ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ದಶಾನನ್ ರಾವಣ ದೇವಾಲಯ 
ವಿಶೇಷ

ಕಾನ್ಪುರದಲ್ಲಿದೆ ರಾವಣ ದೇವಾಲಯ: ರಾವಣಾಸುರನನ್ನು ಭಜಿಸುವ ಭಕ್ತರಿಗೆ ಇಲ್ಲಿ ದಸರಾ ಹಬ್ಬದಲ್ಲಿ ಮಾತ್ರ ದರ್ಶನ!

ಈ ದೇವಾಲಯದಲ್ಲಿ ದಸರಾ ಸಮಯದಲ್ಲಿ ರಾವಣಾಸುರನನ್ನು ಭಕ್ತಿಯಿಂದ ದೇವರಂತೆ ಪೂಜಿಸುತ್ತಾರೆ. ದಸರಾ ಎಂದು ಕರೆಯಲ್ಪಡುವ ನವರಾತ್ರಿಯ ಕೊನೆಯ ಹತ್ತನೇ ದಿನ ವಿಜಯದಶಮಿ ಸಂದರ್ಭದಲ್ಲಿ ರಾವಣಾಸುರನನ್ನು ಪೂಜಿಸಲು ಕಾನ್ಪುರದಲ್ಲಿರುವ ದಶಾನನ್ ದೇವಾಲಯಕ್ಕೆ ಭಕ್ತರು ಹರಿದು ಬರುತ್ತಾರೆ.

ಕಾನ್ಪುರ: ಈ ದೇವಾಲಯದಲ್ಲಿ ದಸರಾ ಸಮಯದಲ್ಲಿ ರಾವಣಾಸುರನನ್ನು ಭಕ್ತಿಯಿಂದ ದೇವರಂತೆ ಪೂಜಿಸುತ್ತಾರೆ. ದಸರಾ ಎಂದು ಕರೆಯಲ್ಪಡುವ ನವರಾತ್ರಿಯ ಕೊನೆಯ ಹತ್ತನೇ ದಿನ ವಿಜಯದಶಮಿ ಸಂದರ್ಭದಲ್ಲಿ ರಾವಣಾಸುರನನ್ನು ಪೂಜಿಸಲು ಕಾನ್ಪುರದಲ್ಲಿರುವ ದಶಾನನ್ ದೇವಾಲಯಕ್ಕೆ ಭಕ್ತರು ಹರಿದು ಬರುತ್ತಾರೆ. ದೇವಾಲಯವು 125 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗಿದೆ.

ದಶಾನನ್ ದೇವಾಲಯದ ಅರ್ಚಕ ರಾಮ್ ಬಾಜ್‌ಪೇಯ್, ಎಎನ್ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿ, ಈ ದೇವಾಲಯವು ದಸರಾ ಸಂದರ್ಭದಲ್ಲಿ ಮಾತ್ರ ತೆರೆಯುತ್ತದೆ. ಭಕ್ತರು ತಮ್ಮ ಮಕ್ಕಳು ರಾವಣನಂತೆಯೇ ಬುದ್ಧಿವಂತಿಕೆ ಮತ್ತು ಶಕ್ತಿಯನ್ನು ಪಡೆಯಲಿ ಎಂದು ಪ್ರಾರ್ಥಿಸಲು ಬರುತ್ತಾರೆ ಎಂದರು. 

ದಸರಾದ ಕೊನೆಯ ದಿನ ವಿಜಯದಶಮಿಯಂದು ನಾವು ಈ ದೇವಾಲಯವನ್ನು ತೆರೆಯುತ್ತೇವೆ. ರಾವಣನನ್ನು ಪೂಜಿಸುತ್ತೇವೆ, ರಾವಣನ ಪ್ರತಿಕೃತಿಯನ್ನು ಸುಟ್ಟು ಸಂಜೆ ದೇವಾಲಯವನ್ನು ಮುಚ್ಚಲಾಗುತ್ತದೆ. ದಸರಾ ದಿನದಂದು ಮಾತ್ರ ದೇವಾಲಯವು ತೆರೆಯುತ್ತದೆ. ರಾವಣನಂತೆ ಜ್ಞಾನ ಪಡೆಯಲು ಅವನನ್ನು ಪೂಜಿಸುತ್ತೇವೆ. ರಾವಣನಿಗೆ ಸಮಾನವಾದ ಶಕ್ತಿ, ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಹೊಂದಿದವರು ಮತ್ತೊಬ್ಬರಿಲ್ಲ. ಅವನ ಏಕೈಕ ನ್ಯೂನತೆಯೆಂದರೆ ಅವನ ದುರಹಂಕಾರ ಎಂದು ದೇವಾಲಯದ ಅರ್ಚಕರು ಹೇಳುತ್ತಾರೆ. 

ನಾವು ಅವನ ದುರಹಂಕಾರವನ್ನು ಅವನ ಪ್ರತಿಕೃತಿಯ ರೂಪದಲ್ಲಿ ಸುಡುತ್ತೇವೆ. ರಾವಣನು ಹೊಂದಿದ್ದಂತೆಯೇ ನಮ್ಮ ಮಕ್ಕಳಿಗೆ ಶಕ್ತಿ ಮತ್ತು ಬುದ್ಧಿವಂತಿಕೆಯನ್ನು ಹೊಂದಲು ನಾವು ಇಲ್ಲಿ ದೇವಾಲಯದಲ್ಲಿ ಪ್ರಾರ್ಥಿಸುತ್ತೇವೆ ಎಂದು ದೇವಾಲಯದ ಅರ್ಚಕರು ಹೇಳುತ್ತಾರೆ. 

ರಾವಣನಿಗೆ ಅರ್ಪಿತವಾದ ಇತರ ದೇವಾಲಯಗಳಲ್ಲಿ ಗ್ರೇಟರ್ ನೋಯ್ಡಾದ ಬಿಸ್ರಾಖ್‌ನಲ್ಲಿರುವ ರಾವಣ ಮಂದಿರವೂ ಸೇರಿದೆ. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ, ಶಿವನ ಗೌರವಾರ್ಥವಾಗಿ ರಾವಣನು ಲಂಕಾದ ರಾಜನಾಗಿದ್ದಾಗ ನಿರ್ಮಿಸಿದನೆಂದು ನಂಬಲಾದ ಕಾಕಿನಾಡ ರಾವಣ ದೇವಾಲಯವಿದೆ.

ಮಧ್ಯಪ್ರದೇಶದಲ್ಲಿ ರಾವಣನಿಗೆ ಸಮರ್ಪಿತವಾದ ಹಲವಾರು ದೇವಾಲಯಗಳಿವೆ, ಮಂಡಸೌರ್‌ನಲ್ಲಿ ಮಂಡೋದರಿಯೊಂದಿಗೆ ರಾವಣನ ಮದುವೆ ನಡೆದಿದೆ ಎಂದು ನಂಬಲಾಗಿದೆ. ಇನ್ನೊಂದು ಮಂಡೋದರಿಯ ಸ್ಥಳೀಯ ಸ್ಥಳವೆಂದು ನಂಬಲಾದ ವಿದಿಶಾದಲ್ಲಿ ದೇವಾಲಯವಿದೆ. 

ದಸರಾ ಎಂದರೆ ವರ್ಷದ ಸುಪ್ರಸಿದ್ಧ ರಾಮಲೀಲಾ ನಡೆಯುವ ಸಮಯ, ಬೃಹತ್ ಜಾತ್ರೆಗಳನ್ನು ಆಯೋಜಿಸಲಾಗುತ್ತದೆ ಮತ್ತು ರಾವಣನ ಪ್ರತಿಕೃತಿಗಳು ಜ್ವಾಲೆಯಲ್ಲಿ ಸಿಡಿಯುವುದನ್ನು ನೋಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT