ಪ್ರಕಾಶ್ ಶಿಲ್ಪಿ ಕೃಷ್ಣ ಶಿಲೆಯ ಕಲ್ಲಿಗೆ ನಮಸ್ಕರಿಸುತ್ತಿರುವುದು 
ವಿಶೇಷ

ಅಯೋಧ್ಯೆ ರಾಮ ಲಲ್ಲಾ ಪ್ರತಿಮೆಗೆ ಬಳಸಿದ ಅದೇ ಕಲ್ಲು ಬಳಸಿ ಹನುಮನ ಮೂರ್ತಿ ಕೆತ್ತಲು ಕೊಪ್ಪಳ ಶಿಲ್ಪಿ ನಿರ್ಧಾರ

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಮೆ ನಿರ್ಮಾಣಕ್ಕೆ ಬಳಸಿರುವ ಅದೇ ಕಲ್ಲಿನ ಭಾಗಗಳಿಂದ ಹನುಮಾನ್ ದೇವರ ಸಣ್ಣ ವಿಗ್ರಹವನ್ನು ಕೆತ್ತಲು ಕೊಪ್ಪಳದ ಶಿಲ್ಪಿಯೊಬ್ಬರು ಪ್ರಯತ್ನಿಸುತ್ತಿದ್ದಾರೆ. 

ಕೊಪ್ಪಳ: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಮೆ ನಿರ್ಮಾಣಕ್ಕೆ ಬಳಸಿರುವ ಅದೇ ಕಲ್ಲಿನ ಭಾಗಗಳಿಂದ ಹನುಮಾನ್ ದೇವರ ಸಣ್ಣ ವಿಗ್ರಹವನ್ನು ಕೆತ್ತಲು ಕೊಪ್ಪಳದ ಶಿಲ್ಪಿಯೊಬ್ಬರು ಪ್ರಯತ್ನಿಸುತ್ತಿದ್ದಾರೆ. 

ಈ ಶಿಲ್ಪಿಯ ಹೆಸರು ಪ್ರಕಾಶ್ ಶಿಲ್ಪಿ. ಅವರು ಮೈಸೂರಿಗೆ ಭೇಟಿ ನೀಡಿದ್ದಾಗ ಅಯೋಧ್ಯೆಗೆ ಕಳುಹಿಸಿದ ಕಲ್ಲಿನ ಉಳಿದ ಭಾಗಗಳಿಂದ ತನಗೆ ನೀಡುವಂತೆ ಕಲ್ಲಿನ ವ್ಯಾಪಾರಿ ಶ್ರೀನಿವಾಸ್ ಅವರನ್ನು ಕೇಳಿಕೊಂಡರು. ಈಗ ಅಯೋಧ್ಯೆಯಲ್ಲಿರುವ ರಾಮಲಲ್ಲಾ ವಿಗ್ರಹ ನಿರ್ಮಾಣದ ಕಲ್ಲಿನ ತುಂಡುಗಳಿಂದಲೇ ಹನುಮಂತನ ವಿಗ್ರಹವನ್ನು ಕೆತ್ತಲಿದ್ದು, ಕೊಪ್ಪಳದ ಸುಬ್ಬಣಾಚಾರ್ ಮಠದಲ್ಲಿ ಶೀಘ್ರದಲ್ಲಿಯೇ ಪ್ರತಿಷ್ಠಾಪಿಸಲಾಗುತ್ತದೆ. 

ಡಿಸೆಂಬರ್ 6, 2022 ರಂದು, ಶಿಲ್ಪಿ ವಿಜಯದಾಸ ಪ್ರತಿಮೆಯನ್ನು ಕೆತ್ತಲು ಕಲ್ಲಿನ ಬ್ಲಾಕ್ ನ್ನು ಖರೀದಿಸಲು ಆರಂಭದಲ್ಲಿ ಶ್ರೀನಿವಾಸ್ ಅವರನ್ನು ಭೇಟಿಯಾಗಿದ್ದರು, ಆದರೆ ಅದರ ಸಣ್ಣ ಗಾತ್ರದ ಕಾರಣ ಅವರು ಅದನ್ನು ಖರೀದಿಸದೆ ವಾಪಸ್ಸಾಗಿದ್ದರು. ನಂತರ ಅದೇ ಕಲ್ಲನ್ನು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಮೆಗೆ ಆಯ್ಕೆ ಮಾಡಲಾಗಿದೆ ಎಂದು ಅವರಿಗೆ ಗೊತ್ತಾಯಿತು. 

ಆಗ, ಶಿಲ್ಪಿ ಶ್ರೀನಿವಾಸ್ ಅವರಿಗೆ ಆ ದೊಡ್ಡ ಕಲ್ಲಿನಿಂದ ಉಳಿದಿರುವ ಭಾಗವನ್ನು ನೀಡುವಂತೆ ಕೇಳಿಕೊಂಡರು, ಅದನ್ನು ಕೊಪ್ಪಳಕ್ಕೆ ಮನೆಗೆ ತೆಗೆದುಕೊಂಡು ಹೋಗಿ ಅದರಿಂದ ಹನುಮಂತನ ವಿಗ್ರಹವನ್ನು ಕೆತ್ತಬಹುದು ಎಂಬುದು ಅವರ ಆಲೋಚನೆಯಾಗಿತ್ತು. ಕೊಪ್ಪಳದ ಅಂಜನಾದ್ರಿಯು ಹನುಮಂತನ ಜನ್ಮಸ್ಥಳ ಎಂದು ನಂಬಲಾಗಿದೆ, ಹೀಗಾಗಿ ಜಿಲ್ಲೆ ವಿಶೇಷವಾಗಿದೆ. 2007 ರಿಂದ, ಶಿಲ್ಪಿ ದಿನಕ್ಕೆ ಒಂದು ಹನುಮಂತನ ವಿಗ್ರಹವನ್ನು ತಯಾರಿಸುತ್ತಿದ್ದಾರೆ. ಈ ಬಾರಿ ಅವರು ಕೃಷ್ಣ ಶಿಲೆಯಿಂದ (ಕಪ್ಪು ಕಲ್ಲು) ವಿಗ್ರಹವನ್ನು ತಯಾರಿಸಲು ನಿರ್ಧರಿಸಿದ್ದಾರೆ.

ಈಗ ರಾಮಲಲ್ಲಾ ಪ್ರತಿಮೆಯನ್ನು ತಯಾರಿಸಲು ಅಯೋಧ್ಯೆಗೆ ಕಳುಹಿಸಲಾದ ಕೆಲ ಭಾಗಗಳು ಇಲ್ಲಿ ಇವೆ, ಅದು ಭಗವಾನ್ ಹನುಮಾನ್ ವಿಗ್ರಹಕ್ಕಾಗಿ ಶಿಲ್ಪಿಯಿಂದ ಬೇಡಿಕೊಂಡೆ ಎಂದು ಶ್ರೀನಿವಾಸ್ ಹೇಳಿದರು. ವಿಜಯದಾಸರ ಪ್ರತಿಮೆಗೆ ನಾನು ಆಯ್ಕೆ ಮಾಡಿದ ಕಲ್ಲಿನಿಂದಲೇ ಅಯೋಧ್ಯೆಯಲ್ಲಿ ರಾಮನ ಪ್ರತಿಮೆಯನ್ನು ನಿರ್ಮಿಸುತ್ತಿರುವುದು ಸಂತೋಷದ ವಿಚಾರ. ನನ್ನ ಬಳಿ ಮೂರು ಕಲ್ಲುಗಳಿವೆ, ನಾನು ಭಗವಾನ್ ರಾಮ ಮತ್ತು ಭಗವಾನ್ ಹನುಮಾನ್ ಇಬ್ಬರ ವಿಗ್ರಹಗಳನ್ನು ಮಾಡಬಹುದು ಎಂದು ತೀರ್ಮಾನಿಸಿದ್ದೇನೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

SCROLL FOR NEXT