ತಾಯಮ್ಮ ಉದಯೋನ್ಮುಖ ಟ್ರಸ್ಟ್ ಮೂಲಕ ಇತರ ಬಿಡುಗಡೆಯಾದ ಬಂಧಿತ ಕಾರ್ಮಿಕರಿಗೆ ಸಹಾಯ ಮಾಡುತ್ತಾರೆ 
ವಿಶೇಷ

Mother’s Day: ಜೀತದಾಳಿನಿಂದ ಹೊರಬಂದು ಹಲವು ತಾಯಂದಿರ ಬಾಳಿಗೆ ಮಾದರಿ ಈ 'ತಾಯಮ್ಮ'!

ಬೆಂಗಳೂರು: ತಾಯಂದಿರ ದಿನ ಅಂದರೆ ಕೇವಲ ಬೊಕ್ಕೆ, ಹೂಗುಚ್ಛ, ಉಡುಗೊರೆ ನೀಡುವ ದಿನ ಮಾತ್ರವಲ್ಲ. ನಮ್ಮನ್ನು ರಕ್ಷಿಸಲು, ಪೋಷಿಸಲು ಮತ್ತು ನಮ್ಮನ್ನು ಬಲಿಷ್ಠ ವ್ಯಕ್ತಿಗಳಾಗಿ ಬೆಳೆಸಲು ಸಮಾಜದಲ್ಲಿ ಎಲ್ಲಾ ರೀತಿಯಲ್ಲೂ ಹೋರಾಡುವ ಬಲಿಷ್ಠ ಮಹಿಳೆಯರಿಗೆ ಗೌರವ, ವಂದನೆ ಸಲ್ಲಿಸುವ ದಿನ ಇದಾಗಿದೆ.

ಇಲ್ಲಿ ತಾಯಮ್ಮ ಎಂಬ ಮಹಿಳೆಯ ಕಥೆಯು ಪ್ರಪಂಚದ ಪ್ರತಿಯೊಂದು ಮೂಲೆಯ ತಾಯಂದಿರ ಸಹಿಷ್ಣುತೆ ಮತ್ತು ತ್ಯಾಗಕ್ಕೆ ಅಂತಹ ಒಂದು ಸಾಕ್ಷಿಯಾಗಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಒಂದು ಸಣ್ಣ ಹಳ್ಳಿಯಿಂದ ಬಂದ ತಾಯಮ್ಮ ಅವರಿಗೆ ಮೂವರು ಮಕ್ಕಳಿದ್ದಾರೆ: ಇಬ್ಬರು ಗಂಡು ಮತ್ತು ಒಬ್ಬ ಮಗಳು. 33 ವರ್ಷ ವಯಸ್ಸಿನ ತಾಯಮ್ಮ, ನನ್ನ ಮಕ್ಕಳು ನನ್ನ ರೀತಿ ಕಷ್ಟಪಡದೆ ಚೆನ್ನಾಗಿ ಕಲಿತು ದೊಡ್ಡವರಾದ ಮೇಲೆ ಒಳ್ಳೆ ಉದ್ಯೋಗ ಗಳಿಸಬೇಕೆಂದು ಬಯಸುತ್ತೇನೆ ಎಂದರು.

ವರ್ಷಗಟ್ಟಲೆ ಜೀತದಾಳು ಆಗಿ ದುಡಿದ ತಾಯಮ್ಮ ಮತ್ತು ಮೂರ್ತಿ ದಂಪತಿ, ತಮ್ಮ ಮಕ್ಕಳ ಉಜ್ವಲ ಭವಿಷ್ಯದ ಕನಸು ಕಂಡಿದ್ದರು. ಅವರು ಸುಶಿಕ್ಷಿತರಾಗಿರಬೇಕು ಮತ್ತು ಜಗತ್ತಿನಲ್ಲಿ ತಲೆ ಎತ್ತಿ ನಿಲ್ಲಬೇಕೆಂದು ಬಯಸಿದ್ದರು. ತಮ್ಮ ಕುಟುಂಬ ಚೆನ್ನಾಗಿ ಬೆಳೆಯಬೇಕು, ಮುಂದೆ ಬರಬೇಕು ಎಂದು ಸ್ವಂತ ಮನೆ ಕಟ್ಟಿಸಿಕೊಳ್ಳಲು 60 ಸಾವಿರ ರೂಪಾಯಿ ಅಡ್ವಾನ್ಸ್ ಪಡೆದರು. ಅದು ಅವರ ಜೀವನವನ್ನೇ ತಲೆಕೆಳಗಾಗಿಸಿತು.

ನನ್ನ ಪತಿ ಮೂರ್ತಿ ಒಂದು ಸಣ್ಣ ಕನಸು ಕಂಡಿದ್ದರು. ಬಾಲ್ಯದಿಂದಲೂ, ಅವರು ಸ್ವಂತ ಮನೆ ಕಟ್ಟಲು ಬಯಸಿದ್ದರು. ನಾವು ವಾಸಿಸುತ್ತಿದ್ದ ಪ್ರದೇಶವು ಮೂಲಭೂತ ನೈರ್ಮಲ್ಯವನ್ನು ಹೊಂದಿಲ್ಲ. ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸುವ ಭರವಸೆಯಲ್ಲಿ ತೆಗೆದುಕೊಂಡ ಅಡ್ವಾನ್ಸ್ ಹಣವನ್ನು ವಾಪಸ್ ನೀಡಲಾಗದೆ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ದಂಪತಿ ಜೀತ ಕಾರ್ಮಿಕರಾಗಿ ಸಿಲುಕಿದರು.

ತಾಯಮ್ಮ ತಮ್ಮ ಪತಿ ಮೂರ್ತಿ ಜೊತೆ

2015–17ರಲ್ಲಿನ ತಮ್ಮ ಸಂಕಷ್ಟವನ್ನು ನೆನಪಿಸಿಕೊಳ್ಳುವ ತಾಯಮ್ಮ ಮಕ್ಕಳು ಚಿಕ್ಕವರಾಗಿದ್ದರು. ಬೆಳಗ್ಗೆ ನನ್ನ ಪತಿ ದುಡಿಯುತ್ತಿದ್ದರೆ ಮಧ್ಯಾಹ್ನ ನಂತರ ಮಕ್ಕಳನ್ನು ಕಬ್ಬಿನ ಗದ್ದೆಗೆ ಒಯ್ದು ನಾನು ಕೆಲಸ ಮಾಡುತ್ತಿದ್ದೆ. ನಾನು ನನ್ನ ಕಿರಿಯ ಮಗುವಾದ ಸೂರ್ಯನನ್ನು ನನ್ನ ಸೊಂಟದ ಮೇಲೆ ಹೊತ್ತುಕೊಂಡು ಹೋಗುತ್ತಿದ್ದೆ, ಹೆಣ್ಣು ಮಕ್ಕಳಾದ ಅನಿತಾ ಮತ್ತು ಅಜಯ್ - ನನ್ನ ಪಕ್ಕದಲ್ಲಿ ನಡೆಯುತ್ತಿದ್ದರು. ತಲೆಯಲ್ಲಿ ಆಹಾರ ಪೊಟ್ಟಣ ಹೊತ್ತುಕೊಂಡು ನಡೆಯುತ್ತಿದ್ದೆ ಎಂದರು.

ಜೀತದಾಳುಗಳಾಗಿ ದುಡಿಯುವಾಗ ಮಕ್ಕಳು ಅನಾರೋಗ್ಯಕ್ಕೆ ಒಳಗಾದಾಗ, ಪೋಷಕರಲ್ಲಿ ಒಬ್ಬರು ಅವರನ್ನು ಕ್ಲಿನಿಕ್‌ಗೆ ಕರೆದೊಯ್ಯಬಹುದು, ಇನ್ನೊಬ್ಬರು ಕೆಲಸ ಮಾಡುವುದನ್ನು ಮುಂದುವರಿಸಬೇಕು, ಹಲವು ಸಂದರ್ಭಗಳಲ್ಲಿ ಪುರುಷರು ಮಾಡುವಂತೆ ಮಹಿಳೆಯರು ಕೆಲಸ ಮಾಡಬೇಕಾಗುತ್ತದೆ ಎಂದು ಅಂದಿನ ಕಷ್ಟದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ತಾಯಿಯಾಗಿ ನನ್ನ ಮಕ್ಕಳಿಗೆ ಆರೋಗ್ಯಕರ ಆಹಾರ ಮತ್ತು ಬಟ್ಟೆಗಳನ್ನು ಒದಗಿಸುವ ಮೂಲಭೂತ ಕರ್ತವ್ಯಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ಇದರಿಂದ ನನಗೆ ತುಂಬಾ ತೊಂದರೆಯಾಯಿತು. ಸಾಮಾಜಿಕ ವಲಯಗಳಲ್ಲಿ ನಮ್ಮ ಚಲನವಲನವನ್ನು ಸಹ ನಿರ್ಬಂಧಿಸಲಾಗಿತ್ತು, ನಮಗೆ ಕುಟುಂಬ ಕಾರ್ಯಕ್ರಮಗಳಿಗೆ ಭೇಟಿ ನೀಡಲು ಸಹ ಸಾಧ್ಯವಾಗಲಿಲ್ಲ ಎನ್ನುತ್ತಾರೆ.

2017 ರಲ್ಲಿ ತಾಯಮ್ಮ ಮತ್ತು ಮೂರ್ತಿ ಅವರ ಐದು ಸದಸ್ಯರ ಕುಟುಂಬವನ್ನು ನಿರ್ದಯಿ ಮಾಲೀಕರ ಹಿಡಿತದಿಂದ ಮುಕ್ತಗೊಳಿಸಲಾಯಿತು. ಈಗ, ಅವರು ತಮ್ಮ ಸ್ವಂತ ಮನೆಯನ್ನು ಹೊಂದಿದ್ದಾರೆ, ಎಳನೀರು ವ್ಯಾಪಾರ ಮಾಡುತ್ತಿದ್ದಾರೆ.

ಆ ದಿನಗಳು ನೆನೆದಾಗ ಕಣ್ಣೀರು ಬರುತ್ತದೆ. ಇಂದು ನಮ್ಮ ಮಕ್ಕಳು ತಮ್ಮ ಅಧ್ಯಯನದತ್ತ ಗಮನ ಹರಿಸಿ ಉತ್ತಮ ಪ್ರಜೆಗಳಾಗಬೇಕೆಂದು ನಾನು ಬಯಸುತ್ತೇನೆ. ಅವರು ಏನನ್ನು ಸಾಧಿಸಲು ಬಯಸುತ್ತಾರೆ, ಅಥವಾ ಇನ್ನೊಂದು ರೀತಿಯಲ್ಲಿ ಅವರು ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂಬುದು ನಮ್ಮ ಆಸೆ ಎನ್ನುತ್ತಾರೆ.

ಇಂದು, ತಾಯಮ್ಮ ಅವರು ಸ್ವತಂತ್ರ ಮತ್ತು ಸ್ವಾವಲಂಬಿ ಉದ್ಯಮಿಯಾಗಿದ್ದು, ಇತರ ಬಿಡುಗಡೆಯಾದ ಜೀತ ಕಾರ್ಮಿಕರಿಗೆ (RBLs) ಉದಯೋನ್ಮುಖ ಟ್ರಸ್ಟ್‌ನ ಮೂಲಕ ಸಹಾಯ ಮಾಡುತ್ತಾರೆ, ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಇನ್ನೊಬ್ಬ ಜೀತದಾಳು ಮುಕ್ತ ಕಾರ್ಮಿಕರ ಜೀವನಕ್ಕೆ ಧ್ವನಿಯಾಗಿದ್ದಾರೆ. ಹೊಲಿಗೆ ಕೆಲಸ ಮಾಡುತ್ತಾರೆ ಮತ್ತು ಹೊಲಿಗೆಗೆ ಒಲವು ಹೊಂದಿರುವ ಧೈರ್ಯಶಾಲಿ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ.

ಇಂದು ತಾಯಂದಿರ ದಿನದ ಸಂದರ್ಭದಲ್ಲಿ ತಾಯಮ್ಮ ಪ್ರತಿ ಮಗುವೂ ತನ್ನ ತಾಯಿಯನ್ನು ಗೌರವಿಸಬೇಕು. ತಾಯಿಯ ಪ್ರೀತಿ ಮತ್ತು ವಾತ್ಸಲ್ಯವು ಪ್ರಪಂಚದಲ್ಲಿ ಅತ್ಯಂತ ಪರಿಶುದ್ಧ ಮತ್ತು ಆಳವಾದದ್ದು. ಅವಳು ದಣಿವರಿಯಿಲ್ಲದೆ ತ್ಯಾಗ ಮಾಡುತ್ತಾಳೆ ಮತ್ತು ಅವಳ ಮಕ್ಕಳಿಗೆ ಆಧಾರವಾಗುತ್ತಾಳೆ ಎಂದು ಅಭಿಪ್ರಾಯ ಪಡುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

ವಿದೇಶಿ ಮಹಿಳೆಗೆ ಪತ್ರ ಬರೆದು ಅಂಬೇಡ್ಕರ್ ಸೋಲನ್ನು ನೆಹರು ಸಂಭ್ರಮಿಸಿದ್ದು ನಿಜವಲ್ಲವೇ? 'ಗೂಗಲ್ ಬೇಬಿ'ಯಂತೆ ವರ್ತಿಸಬೇಡಿ!

SCROLL FOR NEXT