ಥೆಯಿಂದ ಆರಂಭವಾದ ಪ್ರಾಜೆಕ್ಟ್ ಬ್ರೀಥ್ ಅಡಿಯಲ್ಲಿ ಇಂಡಸ್ ಇಂಟರ್‌ನ್ಯಾಷನಲ್ ಶಾಲೆಯ 11ನೇ ತರಗತಿಯ ವಿದ್ಯಾರ್ಥಿಗಳು ಹಣವನ್ನು ಸಂಗ್ರಹಿಸಿದರು.

ಸಂಗ್ರಹಿಸಿದ 3.3 ಲಕ್ಷ ರೂಪಾಯಿಯಲ್ಲಿ ವಿದ್ಯಾರ್ಥಿಗಳು ಆಮ್ಲಜನಕದ ಸಾಂದ್ರತೆಗಳು, ಆಕ್ಸಿಮೀಟರ್‌ಗಳು, ಐಆರ್ ಥರ್ಮಾಮೀಟರ್‌ಗಳು, ಪಿಪಿಇಗಳು, ಎನ್ 95 ಗಳು, ಆಮ್ಲಜನಕ ಮಾಸ್ಕ್ ಮತ್ತು ತರಬೇತಿ ಸ್ಟ್ಯಾಂಡಿಗಳನ್ನು ಖರೀದಿಸಿದರು.

ಟೀಮ್ ಇಂಡಸ್ ಅನ್ನು ಮುನ್ನಡೆಸಿದ ಆದಿವ್ ರೆಕಿ, ಎರಡನೇ ಅಲೆಯ ಭೀಕರತೆಯನ್ನು ನಾವು ವೈಯಕ್ತಿಕವಾಗಿ ನೋಡಿದ್ದೇವೆ. ಗ್ರಾಮೀಣ ಭಾಗದ ಜನರು ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿತರಾಗಿದ್ದು ಆಮ್ಲಜನಕದ ಅಭಾವವಿದೆ ಎಂದು ಭಾವಿಸಿದೆ. ಹೀಗಾಗಿ ಒಂದು ತಿಂಗಳ ಕಾಲ ಬೆಳ್ಳಂದೂರು ಜೊತೆಗೆ ನೆರಳು ನೀಡಿದ ನಂತರ, ಮೂರನೇ ಅಲೆಯನ್ನು ಎದುರಿಸುವ ಸಲುವಾಗಿ ಆನೇಕಲ್ ತಾಲೂಕಿನಲ್ಲಿ ಪ್ರಾಜೆಕ್ಟ್ ಬ್ರೀಥ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು ಎಂದರು. 

ಬೆಳ್ಳಂದೂರು ಜೊತೆಗೆ ಸಂಸ್ಥಾಪಕ-ಅಧ್ಯಕ್ಷ ಕಿಶೋರಿ ಮುದಲಿಯಾರ್ ಅವರು, ಆದಿವ್ ನಾಲ್ಕು ವರ್ಷಗಳಿಂದ ಬೆಲ್ಲಂದೂರು ಜೊತೆಗೆ ಜೂನಿಯರ್ ಸ್ವಯಂಸೇವಕರಾಗಿದ್ದಾರೆ. ಸ್ಕೈವಾಕ್ ವಿನ್ಯಾಸಗಳಿಂದ ಮರಗಳ ಗಣತಿ ಮತ್ತು ಟ್ರಾಫಿಕ್ ನಿಯಮಗಳ ಜಾಗೃತಿ ಡ್ರೈವ್‌ಗಳಿಗೆ ಯಾವಾಗಲೂ ಬದ್ಧರಾಗಿದ್ದಾರೆ ಎಂದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT