ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಬೈಕ್ ರೇಸರ್ 
ಕ್ರೀಡೆ

ದಕ್ಷಿಣ ಡೇರ್: ಸಂದೀಪ್ ಶರ್ಮಾ, ಕರಣ್ ಮುನ್ನಡೆ

ದಕ್ಷಿಣ ಭಾರತದ ಖ್ಯಾತ ಮೋಟಾರ್ ಸ್ಪರ್ಧೆಯಾಗಿರುವ ದಕ್ಷಿಣ್ ಡೇರ್‌ನ ಮೊದಲ ದಿನ ಸಂದೀಪ್ ಶರ್ಮಾ ಮತ್ತು ಕರಣ್ ಆರ್ಯ ಮುನ್ನಡೆ...

ಚಿತ್ರದುರ್ಗ: ದಕ್ಷಿಣ ಭಾರತದ ಖ್ಯಾತ ಮೋಟಾರ್ ಸ್ಪರ್ಧೆಯಾಗಿರುವ ದಕ್ಷಿಣ್ ಡೇರ್‌ನ ಮೊದಲ ದಿನ ಸಂದೀಪ್ ಶರ್ಮಾ ಮತ್ತು ಕರಣ್ ಆರ್ಯ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೋಮವಾರ ಆರಂಭವಾದ ಸ್ಪರ್ಧೆಯಲ್ಲಿ 170 ಮೋಟಾರ್ ಸ್ಪರ್ಧಿಗಳು ಭಾಗವಹಿಸಿದ್ದು, ಮೊದಲ ದಿನ ಎರಡು ಹಂತದಲ್ಲಿ ನಡೆಯಿತು. ಏರಿಳಿತದ ರಸ್ತೆಯಲ್ಲಿ ಜೋರಾಗಿ ಗಾಳಿ ಬೀಸುತ್ತಿದ್ದರೂ, ಕಲ್ಲು ಬಂಡೆಗಳನ್ನು ದಾಟಿ ಸಾಗುತ್ತಿದ್ದ ಸ್ಪರ್ಧಿಗಳ ಉತ್ಸಾಹ ರೋಚಕವಾಗಿತ್ತು.

ಅಲ್ಟಿಮೇಟ್ ಕಾರ್ ವಿಭಾಗದಲ್ಲಿ 75 ಕಿ.ಮೀ ದೂರದ ರೇಸ್ ನಡೆದಿದ್ದು, ಹಾಲಿ ಚಾಂಪಿಯನ್ ಸಂದೀಪ್ ಶರ್ಮಾ ಮತ್ತು ಅವರ ನೇವಿಗೇಟರ್ ಕರಣ್ ಆರ್ಯ 1: 33: 49 ಗಂಟೆಗಳಲ್ಲಿ ಕ್ರಮಿಸಿ ಸಮರ್ಥ್ ಯಾದವ್ ಮತ್ತು ಗೌರವ್ 1: 36: 65 ಗಂಟೆಗಳಲ್ಲಿ ಕ್ರಮಿಸಿ ದ್ವಿತೀಯ ಸ್ಥಾನ ಪಡೆದರು. ಹರ್ಪ್ರೀತ್ ಬವಾ ಮತ್ತು ಪರ್ಮಿಂದರ್ ಠಾಕೂರ್ 1: 39:14 ಗಂಟೆಗಳಲ್ಲಿ ಕ್ರಮಿಸಿ ತೃತೀಯ ಸ್ಥಾನ ಪಡೆದರು.

ಇನ್ನು ಅಲ್ಟಿಮೇಟ್ ಬೈಕ್ ವಿಭಾಗದಲ್ಲಿ ಅರವಿಂದ್ ಕೆ.ಪಿ.1:28:44 ಗಂಟೆಗಳಲ್ಲಿ ಕ್ರಮಿಸಿ ಮುನ್ನಡೆ ಸಾಧಿಸಿದರು. ನಂತರದ ಸ್ಥಾನದಲ್ಲಿ ನಟರಾಜ್ ಮತ್ತು ವಿಶ್ವಾಸ್ ಎಸ್.ಡಿ.ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದರು.

ಎಂಡ್ಯೂ ರೆನ್ಸ್ ಕಾರ್ ವಿಭಾಗದಲ್ಲಿ ಒಟ್ಟು 370 ಕಿ.ಮೀ ಕ್ರಮಿಸಲಿದ್ದು, ಟಿಎಸ್‌ಡಿ ಮಾದರಿಯಲ್ಲಿ ಸ್ಪರ್ಧಿಗಳನ್ನು ನಿರ್ಧರಿಸಲಾಗುವುದು. ದಿಲೀಪ್ ಜೈನ್ ಹಾಗೂ ಚಂದು ಶೇಖರ್ 40ಸೆ.ಗಳ ಅಂತರದೊಂದಿಗೆ ರೇಸ್‌ನಲ್ಲಿ ಮುನ್ನಡೆ ಪಡೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT