ಕ್ರೀಡೆ

ನಾನೂ ತಾರತಮ್ಯ ಎದುರಿಸಿದ್ದೆ :ಕಿರ್ಮಾನಿ

Srinivas Rao BV

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್‍ ಕೀಪರ್ ಸೈಯದ್ ಕಿರ್ಮಾನಿ ತಮ್ಮ ಆಟದ ದಿನಗಳಲ್ಲಿ ತಂಡದ ಸಹ ಆಟಗಾರರಿಂದ ತೀವ್ರತರದ ತಾರತಮ್ಯಕ್ಕೆ ಒಳಗಾಗಿದ್ದಾಗಿ ತಿಳಿಸಿದ್ದಾರೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ತಮ್ಮ ಆತ್ಮಚರಿತ್ರೆಯ ಕೃತಿಯು ಈ ಸಂಗತಿಯನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.

``1986 ಮತ್ತು 1993ರವರೆಗೆ ದೇಶೀಯ ಕ್ರಿಕೆಟ್‍ನಲ್ಲಿ ತಾನು ಉತ್ತುಂಗದಲ್ಲಿದ್ದೆ. ನನ್ನ ಜತೆಗೆ ಆಡಿದವರೇ ಮುಂದೆ ಆಯ್ಕೆಸಮಿತಿಯಲ್ಲಿದ್ದರು. ಕೆಲವೊಮ್ಮೆ ನಾನು ಕೆಲವರ ಅಹಮ್ಮಿಗೆ ಬಲಿಪಶುವಾಗಿದ್ದೇನೆ. ವಿವಾದಗಳಿಂದಾಗಲೀ ಇಲ್ಲವೇ ಫಿಟ್ನೆಸ್ ಸಮಸ್ಯೆಯನ್ನಾಗಲೀ ಎದುರಿಸದ ನನ್ನನ್ನು ಆಯ್ಕೆಗಾರರು ಪರಿಗಣಿಸಲಿಲ್ಲ. ಹೀಗೆ ನಾನು ತಾರತಮ್ಯಕ್ಕೆ ಒಳಗಾಗಿದ್ದೆ'' ಎಂದಿದ್ದಾರೆ.

SCROLL FOR NEXT