ಮುಸ್ಲಿಂ ಕುಟುಂಬದಿಂದ ಹಿಂದೂ ಸ್ವಾಮೀಜಿಗೆ ಪಾದಪೂಜೆ 
ವಿಶೇಷ

ಗದಗ: ಮುಸ್ಲಿಂ ಕುಟುಂಬದಿಂದ ಸ್ವರೂಪನಂದ ಭಾರತಿ ಸ್ವಾಮೀಜಿ ಪಾದಪೂಜೆ

ಗದಗದ ಮುಸ್ಲಿಂ ಕುಟುಂಬವೊಂದು ಕ್ಯಾರೆಕೊಪ್ಪದ ಓಂಕಾರ ಆಶ್ರಮದ ಸ್ವರೂಪಾನಂದ ಸ್ವಾಮೀಜಿಯವರ ಪಾದಪೂಜೆ ಮಾಡಿ ಎಲ್ಲರ ಗಮನ ಸೆಳೆದಿದೆ.

ಗದಗ: ಗದಗದ ಮುಸ್ಲಿಂ ಕುಟುಂಬವೊಂದು ಕ್ಯಾರೆಕೊಪ್ಪದ ಓಂಕಾರ ಆಶ್ರಮದ ಸ್ವರೂಪಾನಂದ ಸ್ವಾಮೀಜಿಯವರ ಪಾದಪೂಜೆ ಮಾಡಿ ಎಲ್ಲರ ಗಮನ ಸೆಳೆದಿದೆ.

ನಿವೃತ್ತ ಪ್ರಾಧ್ಯಾಪಕರಾದ ಸಿಕಂದರ್‌ ಅವರು ಸ್ವರೂಪನಂದ ಶ್ರೀಗಳ ಭಕ್ತರಾಗಿದ್ದಾರೆ. ಪಾದಪೂಜೆಯ ಮೂಲಕ ಸ್ವಾಮೀಜಿಯವರು ಬಡೆಖಾನ್‌ ಮನೆಯಲ್ಲಿಯೇ ಪ್ರಸಾದ ಸ್ವೀಕರಿಸಿದ್ದಾರೆ. ಹಿಂದೂ ಮುಸ್ಲಿಂ ಬಾಂಧವ್ಯಕ್ಕೆ ಪ್ರೇರಕವಾದ ಈ ನಡೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯವು ಗೊಂದಲದ ಘಟನೆಗಳಿಗೆ ಸಾಕ್ಷಿಯಾಗುತ್ತಿರುವ ವೇಳೆಯಲ್ಲಿ ಪಾದ ಪೂಜೆಯ ಫೋಟೋಗಳು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಶ್ರೀಗಳು ಶನಿವಾರ ಶಿಖಂದರ್ ಬಡೇಖಾನ್ ಅವರ ಕುಟುಂಬವನ್ನು ಭೇಟಿ ಮಾಡಿದರು. ಬಡೇಖಾನ್ ದಂಪತಿಗಳು ಸಂಪ್ರದಾಯದಂತೆ ಶ್ರೀಗಳ ಪೂಜೆಯನ್ನು ನೆರವೇರಿಸಿದರು ಮತ್ತು ಈ ಸಂದರ್ಭದಲ್ಲಿ ನೆರೆದಿದ್ದ ಜನರಿಗೆ ಪ್ರಸಾದ ವಿತರಿಸಿದರು.

ಎರಡೂ ಸಮುದಾಯದ ಜನರು ಪೂಜೆಯಲ್ಲಿ ಪಾಲ್ಗೊಂಡು ಕುಟುಂಬವನ್ನು ಶ್ಲಾಘಿಸಿದರು. ಕಳೆದ 10 ವರ್ಷಗಳಿಂದ ಶ್ರಾವಣದ ಸಮಯದಲ್ಲಿ ಬಡೇಖಾನ್ ಕುಟುಂಬವನ್ನು ಭೇಟಿಯಾಗುತ್ತಿದ್ದರಿಂದ ನೆರೆಹೊರೆಯವರಿಗೆ ಇದು ಆಶ್ಚರ್ಯಕರ ಎನಿಸಲಿಲ್ಲ. ಈ ಬಾರಿ ಕೆಲವು ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅನೇಕ ಜನರು ಅದರ ಬಗ್ಗೆ ತಿಳಿದಿದ್ದಾರೆ. ಬಡೇಖಾನ್ ಅವರು ನಿವೃತ್ತ ಪ್ರಾಧ್ಯಾಪಕರಾಗಿದ್ದಾರೆ.

ಬಡೇಖಾನ್ ಕುಟುಂಬವೂ ಶಿವನನ್ನು ಆರಾಧಿಸುತ್ತಿತ್ತು ಬಡೇಖಾನ್ ಕುಟುಂಬ ನಮಾಜ್ ಮತ್ತು ಪೂಜೆಯನ್ನು ಮಾಡುತ್ತಾರೆ.  ಎರಡೂ ಸಮುದಾಯದ ಜನರನ್ನು ಆಹ್ವಾನಿಸುತ್ತಾರೆ. ಇಂತಹ ಅಪರೂಪದ ಘಟನೆ ಕಂಡು ನಮಗೆ ಸಂತಸವಾಗುತ್ತಿದೆ. ಈ ಕುಟುಂಬ ಸಮಾಜಕ್ಕೆ ಉತಮತ್ ಸಂದೇಶ ನೀಡುತ್ತಿದೆ ಎಂದು ಸ್ಥಳೀಯ ನಿವಾಸಿ ವಿಜಯ್ ಕುಮಾರ್ ಕತ್ತಿ ಹೇಳಿದ್ದಾರೆ.

ನಮ್ಮನ್ನು ಆಶೀರ್ವದಿಸಲು ನಮಗೆ ಗುರುಗಳ ಅಗತ್ಯವಿತ್ತು. ನಾವು ಸ್ವರೂಪಾನಂದ ಸ್ವಾಮೀಜಿಯಲ್ಲಿ ಗುರುವನ್ನು ಕಂಡುಕೊಂಡಿದ್ದೇವೆ. ಪ್ರತಿ ವರ್ಷ ಶ್ರಾವಣದಂದು ನಮ್ಮ ಮನೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಆಶೀರ್ವದಿಸುತ್ತಾರೆ. ನೋಡುಗರು ಬಂದಾಗಲೆಲ್ಲಾ ನಮ್ಮ ಸಂಬಂಧಿಕರೂ ಬರುತ್ತಾರೆ,

ಶಿಖಂದರ್ ಮುಸ್ಲಿಂ ಆದರೆ ಅವರು ಯಾವಾಗಲೂ ಎಲ್ಲಾ ಸಂಪ್ರದಾಯಗಳು ಸಮಾನವೆಂದು ನಂಬುತ್ತಾರೆ. ಪ್ರತಿಯೊಬ್ಬರೂ ಗುರುವನ್ನು ನಂಬಿದರೆ ಮತ್ತು ಈ ಜಗತ್ತು ಏನೆಂದು ತಿಳಿದಿದ್ದರೆ, ಯಾರ ನಡುವೆಯೂ ಜಗಳಗಳು ಇರುವುದಿಲ್ಲ. ಮಾನವೀಯತೆ ಎಲ್ಲೆಲ್ಲೂ ಒಂದೇ ಎಂದು ಸ್ವರೂಪಾನಂದ ಸ್ವಾಮೀಜಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

SCROLL FOR NEXT