ತುಳಸಿ 
ವಿಶೇಷ

ಡಜನ್ ಮಾವಿನಹಣ್ಣನ್ನು 1.2 ಲಕ್ಷ ರೂ. ಗೆ ಮಾರಿ ಆನ್‌ಲೈನ್ ತರಗತಿಗಾಗಿ ಸ್ಮಾರ್ಟ್​ಫೋನ್ ಖರೀದಿಸಿದ 11ರ ಬಾಲಕಿ!

ಕೊರೋನಾ ಹಿನ್ನಲೆಯಲ್ಲಿ ತರಗತಿಗಳು ತೆರೆಯುತ್ತಿಲ್ಲ. ಶಾಲಾ ಮಂಡಳಿಗಳು ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳುತ್ತಿದೆ. ಸ್ಮಾರ್ಟ್​ಫೋನ್ ಖರೀದಿಸಲು ಹಣವಿಲ್ಲದೆ 11 ವರ್ಷದ ಬಾಲಕಿಯೊಬ್ಬಳು ಮಾವಿನಹಣ್ಣನ್ನು ಮಾರುತ್ತಿರುವ ಹೃದಯಸ್ಪರ್ಶಿ ಘಟನೆ ಜಮ್ಶೆಡ್‌ಪುರದಲ್ಲಿ ನಡೆದಿದೆ. 

ರಾಂಚಿ: ಕೊರೋನಾ ಹಿನ್ನಲೆಯಲ್ಲಿ ತರಗತಿಗಳು ತೆರೆಯುತ್ತಿಲ್ಲ. ಶಾಲಾ ಮಂಡಳಿಗಳು ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳುತ್ತಿದೆ. ಸ್ಮಾರ್ಟ್​ಫೋನ್ ಖರೀದಿಸಲು ಹಣವಿಲ್ಲದೆ 11 ವರ್ಷದ ಬಾಲಕಿಯೊಬ್ಬಳು ಮಾವಿನಹಣ್ಣನ್ನು ಮಾರುತ್ತಿರುವ ಹೃದಯಸ್ಪರ್ಶಿ ಘಟನೆ ಜಮ್ಶೆಡ್‌ಪುರದಲ್ಲಿ ನಡೆದಿದೆ. 

ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ ನೋವನ್ನು ಸಹಿಸಲು ನನಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಮಾವಿನಹಣ್ಣನ್ನು ಮಾರಾಟ ಮಾಡಲು ನಿರ್ಧರಿಸಿದ್ದೇನೆ ಇದರಿಂದ ನಾನು ಸ್ಮಾರ್ಟ್‌ಫೋನ್ ಖರೀದಿಸಿ ನನ್ನ ಅಧ್ಯಯನವನ್ನು ಮುಂದುವರಿಸಬಹುದು. ಏತನ್ಮಧ್ಯೆ, ಭಾನುವಾರ ಲಾಕ್ ಡೌನ್ ಸಮಯದಲ್ಲಿ ಯಾರೋ ಒಬ್ಬರು ನನ್ನ ಬಳಿಗೆ ಬಂದು ನನ್ನ ಫೋಟೋ ತೆಗೆದುಕೊಂಡರು ಎಂದು ಬಾಲಕಿ ತುಳಸಿ ಹೇಳಿದ್ದಾಳೆ. 

ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು ಮುಂಬೈ ಮೂಲದ ವ್ಯಾಲ್ಯೂಯಬಲ್ ಎಡುಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ನಂತರ ಒಂದು ಡಜನ್ ಮಾವಿನಹಣ್ಣನ್ನು 1.2 ಲಕ್ಷ ರೂ.ಗೆ ಖರೀದಿಸಲು ನಿರ್ಧರಿಸಿತು. ಕೆಲವು ದಿನಗಳ ನಂತರ, ಯಾರೋ ಮುಂಬೈನಿಂದ ಕರೆ ಮಾಡಿ 12 ಮಾವಿನಹಣ್ಣಿಗೆ ತಲಾ 10,000 ರೂ. ನೀಡಲು ಮುಂದಾದರು ಎಂದು ತುಳಸಿ ಹೇಳಿದರು.

ನನ್ನ ಬಳಿ ನನ್ನದೆ ಸ್ವಂತ ಮೊಬೈಲ್ ಇರುವುದು ಸಂತೋಷ ತಂದಿದೆ. ಅದರಿಂದ ನಾನು ನಿಯಮಿತವಾಗಿ ನನ್ನ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿದೆ ಎಂದು ತುಳುಸಿ ಹೇಳಿದ್ದಾಳೆ. ಹಣವನ್ನು ಅವಳ ತಂದೆಯ ಖಾತೆಗೆ ವರ್ಗಾಯಿಸಲಾಯಿತು. ತುಳಸಿಗೆ ತಕ್ಷಣ ಶಿಕ್ಷಣ ಮುಂದುವರೆಸಲಾಗಿದೆ. ತನ್ನ ಮಗಳಿಗೆ ಸರಿಯಾದ ಮಾರ್ಗದರ್ಶನ ಸಿಕ್ಕರೆ ಉನ್ನತ ಶಿಕ್ಷಣ ಪಡೆಯುತ್ತಾಳೆ ಎಂಬ ನಂಬಿಕೆ ಇರುವುದಾಗಿ ತಂದೆ ಆಶಯ ವ್ಯಕ್ತಪಡಿಸಿದ್ದಾರೆ. 

ತುಳಸಿಯ ತಾಯಿ ಪದ್ಮಿನಿ ದೇವಿ ಕೂಡ ಹಣಕಾಸಿನ ವ್ಯವಸ್ಥೆಯಿಂದ ಸಂತೋಷಗೊಂಡಿದ್ದಾರೆ. ಈ ಸಾಧನೆಗಾಗಿ ಮಗಳ ಪರಿಶ್ರಮವನ್ನು ಪ್ರಶಂಸಿಸಿದರು.

 ಏತನ್ಮಧ್ಯೆ, ಸಹಾಯ ಹಸ್ತ ನೀಡಿದ ವ್ಯಾಲ್ಯೂಯಬಲ್ ಎಡುಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್, ಹೆಚ್ಚಿನ ವಿದ್ಯಾರ್ಥಿಗಳು ತುಳಸಿಯ ಕಥೆಯಿಂದ ಸ್ಫೂರ್ತಿ ಪಡೆಯಬೇಕು. ಇದು ಈ ಕಠಿಣ ಸಮಯಗಳಲ್ಲಿ ಮಾತ್ರವಲ್ಲ, ನಿಮ್ಮ ಭವಿಷ್ಯದ ಶಿಕ್ಷಣದ ಅಗತ್ಯಕ್ಕೂ ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ತುಳಸಿಗೆ ಎಡುಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅಮೆಯಾ ಹೆಟೆ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

SCROLL FOR NEXT