ದಿಲ್ಲಿ ವೀರ್ಸ್ ನ ಗುರುಪಾಲ್ ಸಿಂಗ್ ಹರ್ಯಾಣ ಹ್ಯಾಮರ್ಸ್ ನ ಯೂರಿ ಮೇರ್ ವಿರುದ್ಧ ಸೆಣಸಾಡುತ್ತಿರುವುದು (ಕೃಪೆ: ಪಿಟಿಐ) 
ಕ್ರೀಡೆ

ದಿಲ್ಲಿ ವೀರ್ಸ್ ವಿರುದ್ಧ ಹರ್ಯಾಣ ಜಯ

ಸ್ಟಾರ್ ಆಟಗಾರ ಯೋಗೇಶ್ವರ್ ದತ್ ಹಾಗೂ ಹಾಲಿ ವಿಶ್ವ ಚಾಂಪಿಯನ್ ಒಕಾಸಾನಾ ಹೆರ್ಹೆಲ್ ಅವರ ಭರ್ಜರಿ ಪ್ರದರ್ಶನದ ಸಹಾಯದಿಂದ, ಹರ್ಯಾಣ...

ನವದೆಹಲಿ: ಸ್ಟಾರ್ ಆಟಗಾರ ಯೋಗೇಶ್ವರ್ ದತ್ ಹಾಗೂ ಹಾಲಿ ವಿಶ್ವ ಚಾಂಪಿಯನ್ ಒಕಾಸಾನಾ ಹೆರ್ಹೆಲ್ ಅವರ ಭರ್ಜರಿ ಪ್ರದರ್ಶನದ ಸಹಾಯದಿಂದ, ಹರ್ಯಾಣ  ಹ್ಯಾಮರ್ಸ್ ತಂಡ, ಶನಿವಾರ ನಡೆದ ಪ್ರೊ ರೆಸ್ಲಿಂಗ್‍ನ  ಲೀಗ್ ಪಂದ್ಯದಲ್ಲಿ ದಿಲ್ಲಿ ವೀರ್ಸ್ ತಂಡದ ವಿರುದ್ಧ 5-2 ಅಂತರದ ಜಯ ಸಾಧಿಸಿತು. ಆದರೂ, ವಿನೇಶ್  ಫೋಗಟ್ ಗಳಿಸಿದ ಜಯ ಹಾಗೂ ಇತರ ಸ್ಪರ್ಧಾಳುಗಳು  ತೋರಿದ ತೀವ್ರ ಹೋರಾಟದ ಪರಿಣಾಮ ದಿಲ್ಲಿ ತಂಡ  ಕೃಪಾಂಕ ಪಡೆಯುವಲ್ಲಿ ಯಶಸ್ವಿಯಾಯಿತು. ಹರ್ಯಾಣದ ಪರ ಕಣಕ್ಕಿಳಿದಿದ್ದ ಲಿವಾನ್ ಲೋಪೆಜ್ ಅಜ್ಯುಸಿ , ದಿಲ್ಲಿ ತಂಡದ ದಿನೇಶ್ ಕುಮಾರ್ ಅವರನ್ನು  7-0 ಅಂತರದಲ್ಲಿ ಸೋಲಿಸಿದರು. ಮತ್ತೊಂದು  ಪಂದ್ಯದಲ್ಲಿ, ದಿಲ್ಲಿ ತಂಡದ ಗುರ್ಬಾಲ್ ಸಿಂಗ್,  ಹರ್ಯಾಣದ ಯೂರಿ ಮಿಯರ್ ವಿರುದ್ಧ ಗೆಲವು  ಸಾಧಿಸಿದರು. ಆನಂತರ ನಡೆದ ಮಹಿಳೆಯರ ಸುತ್ತಿನ  ಪಂದ್ಯದಲ್ಲಿ ಒಕ್ಸಾನಾ ಹೆರ್ಹೆಲ್ ಅವರು, ದಿಲ್ಲಿ ತಂಡದ  ಯೆಸಿಲಿರ್ಮಾರ್ಕ್ ವಿರುದ್ಧ ಜಯ ಗಳಿಸಿದರು. ಅಲ್ಲಿಗೆ, ದಿಲ್ಲಿ ತಂಡ, ಹರ್ಯಾಣ ವಿರುದ್ಧ 2-1ರ  ಮುನ್ನಡೆ ಸಾಧಿಸಿತು. ಆದರೆ ಇದಾದ ಮೇಲೆ, ಹರ್ಯಾಣ ಮತ್ತೆರಡು ಪಂದ್ಯಗಳಲ್ಲಿ ಜಯ ಗಳಿಸುವ ಮೂಲಕ ದಿಲ್ಲಿಯ  ವೇಗಕ್ಕೆ ಕಡಿವಾಣ ಹಾಕಿತು. ಮಹಿಳೆಯರ ಸುತ್ತಿನ ಪಂದ್ಯದ ಬಳಿಕ ನಡೆದ ಪುರುಷರ ಪಂದ್ಯದಲ್ಲಿ ಹರ್ಯಾಣದ ಹಿತೇಂದರ್, ದಿಲ್ಲಿಯ ಕ್ರಿಶನ್ ಕುಮಾರ್ ವಿರುದ್ಧ ಜಯ ಸಾಧಿಸಿದರೆ, ಗೀತಿಕಾ ಜಾಖರ್ ಅವರು,  ದಿಲ್ಲಿಯ ನಿಕ್ಕಿ ವಿರುದ್ಧ 2-2ರ ಅಂಕಗಳಲ್ಲಿದ್ದಾಗ,  ಎದುರಾಳಿ ಸ್ಪರ್ಧೆಯಿಂದ ಹಿಂದೆ ಸರಿದ ಪರಿಣಾಮ ತಾಂತ್ರಿಕ ವಿಧಾನದ ಅನುಸಾರ ಗೆಲವು ಸಾಧಿಸಿದರು.
ವಿಜೇಶ್ ಫೋಗಟ್ ಅವರು, ಹರ್ಯಾಣ ತಂಡದ ನಿರ್ಮಲಾ ದೇವಿ ವಿರುದ್ಧ ಜಯ ಸಾಧಿಸಿದರು. ಈ ಮೂಲಕ, ಅಂಕ ಗಳಿಕೆಯಲ್ಲಿ ಪುನಃ ಹರ್ಯಾಣ  ವಿರುದ್ಧ ಸಮಬಲ ಸಾಧಿಸಲು ದಿಲ್ಲಿಗೆ ನೆರವಾದರು.  ಆದರೆ, ಆನಂತರ ನಡೆದ ಮತ್ತೊಂದು ಪಂದ್ಯದಲ್ಲಿ,  ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ  ಉಜ್ಬೇಕಿಸ್ತಾನದ ನವ್ರುಜೋವ್ ಇಖ್ತಿಯೋರ್ ವಿರುದ್ಧ ಸೆಣಸಿದ ಹರ್ಯಾಣ ತಂಡದ ಯೋಗೇಶ್ವರ್ ದತ್,  ಆ ಪಂದ್ಯದಲ್ಲಿ 3-2 ಅಂತರದ ರೋಚಕ ಜಯ ಸಾಧಿಸಿ, ಹ್ಯಾಮರ್ಸ್ ತಂಡಕ್ಕೆ ದಿಲ್ಲಿ ವಿರುದ್ಧ ಗೆಲವು ತಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

SCROLL FOR NEXT