ಮಹಿಳಾ ಸರ್ ಪಂಚ್ ಪಾರ್ವತಿ ಮಲ್ಲಿಕ್ 
ವಿಶೇಷ

ಕೃಷಿ ಮಾಡಿ ಇತರರಿಗೆ ಮಾದರಿಯಾದ ಒಡಿಶಾದ ಮಹಿಳಾ ಸರಪಂಚ್

ಕಂದಮಾಲ್ ಜಿಲ್ಲೆಯ ಫಿರಿಂಗಿಯಾ ಬ್ಲಾಕ್‌ನ ಮಹಿಳಾ ಸರಪಂಚ್ ಒಬ್ಬರು ತನ್ನ ಅಧಿಕೃತ ಕೆಲಸದ ನಡುವೆಯೂ ತನ್ನ ಸ್ಥಳೀಯ ಗ್ರಾಮವಾದ ಕುಟಿಬಾಡಿಯಲ್ಲಿ ಯಶಸ್ವಿಯಾಗಿ ತರಕಾರಿ ಕೃಷಿ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಫುಲ್ಬಾನಿ(ಒಡಿಶಾ): ಕಂದಮಾಲ್ ಜಿಲ್ಲೆಯ ಫಿರಿಂಗಿಯಾ ಬ್ಲಾಕ್‌ನ ಮಹಿಳಾ ಸರಪಂಚ್ ಒಬ್ಬರು ತನ್ನ ಅಧಿಕೃತ ಕೆಲಸದ ನಡುವೆಯೂ ತನ್ನ ಸ್ಥಳೀಯ ಗ್ರಾಮವಾದ ಕುಟಿಬಾಡಿಯಲ್ಲಿ ಯಶಸ್ವಿಯಾಗಿ ತರಕಾರಿ ಕೃಷಿ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

2007, 2017 ಮತ್ತು 2022ರಲ್ಲಿ ಮೂರನೇ ಬಾರಿಗೆ ರತ್ನ ಗ್ರಾಮ ಪಂಚಾಯತ್‌ನ ಸರಪಂಚ್ ಆದ ನಂತರವೂ ಪಾರ್ವತಿ ಮಲ್ಲಿಕ್ ಅವರು ತರಕಾರಿ ಕೃಷಿಕ ಎಂಬ ತಮ್ಮ ಮೂಲ ಗುರುತನ್ನು ಉಳಿಸಿಕೊಂಡಿದ್ದಾರೆ. '2002ರಿಂದ 2007ರವರೆಗೆ ಸರಪಂಚ್ ಆಗಿದ್ದ ನನ್ನ ಪತಿ ರಜನಿಕಾಂತ್ ಅವರು ನನಗೆ ಕೃಷಿ ಮಾಡಲು ಪ್ರೇರೇಪಿಸಿದ್ದರು ಎಂದು ಹೇಳಿದ್ದಾರೆ. 

ನಾನು ಸರಪಂಚ್ ಆದ ನಂತರವೂ ಅದನ್ನು ಮುಂದುವರಿಸಿದ್ದೇನೆ. ನಾನು ಟೊಮೆಟೊ, ಹೂಕೋಸು, ಬದನೆ, ಬೀನ್ಸ್ ಮತ್ತು ಎಲೆಕೋಸು ಬೆಳೆಯುತ್ತೇನೆ. ಇದಕ್ಕೆ ನಯಾಗಢ್, ಬೌಧ್, ಗಂಜಾಂ ಮತ್ತು ಸೋನೆಪುರ್ ಜಿಲ್ಲೆಗಳಲ್ಲಿ ಬೇಡಿಕೆಯಿದೆ ಎಂದು ಪಾರ್ವತಿ ಹೇಳಿದರು. ಮುಂದೆಯೂ ಸರ್ಕಾರದಿಂದ ನೆರವು ಸಿಕ್ಕರೆ ತರಕಾರಿ ಕೃಷಿಯಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಪಾರ್ವತಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT