ಸರಿತಾ ದೇವಿ ಮತ್ತು ರಾಹುಲ್ ದ್ರಾವೀಡ್ 
ಕ್ರೀಡೆ

ಸರಿತಾ ದೇವಿ ಮಾಡಿದ್ದು ಸರಿಯಲ್ಲ: ರಾಹುಲ್ ದ್ರಾವೀಡ್

ಬಾಕ್ಸರ್ ಸರಿತಾ ದೇವಿ ಏಷ್ಯನ್ ಗೇಮ್ಸ್‌ನಲ್ಲಿ ಗೆದ್ದಿದ್ದ ಕಂಚಿನ ಪದಕವನ್ನು ತಿರಸ್ಕರಿಸಿದ್ದು ಸರಿಯಾದ ಕ್ರಮವಲ್ಲ...

ನವದೆಹಲಿ: ಬಾಕ್ಸರ್ ಸರಿತಾ ದೇವಿ ಏಷ್ಯನ್ ಗೇಮ್ಸ್‌ನಲ್ಲಿ ಗೆದ್ದಿದ್ದ ಕಂಚಿನ ಪದಕವನ್ನು ತಿರಸ್ಕರಿಸಿದ್ದು ಸರಿಯಾದ ಕ್ರಮವಲ್ಲ ಎಂದು ಮಾಜಿ ಕ್ರಿಕೆಟಿಗ ರಾಹುಲ್ ದ್ರಾವೀಡ್ ಹೇಳಿದ್ದಾರೆ.

ಸರಿತಾ ದೇವಿ ವರ್ತನೆಗೆ ನನ್ನ ಬೆಂಬಲವಿಲ್ಲ. ದೇಶಕ್ಕೆ ಬಂದ ಪದಕವನ್ನು ಸರಿತಾ ದೇವಿ ತಿರಸ್ಕರಿಸಬಾರದಿತ್ತು ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ಅಮಾನತುಗೊಂಡಿರುವ ಸರಿತಾ ದೇವಿ ವಿಶ್ವ ಚಾಂಪಿಯನ್‌ಷಿಪ್‌ನಿಂದ ವಂಚಿತರಾಗಿದ್ದಾರೆ. ಸರಿತಾ ದೇವಿ ವರ್ತನೆಯಿಂದ ಆಕೆಯನ್ನು ಅಮಾನತುಗೊಳಿಸಲಾಯಿತು.

ಆದರೆ, ಆಕೆಯ ಅಮಾನತನ್ನು ರದ್ದುಗೊಳಿಸುವಂತೆ ದೇಶದಲ್ಲೆಡೆ ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕ ಗಣ್ಯರು ಒತ್ತಾಯಿಸಿದ್ದರು. ಆದರೆ, ಸರಿತಾ ದೇವಿ ವರ್ತನೆಗೆ ವಿರೋಧ ವ್ಯಕ್ತಪಡಿಸಿರುವ ರಾಹುಲ್ ದ್ರಾವೀಡ್ ಆಕೆಗೆ ಬೆಂಬಲಿಸಲ್ಲ ಎಂದು ಹೇಳಿದ್ದಾರೆ.

ಸೆಮಿಫೈನ್‌ಲ್ಲಿ ಆದ ಘಟನೆಯಿಂದಾಗಿ ಆಕೆಗೆ ತುಂಬಾ ನೋವಾಗಿರುವುದರ ಬಗ್ಗೆ ನಾನು ವಿಷಾಧಿಸುತ್ತೇನೆ. ಆದರೆ 24 ಗಂಟೆಗಳ ನಂತರ ಆಕೆ ತೆಗೆದುಕೊಂಡ ನಿರ್ಧಾರ ಸರಿಯಿರಲಿಲ್ಲ. ಆಕೆ ಆ ರೀತಿ ಪದಕವನ್ನು ತಿರಸ್ಕರಿಸಬಾರದಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆಕೆಯ ಜೊತೆಗೆ ಇನ್ನು ಮೂವರು ಪೋಡೀಯಂನಲ್ಲಿದ್ದಾರೆ ಎಂಬ ಅರಿವಿರಬೇಕಿತ್ತು. ಆದರೆ, ಅದನ್ನು ಲೆಕ್ಕಿಸದೇ ಅವರು ಪದಕವನ್ನು ತಿರಸ್ಕರಿಸಿದ್ದಾರೆ. ಉದ್ದೇಶಪೂರ್ವಕವಾಗಿ ಮಾಡಿಲ್ಲವಾದರೂ, ಆಕೆ ಪದಕ ತಿರಸ್ಕರಿಸದ ಕ್ರಮ ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.

ಇಂಚಿಯಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನ ಬಾಕ್ಸಿಂಗ್ ಸೆಮಿಫೈನಲ್‌ನಲ್ಲಿ ಕೊರಿಯಾದ ಸ್ಪರ್ಧಿಯ ವಿರುದ್ದ ಸೋತ ಸರಿತಾ ದೇವಿ ತೀರ್ಪು ನೀಡುವಲ್ಲಿ ನಿರ್ಣಾಯಕರು ಪ್ರಮಾದವೆಸಗಿದರು ಎಂದು ಆರೋಪಿಸಿ ಪೋಡಿಯಂನಲ್ಲಿ ಪದಕವನ್ನು ನಿರಾಕಸಿದ್ದರು. 60 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಕಂಚಿನ ಪದಕ ಗೆದ್ದಿದ್ದ ಸರಿತಾ ದೇವಿ, ಪದಕ ಪ್ರದಾನದ ವೇಳೆ ಬೆಳ್ಳಿ ಪದಕ ಗೆದಿದ್ದ ದಕ್ಷಿಣ ಕೊರಿಯಾದ ಪಾರ್ಕ್ ಜಿ-ನಾ ಅವರಿಗೆ ಪದಕ ಹಿಂದಿರುಗಿಸಿ ಸಂಘಟಕರಿಗೆ ಮುಜುಗರವನ್ನುಂಟು ಮಾಡಿದ್ದರು.

ಸರಿತಾ ದೇವಿ ಸೇರಿದಂತೆ ಮೂವರು ತರಬೇತುದಾರರನ್ನು ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ) ಅನಿರ್ಧಿಷ್ಟ ಅವಧಿಗೆ ಅಮಾನತುಗೊಳಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT