ಮೊಹಮ್ಮದ್ ಆದಿಲ್ ತಮ್ಮ ಆವಕಾಡೊ ಬೆಳೆಯೊಂದಿಗೆ 
ವಿಶೇಷ

ಬೆಂಗಳೂರು: ಮುತ್ತು-ರತ್ನ ವ್ಯಾಪಾರ ಬಿಟ್ಟು ಹಣ್ಣು ಬೆಳೆದಾತನಿಗೆ ಚಿನ್ನವಾದ ಬೆಳೆ!

ಇತ್ತೀಚಿನ ದಿನಗಳಲ್ಲಿ ಯುವಕರು ಸ್ವಯಂ ಉದ್ಯೋಗದತ್ತ ಒಲವು ತೋರುತ್ತಿದ್ದಾರೆ. ಇಂದು ಕೃಷಿಯಲ್ಲೂ ಸಾಕಷ್ಟು ಹಣ ಗಳಿಸುವ ಅವಕಾಶವಿದೆ. ಅನೇಕ ಜನರು ಅದರಲ್ಲಿ ಉತ್ತಮ ಹಣವನ್ನು ಕೂಡ ಗಳಿಸುತ್ತಿದ್ದಾರೆ. ಇದಕ್ಕೆ ನಗರದ ಮೊಹಮ್ಮದ್ ಆದಿಲ್ ಅವರು ಉದಾಹರಣೆಯಾಗಿದ್ದಾರೆ.

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಯುವಕರು ಸ್ವಯಂ ಉದ್ಯೋಗದತ್ತ ಒಲವು ತೋರುತ್ತಿದ್ದಾರೆ. ಕೊರೋನಾ ಅಪ್ಪಳಿಸಿದ ಬಳಿಕವಂತೂ ಸಾಕಷ್ಟು ಮಂದಿ ಕೃಷಿಯನ್ನು ಉದ್ಯೋಗವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇಂದು ಕೃಷಿಯಲ್ಲೂ ಸಾಕಷ್ಟು ಹಣ ಗಳಿಸುವ ಅವಕಾಶವಿದೆ. ಅನೇಕ ಜನರು ಅದರಲ್ಲಿ ಉತ್ತಮ ಹಣವನ್ನು ಕೂಡ ಗಳಿಸುತ್ತಿದ್ದಾರೆ. ಇದಕ್ಕೆ ನಗರದ ಮೊಹಮ್ಮದ್ ಆದಿಲ್ ಅವರು ಉದಾಹರಣೆಯಾಗಿದ್ದಾರೆ.

11 ವರ್ಷಗಳ ಹಿಂದೆ ಮುತ್ತು-ರತ್ನ ವ್ಯಾಪಾರ ಬಿಟ್ಟು ಮೊಹಮ್ಮದ್ ಆದಿಲ್ ಅವರು ಹಣ್ಣುಗಳ ಬೆಳೆಯಲು ಆರಂಭಿಸಿದ್ದರು. ಈ ಬೆಳೆಯೇ ಇದೀಗ ಆದಿಲ್ ಅವರಿಗೆ ಚಿನ್ನವಾಗಿ ಪರಿವರ್ತನೆಯಾಗಿದೆ.

ಆದಿಲ್ ಅವರು ವಿದೇಶಿ ಸಸಿಗಳನ್ನು ನೆಟ್ಟು ಮಾರಾಟ ಮಾಡುತ್ತಿದ್ದು, ಇದರಿಂದ ವಾರ್ಷಿಕವಾಗಿ ಕೋಟ್ಯಾಂತರ ರುಪಾಯಿ ವಹಿವಾಟು ನಡೆಸುತ್ತಿದ್ದಾರೆ.

52 ವರ್ಷದ ಮೊಹಮ್ಮದ್ ಆದಿಲ್ ಅವರು, ದೇವನಹಳ್ಳಿಯ ರೈತನಾಗಿದ್ದು, ತಮ್ಮ ಎಕರೆ ಭೂಮಿಯಲ್ಲಿ ಆವಕಾಡೊ, ಮಕಾಡಾಮಿಯಾ ಅಡಿಕೆ, ರಂಬುಟಾನ್, ಬುಷ್ ಆರೆಂಜ್, ವಾಟರ್ ಆಪಲ್, ಸ್ಟಾರ್ ಫ್ರೂಟ್ ಮತ್ತು ಲಿಚಿ ಥಾಯ್ ಗ್ವಾವವನ್ನು ಬೆಳೆಯುತ್ತಿದ್ದಾರೆ.

11 ವರ್ಷಗಳ ಹಿಂದೆ ರೈತನಾಗಿ ನನ್ನ ಪಯಣ ಆರಂಭವಾಯಿತು. 4 ಎಕರೆ ಜಮೀನಿನಲ್ಲಿ ಪೇರಳದ ಮರಗಳಿದ್ದವು. ಆದರೆ, ಇಳುವರಿ ಮಾತ್ರ ಕಡಿಮೆಯಾಗಿತ್ತು. ಹೀಗಾಗಿ ನಾನು ವಿದೇಶಿ ಹಣ್ಣಿನ ಮರಗಳನ್ನು ಹಾಕಲು ನಿರ್ಧರಿಸಿದ್ದೆ. 4 ಎಕರೆ ಭೂಮಿಯಲ್ಲಿ 1 ಎಕರೆ ಭೂಮಿಯನ್ನು ನರ್ಸರಿಯಾಗಿ ಪರಿವರ್ತಿಸಿದೆ. ಇಲ್ಲಿ ನಾನು ವಿದೇಶಿ ಹಣ್ಣುಗಳ ಸಸಿಗಳನ್ನು ಬೆಳೆಸಿದೆ. ಅವಕಾಡೋದಲ್ಲಿ 13 ವಿಧದ ಹಣ್ಣುಗಳಿವೆ. ಇದೀಗ ನಾನು ನನ್ನ ನರ್ಸರಿಗೆ ಬೆಂಗಳೂರು ನರ್ಸರಿ ಎಂದು ಹೆಸರಿಟ್ಟಿದ್ದೇನೆಂದು ಆದಿಲ್ ಅವರು ಹೇಳಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಲಕ್ಷಕ್ಕೂ ಅಧಿಕ ಆವಕಾಡೊ ಸಸಿಗಳನ್ನು ಮಾರಾಟ ಮಾಡಿದ್ದೇನೆ. ಇದು ಉಷ್ಣವಲಯದ ಹಣ್ಣುಗಳಾಗಿದ್ದು, ಶೂನ್ಯ ನಿರ್ವಹಣೆಯೊಂದಿಗೆ ಬೆಳೆಯಲು ಸುಲಭವಾಗಿದೆ ಮತ್ತು ಇಳುವರಿಯನ್ನು ಕೇವಲ ಮೂರು ವರ್ಷಗಳಲ್ಲಿ ನೋಡಬಹುದು. ಮೊದಲ ಎರಡು ವರ್ಷಗಳ ಕಾಲ ಉತ್ತಮ ಆರೈಕೆ ಮಾಡುವುದು ಮುಖ್ಯವಾಗುತ್ತದೆ ಎಂದು ಆದಿಲ್ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

SCROLL FOR NEXT