ವಿಕೆಟ್ ಪಡೆದ ಖುಷಿಯಲ್ಲಿ ಸಂತಸ ವ್ಯಕ್ತಪಡಿಸುತ್ತಿರುವ ಅಕ್ಷರ್ ಪಟೇಲ್ 
ಕ್ರೀಡೆ

ಅಕ್ಷರ್ ಪಟೇಲ್ ಸ್ಪಿನ್ ದಾಳಿ

ಆಲ್‍ರೌಂಡರ್ ಅಕ್ಷರ್ ಪಟೇಲ್ (92/5) ನಡೆಸಿದ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಆತಿಥೇಯ ಭಾರತ `ಎ' ತಂಡ, ಪ್ರವಾಸಿ ದ.ಆಫ್ರಿಕಾ `ಎ' ತಂಡವನ್ನು 260 ರನ್‍ಗಳಿಗೆ ಆಲೌಟ್ ಮಾಡಿ ಮೇಲುಗೈ ಸಾಧಿಸಿದೆ...

ವಯನಾಡು: ಆಲ್‍ರೌಂಡರ್ ಅಕ್ಷರ್ ಪಟೇಲ್ (92/5) ನಡೆಸಿದ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಆತಿಥೇಯ ಭಾರತ `ಎ' ತಂಡ, ಪ್ರವಾಸಿ ದ.ಆಫ್ರಿಕಾ `ಎ' ತಂಡವನ್ನು 260 ರನ್‍ಗಳಿಗೆ ಆಲೌಟ್ ಮಾಡಿ ಮೇಲುಗೈ ಸಾಧಿಸಿದೆ.

ಇಲ್ಲಿನ ಕೃಷ್ಣಗಿರಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಪಂದ್ಯದ ಮೊದಲ ದಿನದಂದು ಪ್ರಾಬಲ್ಯ ಮೆರೆದ ಆತಿಥೇಯ ಭಾರತ ತಂಡದ ವಿರುದ್ಧ ಆರಂಭಿಕ ಸ್ಟಿಯಾನ್ ವಾನ್ ಜಿಲ್ (96) ಏಕಾಂಗಿ ಹೋರಾಟ ನಡೆಸಿ ಕೇವಲ 4 ರನ್‍ಗಳಿಂದ ಶತಕ ವಂಚಿತರಾದರು. ಬೆಳಿಗ್ಗೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದ. ಆಫ್ರಿಕಾ ತಂಡ ಉತ್ತಮ ಆರಂಭವನ್ನೇ ಕಂಡಿತಾದರೂ, ಮಧ್ಯಮ ಹಾಗೂ ಕೆಳ ಕ್ರಮಾಂಕಿತ ಆಟಗಾರರ ವೈಫಲ್ಯ ದಿಂದಾಗಿ ಸ್ಪರ್ಧಾತ್ಮಕ ಮೊತ್ತದಿಂದ ವಂಚಿತವಾಯಿತು.

ಆರಂಭಿಕ ರೀಜಾ ಹೆನ್ರಿಕ್ಸ್ (22) ಮತ್ತು ಸ್ಟಿಯಾನ್ ವಾನ್ ಜಿಲ್ ಜೋಡಿ ಮೊದಲ ವಿಕೆಟ್‍ಗೆ 58 ರನ್ ಕಲೆಹಾಕಿತು. ಆದರೆ ರೀಜಾ, ಅಕ್ಷರ್ ಪಟೇಲ್ ಬೌಲಿಂಗ್ ನಲ್ಲಿ ಬಾಬಾ ಅಪರಾಜಿತ್‍ಗೆ ಕ್ಯಾಚಿತ್ತು ಕ್ರೀಸ್ ತೊರೆದ ನಂತರ ಬಂದ ಗಿಹಾನ್ ಕ್ಲೊಯ್ಟಿ ಕೂಡ ಸ್ಥಿರ ಪ್ರದರ್ಶನ ನೀಡದೆ ತ್ವರಿತಗತಿಯಲ್ಲಿ ಕ್ರೀಸ್ ತೊರೆದರು. ಅವರು 26 ರನ್‍ಗಳಿಗೆ ನಿರುತ್ತರರಾದರು. ತದನಂತರ ಕ್ರೀಸ್‍ಗಿಳಿದ ಒಂಫೀಲಿ ರಮೇಲಾ 30 ರನ್ ಮಾಡಿ ಕರಣ್ ಶರ್ಮಾ ಬೌಲಿಂಗ್‍ನಲ್ಲಿ ಬಾಬಾ ಅಪರಾಜಿತ್‍ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡದ್ದು ತಂಡದ ಹಿನ್ನಡೆಗೆ ಕಾರಣವಾಯಿತು. ಸ್ಟಿಯಾನ್ ಒಂದಷ್ಟು ಪ್ರತಿರೋಧ ತೋರಿ ಯಶಸ್ವಿ ಅರ್ಧಶತಕ ಪೂರೈಸಿದರಾದರೂ, ಅವರು ಶತಕ ಪೂರೈಸದಂತೆ ಯಾದವ್ ನೋಡಿಕೊಂಡರು. ಕರಾರುವಾಕ್ ಬೌಲಿಂಗ್ ಪ್ರದರ್ಶಿಸಿದ ಸ್ಪಿನ್ ಮಾಂತ್ರಿಕ ಅಕ್ಷರ್ ಪಟೇಲ್, ದ.ಆಫ್ರಿಕಾದ ಬ್ಯಾಟಿಂಗ್ ಬೆನ್ನೆಲುಬು ಮುರಿದರೆ, ಅವರಿಗೆ ಜೆ.ಜೆ. ಯಾದವ್ (53ಕ್ಕೆ 3), ಕರಣ್ ಶರ್ಮಾ 36ಕ್ಕೆ 2 ವಿಕೆಟ್ ಗಳಿಸಿ ಭರ್ಜರಿ ಸಾಥ್ ನೀಡಿದರು.

ಸಂಕ್ಷಿಪ್ತ ಸ್ಕೋರ್: ದ.ಆಫ್ರಿಕಾ ಎ ಮೊದಲ ಇನ್ನಿಂಗ್ಸ್ 89.5 ಓವರ್‍ಗಳಲ್ಲಿ 260 (ಸ್ಟಿಯಾನ್ ವಾನ್ ಜಿಲ್ 96, ಒಂಫೀಲಿ ರಮೇಲಾ 30, ಗಿಹಾನ್ ಕ್ಲೊಯ್ಟೀ 26, ಡೇನ್ ವಿಲಾಸ್ 24; ಅಕ್ಷರ್ ಪಟೇಲ್ 92ಕ್ಕೆ 5, ಜೆ.ಜೆ. ಯಾದವ್ 53ಕ್ಕೆ 3, ಕರಣ್ ಶರ್ಮಾ 36ಕ್ಕೆ 2).

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT