ಯುವರಾಜ್ ಸಿಂಗ್ ಮತ್ತು ಗೌತಮ್ ಗಂಭೀರ್ 
ಕ್ರೀಡೆ

ವಿಶ್ವಕಪ್ ತಂಡಕ್ಕೆ ಪರಿಗಣಿಸದೇ ಇರುವ ಬಗ್ಗೆ ಬೇಸರವಿದೆ

2011ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆಲುವಿನಲ್ಲಿ ಪ್ರಧಾನ ಪಾತ್ರವಹಿಸಿದ್ದ ಯುವರಾಜ್ ಸಿಂಗ್ ಮತ್ತು ಗೌತಮ್ ಗಂಭೀರ್ ಈ ಬಾರಿಯ...

2011ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆಲುವಿನಲ್ಲಿ ಪ್ರಧಾನ ಪಾತ್ರವಹಿಸಿದ್ದ ಯುವರಾಜ್ ಸಿಂಗ್ ಮತ್ತು ಗೌತಮ್ ಗಂಭೀರ್ ಈ ಬಾರಿಯ ವಿಶ್ವಕಪ್ ತಂಡದಲ್ಲಿಲ್ಲ. ಯುವರಾಜ್ ಮತ್ತು ಗಂಭೀರ್‌ನ್ನು ವಿಶ್ವಕಪ್ ತಂಡಕ್ಕೆ ಪರಿಗಣಿಸದೇ ಇರುವ ಬಗ್ಗೆ ಸಾಕಷ್ಟುಗಳು ಟೀಕೆ ವಿಮರ್ಶೆಗಳು  ಕೇಳಿಬಂದಿದ್ದವು. ಯುವರಾಜ್, ಗಂಭೀರ್‌ನಂತೆ ಅನುಭವೀ ಆಟಗಾರರಾದ ಹರ್ಭಜನ್ ಸಿಂಗ್, ವಿರೇಂದರ್ ಸೆಹ್ವಾಗ್, ಜಹೀರ್ ಖಾನ್, ಆಶಿಶ್ ನೆಹ್ರಾ ಮತ್ತು ಮುನಾಫ್ ಪಾಟೀಲ್‌ರನ್ನು ಕೈ ಬಿಟ್ಟಿರುವುದು ಕ್ರಿಕೆಟ್ ಪ್ರೇಮಿಗಳಲ್ಲಿ ಅಸಮಾಧಾನವನ್ನುಂಟು ಮಾಡಿತ್ತು.

ಆದರೆ ಇದೀಗ ಯುವರಾಜ್ ಸಿಂಗ್ ಮತ್ತು ಗೌತಂ ಗಂಭೀರ್ ವಿಶ್ವಕಪ್ ತಂಡಕ್ಕೆ ತಮ್ಮನ್ನು ಪರಿಗಣಿಸದೇ ಇರುವ ಬಗ್ಗೆ ಬೇಸರವನ್ನು ಹೇಳಿಕೊಂಡಿದ್ದಾರೆ.

"ನನ್ನನ್ನು ವಿಶ್ವಕಪ್ ತಂಡದಿಂದ ಕೈ ಬಿಟ್ಟಿರುವುದು ತುಂಬಾನೇ ಬೇಸರವಾಗಿದೆ. ಆದರನೇನು ಮಾಡುವುದು ಆ ನಿರ್ಧಾರ ಅವರಿಗೆ ಬಿಟ್ಟಿದ್ದು. ನಾನೀಗ ರಣಜಿ ಟ್ರೋಫಿಯತ್ತ ಗಮನ ಹರಿಸಿದ್ದು, ಮತ್ತೆ ಉತ್ತಮ ಫಾರ್ಮ್‌ನಲ್ಲಿ ಮರಳಲು ಪ್ರಯತ್ನಿಸುತ್ತಿದ್ದೇನೆ ''ಎಂದು ಯುವಿ ಹೇಳಿದ್ದಾರೆ.

ಆರಂಭಿಕ ದಾಂಡಿಗ ಗೌತಂ ಗಂಭೀರ್‌ನದ್ದು ಕೂಡಾ ಇದೇ ಮಾತು. ನಾನು ಹೆಚ್ಚು ರನ್‌ಗಳನ್ನು ಸ್ಕೋರ್ ಮಾಡುವ ಮೂಲಕ ಪಂದ್ಯಗಳನ್ನು ಗೆಲ್ಲಲು ಬಯಸುತ್ತೇನೆ. ಭಾರತದ ಪರವಾಗಿ ಆಡಿ ಗೆಲುವು ಸಾಧಿಸಬೇಕೆಂಬ ಬಯಕೆ ನನ್ನಲ್ಲಿದೆ. ಅದು ನನ್ನ ಡೆಲ್ಲಿ ಟೀಂ ಆಗಿರಲಿ ಅಥವಾ ಟ್ವೆಂಟಿ-20 ಮ್ಯಾಚ್‌ಗಳೇ ಆಗಿರಲಿ ನಾನು ಆಡಲು ಉತ್ಸುಕನಾಗಿದ್ದೇನೆ.

ನಾನು ವಿಶ್ವಕಪ್ ತಂಡದಲ್ಲಿ ಇಲ್ಲ ಎಂಬುದು ನನಗೆ ತುಂಬಾ ಬೇಸರ ತಂದಿದೆ. ನಾವು ಹಾಲಿ ಚಾಂಪಿಯನ್‌ಗಳು ಈ ಬಗ್ಗೆ ಹೆಮ್ಮೆ ಪಡುತ್ತೇವೆ. ನಾನು ಈ ವಿಶ್ವಕಪ್ ಟೀಂನಲ್ಲಿರಬೇಕೇಂದು ಬಯಸಿದ್ದೆ ಎಂದು ಗಂಭೀರ್ ಮನಸ್ಸಿನ ಮಾತು ಹೇಳಿದ್ದಾರೆ.

ಕಳೆದ ಸಲ ವಿಶ್ವಕಪ್ ಗೆಲುವಿಗೆ ಕಾರಣರಾದ ಯುವಿ ಮತ್ತು ಗಂಭೀರ್‌ಗೆ ವಿಶ್ವಕಪ್ ತಂಡದಲ್ಲಿ ಒಂದು ಅವಕಾಶ ಕೊಡಬೇಕಿತ್ತು ಎಂದು ಕ್ರಿಕೆಟ್ ಪ್ರೇಮಿಗಳ ಅಂಬೋಣ. ಆದರೇನು ಯುವ ಪಡೆಗೆ ಆದ್ಯತೆ ನೀಡುವಲ್ಲಿ ಟೀಂ ಇಂಡಿಯಾ ನಾಯಕ ಗಮನ ಹರಿಸಿರುವಾಗ ಎಷ್ಟೇ ಅನುಭವಿ ಆಟಗಾರರಾದರೂ ಹಿಂದೆ ಸರಿಯಲೇ ಬೇಕಲ್ಲವೇ?

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ