ಕ್ರೀಡೆ

ಕೇರಳದ ಮಡಿಲಿಗೆ ವಾಜಪೇಯಿ ಕಪ್

Rashmi Kasaragodu

ಬೆಂಗಳೂರು: ಸಂಘಟಿತ ಆಟ  ಪ್ರದರ್ಶಿಸಿದ ಕೇರಳ ವಾಲಿಬಾಲ್ ತಂಡ, ಕರ್ನಾಟಕ ರಾಜ್ಯ ವಾಲಿಬಾಲ್ ಸಂಸ್ಥೆ ಹಾಗೂ ರಾಜಾಜಿನಗರ ಕ್ರೀಡಾ ಮತ್ತು ಸಂಸ್ಕೃತಿ ಸಂಘದ ಆಶ್ರಯದಲ್ಲಿ ಆಯೋಜಿಸಲಾದ 13 ನೇ ವಾಜಪೇಯಿ ಕಪ್ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಎತ್ತಿ ಹಿಡಿದಿದೆ.

ಗುರುವಾರ ನಡೆದ ಪುರುಷರ ವಿಭಾಗದ ಫೈನಲ್ ಪಂದ್ಯದಲ್ಲಿ ಎದುರಾಳಿ ತಮಿಳುನಾಡು ತಂಡವನ್ನು 3-0 (25-18, 25-18, 25-22) ಅಂಕಗಳ ಅಂತರದಿಂದ ಮಣಿಸಿದ ಕೇರಳ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಪಂದ್ಯದ ಆರಂಭದಿಂದ ಅಂತ್ಯದವರೆಗೂ ಅದ್ಭುತ ಪ್ರದರ್ಶನ ನೀಡಿದ ಕೇರಳ ಆಟಗಾರರು ಮೊದಲ ಗೇಮ್‌ನಲ್ಲಿ 25-18 ಮುನ್ನಡೆ ಕಾಯ್ದುಕೊಂಡರು. ಇನ್ನು ಎರಡನೇ ಗೇಮ್‌ನಲ್ಲೂ ಲಯ ಮುಂದುವರಿಸಿ ಮತ್ತೆ 25-18ರ ಮೇಲುಗೈ ಸಾಧಿಸಿದರು. ಇನ್ನು ಮೂರನೇ ಸೆಟ್‌ನಲ್ಲೂ ಬಿಗಿ ಹಿಡಿತ ಸಾಧಿಸಿದ ಕೇರಳ 25-22 ಅಂತರ ಕಾಯ್ದುಕೊಂಡು ಪಂದ್ಯದಲ್ಲಿ ಗೆಲವಿನ ನಗೆ ಬೀರಿತು.


SCROLL FOR NEXT