ಮುಸ್ಲಿಂ ಕುಟುಂಬದಿಂದ ಹಿಂದೂ ಸ್ವಾಮೀಜಿಗೆ ಪಾದಪೂಜೆ 
ವಿಶೇಷ

ಗದಗ: ಮುಸ್ಲಿಂ ಕುಟುಂಬದಿಂದ ಸ್ವರೂಪನಂದ ಭಾರತಿ ಸ್ವಾಮೀಜಿ ಪಾದಪೂಜೆ

ಗದಗದ ಮುಸ್ಲಿಂ ಕುಟುಂಬವೊಂದು ಕ್ಯಾರೆಕೊಪ್ಪದ ಓಂಕಾರ ಆಶ್ರಮದ ಸ್ವರೂಪಾನಂದ ಸ್ವಾಮೀಜಿಯವರ ಪಾದಪೂಜೆ ಮಾಡಿ ಎಲ್ಲರ ಗಮನ ಸೆಳೆದಿದೆ.

ಗದಗ: ಗದಗದ ಮುಸ್ಲಿಂ ಕುಟುಂಬವೊಂದು ಕ್ಯಾರೆಕೊಪ್ಪದ ಓಂಕಾರ ಆಶ್ರಮದ ಸ್ವರೂಪಾನಂದ ಸ್ವಾಮೀಜಿಯವರ ಪಾದಪೂಜೆ ಮಾಡಿ ಎಲ್ಲರ ಗಮನ ಸೆಳೆದಿದೆ.

ನಿವೃತ್ತ ಪ್ರಾಧ್ಯಾಪಕರಾದ ಸಿಕಂದರ್‌ ಅವರು ಸ್ವರೂಪನಂದ ಶ್ರೀಗಳ ಭಕ್ತರಾಗಿದ್ದಾರೆ. ಪಾದಪೂಜೆಯ ಮೂಲಕ ಸ್ವಾಮೀಜಿಯವರು ಬಡೆಖಾನ್‌ ಮನೆಯಲ್ಲಿಯೇ ಪ್ರಸಾದ ಸ್ವೀಕರಿಸಿದ್ದಾರೆ. ಹಿಂದೂ ಮುಸ್ಲಿಂ ಬಾಂಧವ್ಯಕ್ಕೆ ಪ್ರೇರಕವಾದ ಈ ನಡೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯವು ಗೊಂದಲದ ಘಟನೆಗಳಿಗೆ ಸಾಕ್ಷಿಯಾಗುತ್ತಿರುವ ವೇಳೆಯಲ್ಲಿ ಪಾದ ಪೂಜೆಯ ಫೋಟೋಗಳು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಶ್ರೀಗಳು ಶನಿವಾರ ಶಿಖಂದರ್ ಬಡೇಖಾನ್ ಅವರ ಕುಟುಂಬವನ್ನು ಭೇಟಿ ಮಾಡಿದರು. ಬಡೇಖಾನ್ ದಂಪತಿಗಳು ಸಂಪ್ರದಾಯದಂತೆ ಶ್ರೀಗಳ ಪೂಜೆಯನ್ನು ನೆರವೇರಿಸಿದರು ಮತ್ತು ಈ ಸಂದರ್ಭದಲ್ಲಿ ನೆರೆದಿದ್ದ ಜನರಿಗೆ ಪ್ರಸಾದ ವಿತರಿಸಿದರು.

ಎರಡೂ ಸಮುದಾಯದ ಜನರು ಪೂಜೆಯಲ್ಲಿ ಪಾಲ್ಗೊಂಡು ಕುಟುಂಬವನ್ನು ಶ್ಲಾಘಿಸಿದರು. ಕಳೆದ 10 ವರ್ಷಗಳಿಂದ ಶ್ರಾವಣದ ಸಮಯದಲ್ಲಿ ಬಡೇಖಾನ್ ಕುಟುಂಬವನ್ನು ಭೇಟಿಯಾಗುತ್ತಿದ್ದರಿಂದ ನೆರೆಹೊರೆಯವರಿಗೆ ಇದು ಆಶ್ಚರ್ಯಕರ ಎನಿಸಲಿಲ್ಲ. ಈ ಬಾರಿ ಕೆಲವು ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅನೇಕ ಜನರು ಅದರ ಬಗ್ಗೆ ತಿಳಿದಿದ್ದಾರೆ. ಬಡೇಖಾನ್ ಅವರು ನಿವೃತ್ತ ಪ್ರಾಧ್ಯಾಪಕರಾಗಿದ್ದಾರೆ.

ಬಡೇಖಾನ್ ಕುಟುಂಬವೂ ಶಿವನನ್ನು ಆರಾಧಿಸುತ್ತಿತ್ತು ಬಡೇಖಾನ್ ಕುಟುಂಬ ನಮಾಜ್ ಮತ್ತು ಪೂಜೆಯನ್ನು ಮಾಡುತ್ತಾರೆ.  ಎರಡೂ ಸಮುದಾಯದ ಜನರನ್ನು ಆಹ್ವಾನಿಸುತ್ತಾರೆ. ಇಂತಹ ಅಪರೂಪದ ಘಟನೆ ಕಂಡು ನಮಗೆ ಸಂತಸವಾಗುತ್ತಿದೆ. ಈ ಕುಟುಂಬ ಸಮಾಜಕ್ಕೆ ಉತಮತ್ ಸಂದೇಶ ನೀಡುತ್ತಿದೆ ಎಂದು ಸ್ಥಳೀಯ ನಿವಾಸಿ ವಿಜಯ್ ಕುಮಾರ್ ಕತ್ತಿ ಹೇಳಿದ್ದಾರೆ.

ನಮ್ಮನ್ನು ಆಶೀರ್ವದಿಸಲು ನಮಗೆ ಗುರುಗಳ ಅಗತ್ಯವಿತ್ತು. ನಾವು ಸ್ವರೂಪಾನಂದ ಸ್ವಾಮೀಜಿಯಲ್ಲಿ ಗುರುವನ್ನು ಕಂಡುಕೊಂಡಿದ್ದೇವೆ. ಪ್ರತಿ ವರ್ಷ ಶ್ರಾವಣದಂದು ನಮ್ಮ ಮನೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಆಶೀರ್ವದಿಸುತ್ತಾರೆ. ನೋಡುಗರು ಬಂದಾಗಲೆಲ್ಲಾ ನಮ್ಮ ಸಂಬಂಧಿಕರೂ ಬರುತ್ತಾರೆ,

ಶಿಖಂದರ್ ಮುಸ್ಲಿಂ ಆದರೆ ಅವರು ಯಾವಾಗಲೂ ಎಲ್ಲಾ ಸಂಪ್ರದಾಯಗಳು ಸಮಾನವೆಂದು ನಂಬುತ್ತಾರೆ. ಪ್ರತಿಯೊಬ್ಬರೂ ಗುರುವನ್ನು ನಂಬಿದರೆ ಮತ್ತು ಈ ಜಗತ್ತು ಏನೆಂದು ತಿಳಿದಿದ್ದರೆ, ಯಾರ ನಡುವೆಯೂ ಜಗಳಗಳು ಇರುವುದಿಲ್ಲ. ಮಾನವೀಯತೆ ಎಲ್ಲೆಲ್ಲೂ ಒಂದೇ ಎಂದು ಸ್ವರೂಪಾನಂದ ಸ್ವಾಮೀಜಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

IPL 2026: MI vs RCB; ವಾಂಖೆಡೆ ಕ್ರೀಡಾಂಗಣದಲ್ಲಿ ಇತಿಹಾಸ ಬರೆದ ಬೆಂಗಳೂರು, ಅತ್ಯಧಿಕ ಮೊತ್ತ!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

SCROLL FOR NEXT