ಎಲ್ ಇಡಿ ಬಲ್ಬ್ ಕ್ಲಿನಿಕ್ ನಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು 
ವಿಶೇಷ

ಎಲ್ ಇಡಿ ಬಲ್ಬ್ ಕೆಟ್ಟಿದೆಯೇ? ಹಾಗಿದ್ದರೆ ಅದನ್ನು ಎಸೆಯಬೇಡಿ! ಕ್ಲಿನಿಕ್ ಗೆ ತೆಗೆದ್ಕೊಂಡು ಹೋಗಿ!

ಹಾನಿಯಾದ ಎಲ್ ಇಡಿ  ಬಲ್ಬ್ ಗಳನ್ನು ಪುನರ್ ಬಳಸಬಹುದಾಗಿದೆ. ಅದಕ್ಕಾಗಿಯೇ ಕೇರಳದ ಕೊಚ್ಚಿಯಲ್ಲಿ ಕ್ಲಿನಿಕ್ ವೊಂದನ್ನು ತೆರೆಯಲಾಗಿದೆ.

ಕೊಚ್ಚಿ: ನಿಮ್ಮ ಮನೆಯಲ್ಲಿ ಎಲ್‌ಇಡಿ ಬಲ್ಬ್ ಕೆಟ್ಟರೆ ಏನು ಮಾಡುತ್ತೀರಿ? ಅದನ್ನು ಎಸೆದು ಹೊಸದನ್ನು ಖರೀದಿಸುತ್ತೀರಾ, ಸರಿ? ಆದಾಗ್ಯೂ, ಹೊಸ ಬಲ್ಬ್‌ನ ಬೆಲೆ ಹಾಗೂ ಹಳೆಯದನ್ನು ಎಸೆಯುವುದರಿಂದ ಪರಿಸರಕ್ಕೆ ಆಗುವ ಹಾನಿ ಕುರಿತು ಎರಡು ಬಾರಿ ಚಿಂತನೆ ಮಾಡಬೇಕು.

ಅಂತಹ ಹಾನಿಯಾದ ಬಲ್ಬ್ ಗಳನ್ನು ಪುನರ್ ಬಳಸಬಹುದಾಗಿದೆ. ಅದಕ್ಕಾಗಿಯೇ ಕೇರಳದ ಕೊಚ್ಚಿಯಲ್ಲಿ ಕ್ಲಿನಿಕ್ ವೊಂದನ್ನು ತೆರೆಯಲಾಗಿದೆ. ಕೆಟ್ಟ ಬಲ್ಬ್ ಗಳನ್ನು ಈ ಕ್ಲಿನಿಕ್ ಗಳಿಗೆ ತೆಗೆದುಕೊಂಡು ಹೋಗುವಂತೆ ಮುಳಂತುರತಿ ಸಮೀಪದ ತುರುತಿಕ್ಕರದ ಗ್ರಾಮೀಣ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಎ. ತಂಕಚನ್ ಒತ್ತಾಯಿಸಿದ್ದಾರೆ. 

ತುರುತಿಕ್ಕರ ಪಂಚಾಯತ್‌ನಲ್ಲಿ ಹೊರಸೂಸುವ ಇಂಗಾಲದ ಪ್ರಮಾಣವನ್ನು ತಡೆಯುವ ನಿಟ್ಟಿನಲ್ಲಿ ನಡೆದ ಚರ್ಚೆಯ ಭಾಗವಾಗಿ ಇದನ್ನು ಆರಂಭಿಸಲಾಯಿತು. 2017 ರಲ್ಲಿ ಪ್ರಾರಂಭವಾದಾಗಿನಿಂದ, ತರಬೇತಿ ಮತ್ತು ಇತರ ಸಹಾಯಕ್ಕಾಗಿ ಕ್ಲಿನಿಕ್ ಸಂಪರ್ಕಿಸುವ ಜನರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕುಟುಂಬಶ್ರೀ ಮತ್ತು ಹರಿತ ಕರ್ಮ ಸೇನೆಯ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರಿಗೆ ಇದು ಜೀವನೋಪಾಯದ ಮೂಲವೂ ಆಗಿದೆ"ಎಂದು ತಂಕಚನ್ ಹೇಳಿದರು.

"ಅನೇಕ ಸ್ಥಳೀಯ-ಸ್ವಯಂ ಸರ್ಕಾರಿ ಸಂಸ್ಥೆಗಳು ಈ ಕಲ್ಪನೆಗೆ ಪ್ರೇರಿತರಾಗಿದ್ದಾರೆ. ಕೇರಳ ಸ್ಥಳೀಯ ಆಡಳಿತ ಸಂಸ್ಥೆಯು ಪಂಪಾ ನದಿ ಜಲಾನಯನ ಪ್ರದೇಶದ ಸಮೀಪದ ಪಂಚಾಯತ್‌ಗಳಲ್ಲಿ ಇದೇ ರೀತಿಯ ಕ್ಲಿನಿಕ್‌ಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡಿದೆ. ಸ್ಥಳೀಯ ಸಂಸ್ಥೆ ಆಯೋಜಿಸಿದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕುಟುಂಬಶ್ರೀ ಘಟಕದ ಐವರು ಮಹಿಳೆಯರು ಇದೀಗ ಕ್ಲಿನಿಕ್ ಆರಂಭಿಸಿದ್ದಾರೆ. ತುರುತಿಕ್ಕರ ವಿಜ್ಞಾನ ಕೇಂದ್ರದವರು ತರಬೇತಿಯನ್ನು ನೀಡಿದ್ದಾರೆ ಎಂದು  ಎಡಕ್ಕಟ್ಟುವಾಯಲ್ ಪಂಚಾಯತ್‌ನ ಸಮುದಾಯ ಅಭಿವೃದ್ಧಿ ಸೊಸೈಟಿ ಅಧ್ಯಕ್ಷೆ ನಿಶೀದಾ ತಿಳಿಸಿದ್ದಾರೆ.

ಪಂಚಾಯಿತಿಯ ಎಲ್ಲೆಡೆಯಿಂದ ಜನರು ಕೆಟ್ಟ ಎಲ್ ಇಡಿ ಬಲ್ಬ್‌ಗಳನ್ನು ತರುತ್ತಿದ್ದಾರೆ. ತಿಂಗಳಿಗೆ ಸರಾಸರಿ 50 ಕ್ಕೂ ಹೆಚ್ಚು ಬಲ್ಬ್‌ಗಳನ್ನು ಪಡೆಯುತ್ತೇವೆ. ಆರಂಭದ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಿತ್ತು ಎಂದು ತರಬೇತಿ ಪಡೆದ ಮಹಿಳೆಯರಲ್ಲಿ ಒಬ್ಬರಾದ ದೀಪಾ ಬಾಬು ಹೇಳಿದರು.

ಒಂದು ಲೈಟ್ ರಿಪೇರಿ ಮಾಡಲು 40 ರೂ. ಪಡೆಯುತ್ತೇವೆ. ಹೊಸದನ್ನು ಸಹ ನಾವೇ ತಯಾರಿಸುತ್ತೇವೆ. ಇವುಗಳ ಬೆಲೆ 100 ರೂ. ಆಗಿರುತ್ತದೆ ಎಂದು ದೀಪಾ ಹೇಳಿದರು. ಒಂದು ಅಂದಾಜಿನಂತೆ ಒಂದು ಪಂಚಾಯಿತಿಯ ಬೀದಿ ದೀಪಗಳು, ಕಚೇರಿ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ 500 ಕ್ಕೂ ಹೆಚ್ಚು ಎಲ್ಇಡಿ ಬಲ್ಬ್ ಗಳನ್ನು ಬಳಸಲಾಗುತ್ತದೆ. ಈ ಬಲ್ಬ್‌ಗಳನ್ನು ಬದಲಾಯಿಸುವ ಬದಲು ದುರಸ್ತಿ ಮಾಡಿದರೆ ದೊಡ್ಡ ವೆಚ್ಚವನ್ನು ಉಳಿಸಿದಂತಾಗುತ್ತದೆ ಎಂದು ದೀಪಾ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT