ಬುಧವಾರ ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ಪುನೇರಿ ಪಲ್ಟಾನ್ ತಂಡದ ರವಿ, ಬೆಂಗಳೂರು ತಂಡದ ರಕ್ಷಣಾ ಆಟಗಾರರ ಹಿಡಿತದಿಂದ ಪಾರಾಗಲು ಹಾರುತ್ತಿರುವುದು 
ಕ್ರೀಡೆ

ಬೆಂಗಳೂರು ಬುಲ್ಸ್ ಗೆ ರೋಚಕ ಜಯ

ರೈಡರ್‍ಗಳಾದ ದೀಪಕ್ ದಾಹಿಯಾ ಹಾಗೂ ರಾಕೇಶ್ ನರ್ವಾಲ್‍ರ ದಿಟ್ಟ ಹೋರಾಟದ ಫಲವಾಗಿ, ಬೆಂಗಳೂರು ಬುಲ್ಸ್ ತಂಡ...

ಪುಣೆ: ರೈಡರ್‍ಗಳಾದ ದೀಪಕ್ ದಾಹಿಯಾ ಹಾಗೂ ರಾಕೇಶ್ ನರ್ವಾಲ್‍ರ ದಿಟ್ಟ ಹೋರಾಟದ ಫಲವಾಗಿ, ಬೆಂಗಳೂರು ಬುಲ್ಸ್ ತಂಡ ಬುಧವಾರ ನಡೆದ ಪ್ರೊ ಕಬಡ್ಡಿ ಪಂದ್ಯದ ಕೊನೆಯ ಲೀಗ್ ಪಂದ್ಯದಲ್ಲಿ ಆತಿಥೇಯ ಪುನೇರಿ ಪಲ್ಟಾನ್ ತಂಡವನ್ನು 31-30 ಅಂಕಗಳ ಅಂತರದಲ್ಲಿ ಸೋಲಿಸಿತು.

ಈಗಾಗಲೇ ಸೆಮಿಫೈನಲ್‍ಗೆ ಕಾಲಿಟ್ಟಿರುವ  ಬೆಂಗಳೂರು ಬುಲ್ಸ್ ತಂಡ ಹಾಗೂ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಗಳಿಸುವ ಮೂಲಕ ಈಗಾಗಲೇ ಟೂರ್ನಿಯಿಂದ ಆಚೆ ಸರಿದಿರುವ ಪುನೇರಿ ಪಲ್ಟಾನ್ಸ್ ತಂಡಗಳ ನಡುವಿನ ಈ ಪಂದ್ಯ ಔಪಚಾರಿಕವಾಗಿ ಮಾರ್ಪಟ್ಟಿತ್ತಾದರೂ, ಆತಿಥೇಯರಿಗೆ ಗೆಲುವಿನ ಮೂಲಕ ಈ ಬಾರಿಯ ಲೀಗ್‍ಗೆ ಒಂದು ಸಮಾಧಾನದ ವಿದಾಯ ಹೇಳುವ ಅವಕಾಶವಿತ್ತು. ಆದರೆ, ಗೆಲುವು ಅದಕ್ಕೆ ದಕ್ಕಲಿಲ್ಲ.

ಅತ್ತ, ಈ ಪಂದ್ಯದಲ್ಲೂ ಜಯ ಸಾಧಿಸಿರುವ ಬೆಂಗಳೂರು ತಂಡ, ಆ. 21ರಂದು ನಡೆಯಲಿರುವ ಲೀಗ್‍ನ 2ನೇ ಸೆಮಿಫೈನಲ್ ಪಂದ್ಯದಲ್ಲಿ ತೆಲುಗು ಟೈಟನ್ಸ್ ತಂಡವನ್ನು ಎದುರಿಸಲಿದೆ. ಪಂದ್ಯದ ಆರಂಭದಿಂದಲೂ ಉತ್ತಮವಾಗಿ ಅಂಕಗಳನ್ನು ಪೇರಿಸುತ್ತಾ ಸಾಗಿದ ಪುಣೆ ತಂಡ, ಪಂದ್ಯದ 15ನೇ ನಿಮಿಷದವರೆಗೂ ಮುನ್ನಡೆ ಸಾಧಿಸಿತ್ತು. ಆದರೆ, ಆನಂತರ ಪುಟಿದೆದ್ದ ಬೆಂಗಳೂರು ತಂಡದ ಆಟಗಾರರು ಉತ್ತಮ ಪೈಪೋಟಿ ನೀಡದರಲ್ಲದೆ, ಅಂಕಗಳಿಕೆಯಲ್ಲಿ ಪುಣೆಯನ್ನು ಹಿಂದಿಕ್ಕಿದರು.

ಆದರೂ, ಕೆಲವಾರು ವಿಫಲ ರೈಡ್‍ಗಳ ಮೂಲಕ ಪುಣೆಗೆ ಅಂಕಗಳನ್ನು ಧಾರೆಯೆರೆದರು. ಇದರ ಲಾಭ ಪಡೆದ ಪುಣೆ ತಂಡವೂ ಉತ್ತಮ ಪೈಪೋಟಿ ನೀಡಿತು. ಆದರೂ, ಅಲ್ಲಲ್ಲಿ ಎಡವಿದರೂ ಉತ್ತಮವಾಗಿ ಪ್ರತಿರೋಧ ತೋರುತ್ತಾ ಸಾಗಿದ ಬೆಂಗಳೂರು ತಂಡ, ಅಂತಿಮವಾಗಿ ಗೆಲುವು ದಾಖಲಿಸಿತು.

ಪ್ಲೇ ಆಫ್ ನಿಂದ ಜೈಪುರ ಹೊರಕ್ಕೆ ನಾಯಕ ಸಂದೀಪ್ ನರ್ವಾಲ್, ಗುರ್ವಿಂದರ್ ಸಿಂಗ್ ಹಾಗೂ ಟೇ ಡಿಯೊಕ್ ಇವೊಮ್ರ ಆಕ್ರಮಣಕಾರಿ ಹೋರಾಟದ ಫಲವಾಗಿ, ಬುಧವಾರ ನಡೆದ ಪ್ರೊ ಕಬಡ್ಡಿ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡ, ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ವಿರುದ್ಧ 24-21 ಅಂಕಗಳ ಅಂತರದಲ್ಲಿ ಜಯ ಸಾಧಿಸಿತು. ಈ ಜಯದಿಂದಾಗಿ, ಮಂಗಳವಾರ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದ ಪಾಟ್ನಾ ತಂಡ, 4ನೇ ಸ್ಥಾನದಲ್ಲಿದ್ದ ಜೈಪುರ ತಂಡವನ್ನು ಕೆಳಕ್ಕೆ ತಳ್ಳಿ ಅದರ ಸ್ಥಾನವನ್ನು ಆಕ್ರಮಿಸಿಕೊಂಡಿದೆಯಲ್ಲದೆ ಜೈಪುರವನ್ನು ಹಿಂದಿಕ್ಕಿ ಪ್ಲೇಆಫ್ ಹಂತಕ್ಕೆ ಕಾಲಿಟ್ಟಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT