ಪ್ರಾತಿನಿಧಿಕ ಚಿತ್ರ 
ವಿಶೇಷ

ಹೊಸ ಜೀವನದ ಆರಂಭದ ಭರವಸೆ; ಉಡುಪಿಯಲ್ಲಿ ತೃತೀಯಲಿಂಗಿಗಳಿಂದ ಕ್ಯಾಂಟೀನ್ ಪ್ರಾರಂಭ

ತಮ್ಮ ಕುಟುಂಬಗಳು ಮತ್ತು ಸಾರ್ವಜನಿಕರಿಂದ ಯಾವಾಗಲೂ ಮುಖ್ಯವಾಹಿನಿಯಿಂದ ಹೊರಗುಳಿದಿರುವ ಟ್ರಾನ್ಸ್‌ಜೆಂಡರ್‌ಗಳು ತಮ್ಮ ಜೀವನವನ್ನು ಹೊಸದಾಗಿ ಪ್ರಾರಂಭಿಸಲು ಹೊಸ ಹೊಸ ಕ್ಷೇತ್ರಗಳಿಗೆ ಪ್ರವೇಶಿಸಲು ಪ್ರಾರಂಭಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಬೇರೆ ಜಿಲ್ಲೆಗಳ ನಿವಾಸಿಗಳಾದ ತೃತೀಯಲಿಂಗಿಗಳ ಗುಂಪೊಂದು ಕ್ಯಾಂಟೀನ್ ಸ್ಥಾಪಿಸಿದೆ.

ಮಂಗಳೂರು: ತಮ್ಮ ಕುಟುಂಬಗಳು ಮತ್ತು ಸಾರ್ವಜನಿಕರಿಂದ ಯಾವಾಗಲೂ ಮುಖ್ಯವಾಹಿನಿಯಿಂದ ಹೊರಗುಳಿದಿರುವ ಟ್ರಾನ್ಸ್‌ಜೆಂಡರ್‌ಗಳು ತಮ್ಮ ಜೀವನವನ್ನು ಹೊಸದಾಗಿ ಪ್ರಾರಂಭಿಸಲು ಹೊಸ ಹೊಸ ಕ್ಷೇತ್ರಗಳಿಗೆ ಪ್ರವೇಶಿಸಲು ಪ್ರಾರಂಭಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಬೇರೆ ಜಿಲ್ಲೆಗಳ ನಿವಾಸಿಗಳಾದ ತೃತೀಯಲಿಂಗಿಗಳ ಗುಂಪೊಂದು ಕ್ಯಾಂಟೀನ್ ಸ್ಥಾಪಿಸಿದೆ.

ಉಡುಪಿಯ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಪೂರ್ವಿ, ವೈಷ್ಣವಿ, ಚಂದನಾ ಎಂಬ ಮೂವರು ಉಡುಪಿ ಬಸ್ ನಿಲ್ದಾಣದ ಬಳಿ ಕ್ಯಾಂಟೀನ್ ಮೂಲಕ ಸ್ವಾವಲಂಬಿ ಜೀವನ ನಡೆಸುವ ನಿರ್ಧಾರ ಕೈಗೊಂಡಿದ್ದಾರೆ.

ನಗರದಲ್ಲಿ ಆಹಾರಕ್ಕಾಗಿ ಅಲೆದಾಡುವವರಿಗಾಗಿ ಅವರು ತಮ್ಮ ಕ್ಯಾಂಟೀನ್ ಅನ್ನು ರಾತ್ರಿ 1 ರಿಂದ ಮುಂಜಾನೆ 7 ರವರೆಗೆ ನಡೆಸುತ್ತಾರೆ. ರಾತ್ರಿ ಪ್ರಯಾಣಿಕರಿಗೆ ಮತ್ತು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಕ್ಯಾಂಟೀನ್ ವರದಾನವಾಗಿ ಪರಿಣಮಿಸಿದೆ. ಕ್ಯಾಂಟೀನ್ ಗ್ರಾಹಕರಿಗೆ ರುಚಿಕರವಾದ ತಿಂಡಿ ಮತ್ತು ಚಹಾವನ್ನು ಒದಗಿಸುತ್ತದೆ.

ನಗರದ ಬಹುತೇಕ ಹೋಟೆಲ್‌ಗಳು ರಾತ್ರಿ ಸಮಯದಲ್ಲಿ ಮುಚ್ಚಿರುವುದರಿಂದ ಜನರು ಈಗ ಟ್ರಾನ್ಸ್‌ಜೆಂಡರ್‌ಗಳು ನಡೆಸುತ್ತಿರುವ ನಗರದ ಹೃದಯಭಾಗದಲ್ಲಿನ ಕ್ಯಾಂಟೀನ್‌ನಲ್ಲಿ ತಿಂಡಿ ತಿನ್ನಲು ಪ್ರಾರಂಭಿಸಿದ್ದಾರೆ. 

ಸಾರ್ವಜನಿಕರ ಪ್ರತಿಕ್ರಿಯೆಯು ಇದುವರೆಗೆ ಉತ್ತೇಜನಕಾರಿಯಾಗಿದೆ ಮತ್ತು ಸಾರ್ವಜನಿಕರಿಂದ ಗೌರವವನ್ನು ಪಡೆಯುತ್ತಿದ್ದೇವೆ ಎನ್ನುತ್ತಾರೆ ಮೂವರು.

ಲೈಂಗಿಕ ಕೆಲಸ ಸೇರಿದಂತೆ ತೃತೀಯಲಿಂಗಿಗಳ ಅಕ್ರಮ ಚಟುವಟಿಕೆಗಳನ್ನು ಪತ್ತೆ ಹಚ್ಚಲು ಉಡುಪಿ ಪೊಲೀಸರು ಇತ್ತೀಚೆಗೆ ರಾತ್ರಿ ಗಸ್ತನ್ನು ತೀವ್ರಗೊಳಿಸಿದ್ದರು.

ತೃತೀಯಲಿಂಗಿಗಳ ಸಮುದಾಯದ ಮೇಲೆ ಅಪನಂಬಿಕೆಯ ಮೋಡ ಕವಿದಿದ್ದು, ಸಾರ್ವಜನಿಕರು ತಮ್ಮ ಮೇಲೆ ಹೇರಿರುವ ಟ್ಯಾಗ್ ಅನ್ನು ತೆಗೆದುಹಾಕುವ ಪ್ರಯತ್ನದಲ್ಲಿ ಮೂವರು ಹೊಸ ಸಾಹಸಕ್ಕೆ ಇಳಿದಿದ್ದಾರೆ.

ರಾಜ್ಯದಲ್ಲಿ ಪ್ರಥಮ ಬಾರಿಗೆ ಎಂಬಿಎ ಪದವಿ ಪಡೆದಿರುವ ತೃತೀಯಲಿಂಗಿ ಸಮೀಕ್ಷಾ ಕುಂದರ್ ಅವರು ಕ್ಯಾಂಟೀನ್‌ ನಡೆಸಲು ಬಂಡವಾಳ ಹೂಡಿ ಸ್ನೇಹಿತರ ಬೆಂಬಲಕ್ಕೆ ನಿಂತಿದ್ದಾರೆ. ಮೂವರು ಅವರ ಮನೆಯಿಂದಲೇ ತಾತ್ಕಾಲಿಕವಾಗಿ ಅಡುಗೆ ತಯಾರಿಸುತ್ತಿದ್ದಾರೆ.

ಸಣ್ಣ ವ್ಯಾಪಾರವನ್ನು ನಡೆಸಲು ಸಾರ್ವಜನಿಕರಿಂದ ಸಿಗುವ ಬೆಂಬಲವು ನಿರ್ಣಾಯಕವಾಗಿದೆ. ಆದರೆ, ಅವರು ಸಕಾರಾತ್ಮಕ ಶಕ್ತಿಯಿಂದ ಕೆಲಸ ಆರಂಭಿಸಿದ್ದಾರೆ ಎಂದು ಕುಂದರ್ ಹೇಳಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT