ಕ್ರೀಡೆ

ಬೆಂಗಳೂರು ಎಫ್ ಸಿಗೆ ಮತ್ತೆ ಸೋಲಿನ ಕಹಿ

ಹಾಲಿ ಚಾಂಪಿಯನ್ ಹೆಗ್ಗಳಿಕೆಗೆ ತಕ್ಕ ಪ್ರದರ್ಶನ ನೀಡಲು ಮತ್ತೊಮ್ಮೆ ವಿಫಲರಾಗಿರುವ ಬೆಂಗಳೂರು...

ಕೋಲ್ಕತಾ: ಹಾಲಿ ಚಾಂಪಿಯನ್ ಹೆಗ್ಗಳಿಕೆಗೆ ತಕ್ಕ ಪ್ರದರ್ಶನ ನೀಡಲು ಮತ್ತೊಮ್ಮೆ ವಿಫಲರಾಗಿರುವ ಬೆಂಗಳೂರು ಎಫ್ ಸಿ ತಂಡದ ಆಟಗಾರರು ಐ-ಲೀಗ್‍ನ ಹೊಸ ಋತುವಿನ ಸಮರದಲ್ಲಿ ತಮ್ಮ ಮೂರನೇ ಪಂದ್ಯದಲ್ಲೂ ಮೊದಲ ಗೆಲವು ದಾಖಲಿಸುವಲ್ಲಿ ಮುಗ್ಗರಿಸಿದ್ದಾರೆ.

ಇಲ್ಲಿನ ಯುವ ಭಾರತಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಆತಿಥೇಯ ಈಸ್ಟ್ ಬೆಂಗಾಲ್ ಆಟಗಾರರು 1-0 ಗೋಲಿನಿಂದ ಬೆಂಗಳೂರು ಎಫ್ ಸಿಗೆ ಸೋಲುಣಿಸಿದರು. ಸಂಪರ್ಕ ಆಟಗಾರ ಅಭಿನಾಸ್ ರ್ಯೂಡಾಸ್ ಪಂದ್ಯದ 53ನೇ ನಿಮಿಷದಲ್ಲಿ ಗೋಲು ಗಳಿಸಿ ಈಸ್ಟ್ ಬೆಂಗಾಲ್ ತಂಡಕ್ಕೆ ರೋಚಕ ಗೆಲವು ತಂದುಕೊಟ್ಟರು.

ನಿಗದಿತ ಅವಧಿಯಲ್ಲಿ ಎರಡೂ ತಂಡಗಳಿಗೆ ಗೋಲಿನ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಆದರೆ, ಎರಡನೇ ಅವಧಿಯ ಆಟ ಪ್ರಾರಂಭವಾಗಿ ಐದು ನಿಮಿಷ ಕಳೆಯುವಷ್ಟರಲ್ಲಿಯೇ ಈಸ್ಟ್ ಬೆಂಗಾಲ್ ಗೋಲಿನ ಖಾತೆ ತೆರೆದು ಪಂದ್ಯದ ಮೇಲೆ ಹಿಡಿತ ಸಾಧಿಸಿತು.

ಮೊದಲ ಪಂದ್ಯದಲ್ಲಿ ಡೆಂಪೊ ಎದುರು ಗೋಲುರಹಿತ ಡ್ರಾ ಹಾಗೂ ಎರಡನೇ ಪಂದ್ಯದಲ್ಲಿ ಪುಣೆ ಎದುರು ಏಕೈಕ ಗೋಲಿನಿಂದ ಆಘಾತ ಅನುಭವಿಸಿದ್ದ ಸುನೀಲ್ ಛೆಟ್ರಿ ಪಡೆ, ಮೂರನೇ ಪಂದ್ಯದಲ್ಲೂ ಕೂಡ ಬೆಂಗಾಲ್ ಎದುರು ಅದೇ ವೈಫಲ್ಯವನ್ನೇ ಮುಂದುವರಿಸಿತು.

ಪಂದ್ಯದ ವೇಳೆ ಕೊಂಚ ಒತ್ತಡದಲ್ಲಿಯೇ ಇದ್ದಂತೆ ಕಂಡುಬಂದ ಬೆಂಗಳೂರು ಎಫ್ ಸಿ, ಮೊದಲ ಅವ„ಯಲ್ಲಿ ಎದುರಾಳಿ ಮುಂದೆ ಕಠಿಣ ಸವಾಲುಗಳನ್ನೇ ನಿಲ್ಲಿಸಿತು. ಆದರೆ,
ಉತ್ತರಾರ್ಧದ ಶುರುವಿನಲ್ಲಿಯೇ ಎದುರಾಳಿಗೆ ಮೇಲುಗೈ ಸಾಧಿಸಲು ಅವಕಾಶ ಮಾಡಿಕೊಟ್ಟಿತು.

ಇನ್ನೊಂದೆಡೆ ಈಸ್ಟ್ ಬೆಂಗಾಲ್, ತನ್ನ ಎರಡನೇ ಪಂದ್ಯದಲ್ಲಿ ಮೊದಲ ಗೆಲವು ದಾಖಲಿಸಿ ಪ್ರಭುತ್ವ ಮೆರೆಯಿತು. ಮೊದಲ ಪಂದ್ಯದಲ್ಲಿ ಆತಿಥೇಯರು, ಸ್ಪೋರ್ಟಿಂಗ್ ಗೋವಾ ವಿರುದ್ಧ 1-1ರಿಂದ ಡ್ರಾ ಫಲಿತಾಂಶ ಪಡೆದಿದ್ದರು. ಈ ಸೋಲಿನೊಂದಿಗೆ ಬೆಂಗಳೂರು ಎಫ್ ಸಿ ಮೂರು ಪಂದ್ಯಗಳಿಂದ 1 ಅಂಕದ ಸಂಪಾದನೆಯಲ್ಲಿಯೇ ಉಳಿದರೆ, ಈಸ್ಟ್ ಬೆಂಗಾಲ್ 2 ಪಂದ್ಯಗಳಿಂದ ಅಂಕಗಳಿಕೆಯನ್ನು 4ಕ್ಕೆ ಹೆಚ್ಚಿಸಿಕೊಂಡಿತು.

ಡ್ರಾ ಪಂದ್ಯದಲ್ಲಿ ಸಲ್ಗಾಂವಕರ್

ಮಡಗಾಂವ್‍ನಲ್ಲಿ ಇಂದೇ ನಡೆದ ಮತ್ತೊಂದು ಪಂದ್ಯದಲ್ಲಿ ಆತಿಥೇಯ ಸಲ್ಗಾಂವಕರ್ ಮತ್ತು ಮೋಹನ್ ಬಗಾನ್ ತಂಡಗಳು ಗೋಲುರಹಿತ ಡ್ರಾ ಫಲಿತಾಂಶಕ್ಕೆ ತೃಪ್ತಿ ಹೊಂದಿದವು. ಎರಡೂ ತಂಡಗಳಿಗೆ ಗೋಲು ಗಳಿಸುವ ಕೆಲ ಉತ್ತಮ ಅವಕಾಶಗಳು ಲಭಿಸಿದ್ದವು. ಆದರೆ, ಗುರಿ ಸೇರುವ ಹಾದಿಯಲ್ಲಿ ವಿಫಲವಾದವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯಾವ ಸಂದೇಶವೂ ಇಲ್ಲ, ಪಕ್ಷದ ನಾಯಕರ ಜತೆಗಿನ ಮಾತುಕತೆ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡಲ್ಲ: ಡಿ.ಕೆ. ಶಿವಕುಮಾರ್

ತಿರುಮಲ ಬಳಿಕ ಶಬರಿಮಲೆ ತುಪ್ಪದಲ್ಲೂ ಗೋಲ್ ಮಾಲ್: ವಿಜಿಲೆನ್ಸ್ ತನಿಖೆಗೆ ಕೇರಳ ಹೈಕೋರ್ಟ್ ಆದೇಶ!

ತಮಿಳುನಾಡಿನಲ್ಲಿ ಮಹಿಳೆಯರಿಗೆ ಅಧ್ಯಯನಕ್ಕೆ ಉತ್ತೇಜನ; ಉತ್ತರ ಭಾರತದಲ್ಲಿ ಮಕ್ಕಳನ್ನು ಹೆರಲು ಮಾತ್ರ ಪ್ರೋತ್ಸಾಹ- ಮಾರನ್

Cricket: 4 ವರ್ಷಗಳ ಬಳಿಕ ಅಗ್ರಸ್ಥಾನಕ್ಕೇರಿದ Virat Kohli, ಕುಸಿದ ರೋಹಿತ್ ಶರ್ಮಾ!

Iran Unrest: ಪ್ರತಿಭಟನೆ ಮುಂದುವರೆಸಿ- ಜನತೆಗೆ ಟ್ರಂಪ್ ಕರೆ ಬೆನ್ನಲ್ಲೇ UNSC ಗೆ ಇರಾನ್ ಪತ್ರ!

SCROLL FOR NEXT