ವಿವೇಕ್‌ ಮೂರ್ತಿ 
ವಿಶೇಷ

ಅಮೆರಿಕಾದ ಸರ್ಜನ್ ಜನರಲ್ ವಿವೇಕ್ ಮೂರ್ತಿ ಕುಟುಂಬದಿಂದ ಮಂಡ್ಯ, ಮಡಿಕೇರಿ ಆಸ್ಪತ್ರೆಗಳಿಗೆ ವೈದ್ಯಕೀಯ ಸರಕು ಪೂರೈಕೆ!

ಅಮೆರಿಕಾದ ಸರ್ಜನ್‌ ಜನರಲ್‌ ಆಗಿ ಸೇವೆ ಸಲ್ಲಿಸುತ್ತಿರುವ ಭಾರತ ಮೂಲದ ವಿವೇಕ್‌ ಮೂರ್ತಿಯವರ ಕುಟುಂಬ ಮಡಿಕೇರಿ ಹಾಗೂ ಮಂಡ್ಯದ ಆಸ್ಪತ್ರೆಗಳಿಗೆ ಕೊರೋನಾ ಸಂಬಂಧಿತ ವೈದ್ಯಕೀಯ ಸರಕುಗಳನ್ನು ರವಾನಿಸಿದೆ. 

ಮೈಸೂರು: ಅಮೆರಿಕಾದ ಸರ್ಜನ್‌ ಜನರಲ್‌ ಆಗಿ ಸೇವೆ ಸಲ್ಲಿಸುತ್ತಿರುವ ಭಾರತ ಮೂಲದ ವಿವೇಕ್‌ ಮೂರ್ತಿಯವರ ಕುಟುಂಬ ಮಡಿಕೇರಿ ಹಾಗೂ ಮಂಡ್ಯದ ಆಸ್ಪತ್ರೆಗಳಿಗೆ ಕೊರೋನಾ ಸಂಬಂಧಿತ ವೈದ್ಯಕೀಯ ಸರಕುಗಳನ್ನು ರವಾನಿಸಿದೆ. 

ಸ್ಕೋಪ್ ಫೌಂಡೇಶನ್ ಅಡಿಯಲ್ಲಿ ವಿವೇಕ್‌ ಮೂರ್ತಿಯವರ ತಂದೆ ಲಕ್ಷ್ಮೀ ನರಸಿಂಹ ಮೂರ್ತಿಯವರು, 70 ಆಕ್ಸಿಜನ್ ಸಾಂದ್ರಕಗಳು, ನಾಲ್ಕು ವೆಂಟಿಲೇಟರ್‌ಗಳು, ಎನ್ 95 ಮಾಸ್ಕ್'ಗಳು, ರೆಸ್ಪಿರೇಟರ್ ಮಾಸ್ಕ್'ಗಳು, ಸ್ಟೆಪ್ ಟ್ರಾನ್ಸ್‌ಫಾರ್ಮರ್ ಪೀಸ್'ಗಳು,ರೂ.1.40 ಕೋಟಿ ಮೌಲ್ಯದ ಶುಚಿಗೊಳಿಸುವ ವಸ್ತುಗಳನ್ನು ಮಂಡ್ಯ ಹಾಗೂ ಮಡಿಕೇರಿ ಆಸ್ಪತ್ರೆಗಳಿಗೆ ರವಾನಿಸಿದ್ದಾರೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಲಕ್ಷ್ಮೀ ನರಸಿಂಹ ಮೂರ್ತಿಯವರು, ವೈದ್ಯಕೀಯ ಸಂಪನ್ಮೂಲಗಳ ಕೊರತೆಯಿರುವ 12 ಸಣ್ಣ ಆಸ್ಪತ್ರೆಗಳಿಗೆ ಈ ವೈದ್ಯಕೀಯ ಸರಕುಗಳನ್ನು ವಿತರಿಸಲಾಗುತ್ತಿದೆ. ಆರಂಭಿಕ ಹಂತವಾಗಿ ಮೊದಲಿಗೆ ಜಿಲ್ಲೆಯ ತಾಲೂಕು ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಶೀಘ್ರದಲ್ಲಿಯೇ ಫೌಂಡೇಶನ್ ರೂ.70 ಲಕ್ಷ ಮೌಲ್ಯದ ವಸ್ತುಗಳನ್ನು ನವದೆಹಲಿಯ ಮೂಲಕ ನೀಡಿಲಿದ್ದು, ಇತರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ವಿತರಣೆಯಾಗುವಂತೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. 

ಆಡಾಪ್ಟರ್ ಹೊಂದಿರುವ 70 ಆಮ್ಲಜನಕ ಸಾಂದ್ರಕಗಳು, 25 ಡಿಜಿಟಲ್ ಥರ್ಮಾಮೀಟರ್ಗಳು, 1,96,000 ಎನ್95 ಫೇಸ್ ಮಾಸ್ಕ್ಗಳು, 5000 ಫುಲ್ ಫೇಸ್ ಶೀಲ್ಡ್ ಗಳು, 400 ನೈಟ್ರೈಲ್ ಪೌಡರ್ ಫ್ರೀ ಗ್ಲೌಸ್'ಗಳು, 50 ಆಕ್ಸಿಜನ್ ಕ್ಯಾನ್ಯುಲಾ, ಐದು ವೋಲ್ಟೇಜ್ ಟ್ರಾನ್ಸ್ಫಾರ್ಮರ್ಗಳನ್ನು ಇದೀಗ ರವಾನಿಸಲಾಗಿದೆ. ಶೀಘ್ರದಲ್ಲೇ ಈ ವಸ್ತುಗಳು ಬೆಂಗಳೂರು ತಲುಪಲಿದ್ದು, ನಂತರ ಜಿಲ್ಲೆಗೆ ಸರಬರಾಜು ಆಗಲಿದೆ ಎಂದಿದ್ದಾರೆ.

ವಿವೇಕ್ ಮೂರ್ತಿ ಅವರ ಸೋದರಸಂಬಂಧಿ ವಸಂತ್ ಅವರು ಮಾತನಾಡಿ, ತಮ್ಮ ಗ್ರಾಮವಾದ ಹಲ್ಲೆಗೆರೆ, ಮಂಡ್ಯ, ಮದ್ದೂರು, ಮಳವಳ್ಳಿ, ನಾಗಮಂಗಲಾ ಮತ್ತು ಇತರ ಸ್ಥಳಗಳಲ್ಲಿ ವೈದ್ಯಕೀಯ ಸಾಮಗ್ರಿಗಳನ್ನು ಹಸ್ತಾಂತರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ, ಒಂದು ಕೋಟಿ ರೂ ವೆಚ್ಚದಲ್ಲಿ ಕೋವಿಡ್ ವಾರ್ಡ್ ನಿರ್ಮಿಸುವ ಯೋಜನೆ ಕೂಡ ಇದೆ ಎಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕ್ಯಾಬಿನೆಟ್ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT