ಕ್ವಿಂಟಾನ್ ಶತಕ 
ಕ್ರೀಡೆ

ಸಂಕಷ್ಟ ಹೆಚ್ಚಿಸಿದ ಕ್ವಿಂಟಾನ್ ಶತಕ

ದಕ್ಷಿಣ ಆಫ್ರಿಕಾ ಎ ತಂಡದ ಆಕ್ರಮಣಕಾರಿ ಬ್ಯಾಟಿಂಗ್ ಹಾಗೂ ಶಿಸ್ತುಬದ್ಧ ಬೌಲಿಂಗ್ ಗೆ ಕಂಗೆಟ್ಟಿರುವ ಭಾರತ ಎ ತಂಡ, ಹರಿಣಗಳ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದೆ.

ದಕ್ಷಿಣ ಆಫ್ರಿಕ ಎ ತಂಡದ ಆಕ್ರಮಣಕಾರಿ ಬ್ಯಾಟಿಂಗ್ ಹಾಗೂ ಶಿಸ್ತುಬದ್ಧ ಬೌಲಿಂಗ್ ಗೆ ಕಂಗೆಟ್ಟಿರುವ ಭಾರತ ಎ ತಂಡ, ಹರಿಣಗಳ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದೆ.

ಪಂದ್ಯದ ಮೊದಲ ದಿನದಂದು ತನ್ನಮೊದಲ ಇನಿಂಗ್ಸ್ ವೇಳೆ ಭಾರತದ ಬೌಲಿಂಗ್ ದಾಳಿಯನ್ನು ಧೂಳಿಪಟ ಮಾಡಿದ್ದ ದಕ್ಷಿಣ ಆಫ್ರಿಕಾ ಎ, ಬುಧವಾರ ತನ್ನ ಆಟವನ್ನು ಮುಂದುವರೆಸಿ 542 ರನ್ ಗಳ ಬೃಹತ್ ಮೊತ್ತಕ್ಕೆ ಅಲ ಔಟ್ ಆಯಿತು. ಆ ನಂತರ ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ತಂಡ, ದಿನಾಂತ್ಯಕ್ಕೆ 122 ರನ್ ಮೊತ್ತ ಪೇರಿಸುವಷ್ಟರಲ್ಲಿ 3 ಪ್ರಮುಖ ವಿಕೆಟ್ ಕಳೆದುಕೊಂಡಿದೆ.

ಆರಂಭಿಕ ಕುಸಿತ: ಹರಿಣಗಳ ಬೃಹತ್ ಇನಿಂಗ್ಸ್ ಗೆ ಪ್ರತಿಯಾಗಿ ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ಪೀಟ್ ಭೂತವಾಗಿ ಕಾಡಿದರು. ಇನಿಂಗ್ಸ್ ಮೊತ್ತ ಕೇವಲ 43 ರನ್ ಆಗಿದ್ದಾಗ ಜಿವನ್ಜೋತ್ ಸಿಂಗ್ ಸಿವೆಟ್ ಉರುಳಿಸಿದ ಪೀಟ್   ಆನಂತರ ಮತ್ತೊಬ್ಬ ಆರಂಭಿಕ ಅಭಿನವ್  ಮುಕುಂದ್ ಅವರ ವಿಕೆಟ್ ನ್ನೂ ಕಬಳಿಸಿ ಭಾರತಕ್ಕೆ ಆಘಾತ ನೀಡಿದರು.

ಇನ್ನು ದಿಟ್ಟತನದಿಂದ ಬ್ಯಾಟ್ ಬೀಸುತ್ತಿದ್ದ ಶ್ರೇಯಸ್ ಅಯ್ಯರ್ ಅವರನ್ನು ಪಾರ್ನೆಲ್ ಪೆವಿಲಿಯನ್ ಗೆ ಅಟ್ಟಿದರು. ಕೇವಲ ಒಂದು ರನ್ ಅಂತರದಲ್ಲಿ ಶ್ರೇಯಸ್ ಅರ್ಧಶತಕ ತಪ್ಪಿಸಿಕೊಂಡರು. ದಿನಾಂತ್ಯದ ಹೊತ್ತಿಗೆ ಅಜೇಯರಾಗುಳಿದಿದ್ದ ನಾಯಕ ಅಂಬಟಿ ರಾಯುಡು ಹಾಗೂ ಕರುಣ್ ನಾಯರ್ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಕ್ವಿಂಟಾನ್ ಡಿ ಕಾಕ್, ಭಾರತಕ್ಕೆ ಮತ್ತೊಬ್ಬ ತಲೆನೋವಿನ ಬ್ಯಾಟ್ಸ್ ಮನ್ ಆಗಿ ಕಾಡಿದರು. ಕ್ರಿಸ್ ನಲ್ಲಿ ಜತೆಯಾಗಿದ್ದ ಪೀಟ್ ಅವರಿಂದ ಸೂಕ್ತ ಬೆಂಬಲ ದೊರೆಯದಿದ್ದರೂ, ಅವರ ನಂತರ ಬಂದ ಡಿಜೆ ವಿಲಾಸ್ ಜತೆಗೂಡಿ 7 ನೇ ವಿಕೆಟ್ ಗೆ 107 ರನ್ ಗಳ ಜತೆಯಾಟ ನೀಡಿದರು.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

BJP, RSS ನಡುವೆ ಭಿನ್ನಾಭಿಪ್ರಾಯ ಇರಬಹುದು, ಆದರೆ ಸಂಘರ್ಷ ಇಲ್ಲ: ಮೋಹನ್ ಭಾಗವತ್

"ಭಾರತೀಯರು ಬಗ್ಗದೇ ಹೋದರೆ...": ಹತಾಶಗೊಂಡ ಟ್ರಂಪ್ ಸಲಹೆಗಾರನಿಂದ ನೇರಾನೇರ ಬೆದರಿಕೆ!

SCO summit: ಟ್ರಂಪ್ ಗೆ ಸೆಡ್ಡು; ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!

ಧರ್ಮಸ್ಥಳ ಪ್ರಕರಣ: ದೂರುದಾರನ ಮಂಪರು ಪರೀಕ್ಷೆಗೆ ಸೌಜನ್ಯ ತಾಯಿ ಒತ್ತಾಯ; ಹೊಸ ದೂರು ದಾಖಲು!

News headlines 28-08-2025 | ಚಾಮುಂಡಿ ದೇವರು ಹಿಂದೂಗಳ ಆಸ್ತಿ ಅಲ್ಲ- DK Shivakumar; ಪ್ರಮೋದಾ ದೇವಿ ಒಡೆಯರ್ ಪ್ರತಿಕ್ರಿಯೆ ಏನು..?; ಬೀದರ್‌: ಭಾರಿ ಮಳೆ, ಹಲವು ಸೇತುವೆ ಬಂದ್; ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ ಮತ್ತೆ ED ಕಸ್ಟಡಿಗೆ

SCROLL FOR NEXT