ತ್ರಿಕೋನ ಸರಣಿ: ಭಾರತ ಎ ತಂಡ (ಫೋಟೋ ಕೃಪೆ: ಬಿಸಿಸಿಐ) 
ಕ್ರೀಡೆ

ಉನ್ಮುಕ್ತ್ ಚಾಂದ್ ಪಡೆಗೆ ಗೆಲ್ಲುವ ಅನಿವಾರ್ಯತೆ

ಈಗಾಗಲೇ ಆರಂಭಗೊಂಡಿರುವ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ `ಎ' ತಂಡಗಳುಳ್ಳ ತ್ರಿಕೋನ ಸರಣಿಯಲ್ಲಿ ಮೊದಲ ಸೋಲನುಭವಿಸಿ ತತ್ತರಿಸಿರುವ ಭಾರತ `ಎ' ತಂಡಕ್ಕೆ ಭಾನುವಾರ ಎರಡನೇ ಸವಾಲು ಕಾದಿದ್ದು, ದಕ್ಷಿಣ ಆಫ್ರಿಕಾ `ಎ' ತಂಡದ ವಿರುದ್ಧದ ಪಂದ್ಯ...

ಚೆನ್ನೈ: ಈಗಾಗಲೇ ಆರಂಭಗೊಂಡಿರುವ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ `ಎ' ತಂಡಗಳುಳ್ಳ ತ್ರಿಕೋನ ಸರಣಿಯಲ್ಲಿ ಮೊದಲ ಸೋಲನುಭವಿಸಿ ತತ್ತರಿಸಿರುವ ಭಾರತ `ಎ' ತಂಡಕ್ಕೆ ಭಾನುವಾರ ಎರಡನೇ ಸವಾಲು ಕಾದಿದ್ದು, ದಕ್ಷಿಣ ಆಫ್ರಿಕಾ `ಎ' ತಂಡದ ವಿರುದ್ಧದ ಪಂದ್ಯ ಅದಕ್ಕೆ ಮಹತ್ವಪೂರ್ಣವೆನಿಸಿದೆ.

ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಸರಣಿಯ ಮೂರನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಒತ್ತಡಕ್ಕೆ ಉನ್ಮುಕ್ತ್ ಚಾಂದ್ ಬಳಗ ಒಳಗಾಗಿದ್ದರೆ, ಇದೇ ಪರಿಸ್ಥಿತಿ ದ.ಆಫ್ರಿಕಾ ತಂಡಕ್ಕೂ ಇದೆ. ಏಕೆಂದರೆ ಆರಂಭಿಕ ಎರಡು ಪಂದ್ಯಗಳಲ್ಲಿ ಬಲಿಷ್ಟ ಆಸ್ಟ್ರೇಲಿಯಾ `ಎ' ತಂಡ ಜಯಭೇರಿ ಮೊಳಗಿಸಿದೆ. ಅನೌಪಚಾರಿಕ ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡದ ಆಟಗಾರರು ತೋರಿದ ಪ್ರದರ್ಶನವನ್ನೇ ಗಮನಿಸುವುದಾದರೆ, ಧವಳ್ ಕುಲಕರ್ಣಿ ಹಾಗೂ ಸಂದೀಪ್ ಶರ್ಮಾ, ಆಸ್ಟ್ರೇಲಿಯಾದ ಉಸ್ಮಾನ್ ಖವಾಜಾ ಹಾಗೂ ಜೊ ಬರ್ನ್ಸ್ ಅವರನ್ನು ಕಟ್ಟಿಹಾಕುವಲ್ಲಿ ಆರಂಭಿsಕ ಯಶಸ್ಸು ಸಂಪಾದಿಸಿದರೂ, ಎಕ್ರಮೇಣ ಇದರಲ್ಲಿ ವಿಫಲರಾಗಿದ್ದಾರೆ.

ಇನ್ನು, ಬ್ಯಾಟಿಂಗ್‍ನಲ್ಲಿ ಉನ್ಮುಕ್ತ್ ಚಾಂದ್ ಹಾಗೂ ಕೇದಾರ್ ಜಾಧವ್ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದರೂ, ಮಾಯಾಂಕ್ ಅಗರ್ವಾಲ್, ಮನೀಶ್ ತಿವಾರಿ ಹಾಗೂ ಕರುಣ್ ನಾಯರ್ ಉತ್ತಮ ಮೊತ್ತ ಪೇರಿಸುವಲ್ಲಿ ವಿಫಲವಾಗಿದ್ದು, ಪುಟಿದೆದ್ದು ನಿಲ್ಲಬೇಕಾದ ಸಮಯ ಬಂದೊದಗಿದೆ. ಅತ್ತ, ಹರಿಣಗಳ ಪಡೆ ಅನುಭವಿಗಳಿಂದ ಬಲಿಷ್ಠವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT