ವಿಶ್ವನಾಥನ್ ಆನಂದ್ 
ಕ್ರೀಡೆ

'ವಿಶ್ವನಾಥ'ನಾಗದ ಆನಂದ್

ಕಳೆದ ವರ್ಷ ಚೆನ್ನೈನಲ್ಲಿ ನಡೆದ ಚಾಂಪಿಯನ್ಶಿಪ್ನಲ್ಲಿ ಪ್ರಶಸ್ತಿ ಸೋತಿದ್ದ ಆನಂದ್, ಈ ಬಾರಿಯೂ ನಿರಾಸೆ...

ಸೋಚಿ: ಹಾಲಿ ವಿಶ್ವ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ಆಕ್ರಮಣಕಾರಿ ಆಟದ ಮುಂದೆ ಮಂಕಾದ ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್, ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದ್ದಾರೆ.

ಭಾನುವಾರ ನಡೆದ 11ನೇ ಸುತ್ತಿನ ಪಂದ್ಯದಲ್ಲಿ ಕಾರ್ಲ್ಸನ್, ಆನಂದ್ ವಿರುದ್ಧ ಅರ್ಹ ಗೆಲುವು ದಾಖಲಿಸಿದರು. ಪಂದ್ಯದಲ್ಲಿ ಬಿಳಿ ಕಾಯಿ ಹಾಕುವಲ್ಲಿ ಯಶಸ್ವಿಯಾದರು. ಈ ಗೆಲುವಿನಿಂದ ಟೂರ್ನಿಯಲ್ಲಿ 6.5 ಅಂಕಗಳನ್ನು ಸಂಪಾದಿಸಿದ ಕಾರ್ಲ್ಸನ್, ತಮ್ಮ ವಿಶ್ವ ಚಾಂಪಿಯನ್ಪಟ್ಟವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಟೂರ್ನಿಯಲ್ಲಿ ಇನ್ನು ಪಂದ್ಯ ಬಾಕಿ ಇರುವಾಗಲೇ ಆನಂದ್ ಪ್ರಶಸ್ತಿ ಆಸೆ ಕೈ ಬಿಟ್ಟಿದ್ದಾರೆ.

ಪಂದ್ಯದಲ್ಲಿ 24ನೇ ನಡೆಯಲ್ಲಿ ಆನಂದ್ ಎಸಗಿದ ತಪ್ಪು ದುಬಾರಿಯಾಗಿ ಪರಿಣಮಿಸಿತು. ಇದರ ಲಾಭ ಪಡೆದ ಕಾರ್ಲ್ಸನ್, ಆನಂದ್ಗೆ ಮತ್ತೆ ಚೇತಿರಿಸಿಕೊಳ್ಳುವ ಅವಕಾಶ ನೀಡಲೇ ಇಲ್ಲ. ಹಾಗಾಗಿ ಪಂದ್ಯ 45ನೇ ನಡೆಯಲ್ಲಿ ಅಂತ್ಯ ಕಂಡಿತು.

ಕಳೆದ ವರ್ಷ ಚೆನ್ನೈನಲ್ಲಿ ನಡೆದ ಚಾಂಪಿಯನ್ಶಿಪ್ನಲ್ಲಿ 10ನೇ ಸುತ್ತಿಗೆ ಪ್ರಶಸ್ತಿ ಸೋತಿದ್ದ ಆನಂದ್, ಈ ಬಾರಿಯೂ ನಿರಾಸೆ ಅನುಭವಿಸಿದ್ದಾರೆ. ಈ ಪಂದ್ಯದಲ್ಲಿ ಡ್ರಾ ಸಾಧಿಸಿದ್ದರೂ, ಆನಂದ್ ಮುಂದಿನ ಪಂದ್ಯದಲ್ಲಿ ಗೆಲುವಿನ ಪ್ರಯತ್ನ ನಡೆಸಬಹುದಾಗಿತ್ತು.

ಕಾರಣ ಮುಂದಿನ ಪಂದ್ಯದಲ್ಲಿ ಬಿಳಿ ಕಾಯಿ ನಡೆಸುವ ಅವಕಾಶ ಆನಂದ್ಗೆ ಲಭಿಸಿತ್ತು. ಆದರೆ, ಇಬ್ಬರು ಆಟಗಾರರ ನಡುವೆ 2 ಅಂಕಗಳ ಅಂತರವಿದ್ದು, ಒಂದು ಪಂದ್ಯದಲ್ಲಿ ಗೆದ್ದರೂ ಕಾರ್ಲ್ಸನ್ರನ್ನು ಮಣಿಸಲು ಅಸಾಧ್ಯ. ಹಾಗಾಗಿ ಆರನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಆನಂದ್ ಆಸೆ ಕಮರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನಟ ದೇವರಾಜ್ 2ನೇ ಪುತ್ರ ನಟ ಪ್ರಣಮ್ ನಿಶ್ಚಿತಾರ್ಥ

Nepal Floods: ನೇಪಾಳದ ವಿನಾಶಕಾರಿ ಪ್ರವಾಹಕ್ಕೆ ಇದೇನಾ ಕಾರಣ? ಉಪಗ್ರಹ ಚಿತ್ರಗಳಲ್ಲಿ ಸ್ಫೋಟಕ ಸುಳಿವು!

'Chhatron Ki Goonj' ಕಾರ್ಯಕ್ರಮದ ವೇಳೆ Rahul Gandhi ಮಾಡಿದ 29 ತಪ್ಪುಗಳ ದಾಖಲೆ ನೀಡಿದ ಜೂಟ್ ಕಿ ಗೂಂಜ್ ವೆಬ್​ಸೈಟ್!

ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಾರ್ಯಕ್ರಮಕ್ಕೆ ವಿರೋಧ: ಮೇಯರ್ ಮಮ್ದಾನಿ ವಿರುದ್ಧ ಅಮೆರಿಕದ ಖ್ಯಾತ ಗಾಯಕಿ ಕಿಡಿ!