ಸರಣಿ ಗೆದ್ದ ನ್ಯೂಜಿಲೆಂಡ್ ತಂಡ (ಸಂಗ್ರಹ ಚಿತ್ರ) 
ಕ್ರೀಡೆ

ಶ್ರೀಲಂಕಾಗೆ ಗೆಲವು

ಕುಮಾರ ಸಂಗಕ್ಕಾರ ಅವರ ಶತಕದ ನೆರವಿನಿಂದ ಶ್ರೀಲಂಕಾ ತಂಡ, ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ...

ವೆಲ್ಲಿಂಗ್ಟನ್: ಕುಮಾರ ಸಂಗಕ್ಕಾರ ಅವರ ಶತಕದ ನೆರವಿನಿಂದ ಶ್ರೀಲಂಕಾ ತಂಡ, ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ 34 ರನ್‍ಗಳ ಜಯ ಸಂಪಾದಿಸಿತು.

ಈ ಪಂದ್ಯದ ಜಯದ ಹೊರತಾಗಿಯೂ ಸರಣಿಯನ್ನು 4-2 ಅಂತರದಿಂದ ಸೋತ ಲಂಕಾ ತಂಡಕ್ಕೆ ಕೊನೆಯ ಪಂದ್ಯ ಗೆದ್ದಿದ್ದಷ್ಟೇ ಸಮಾಧಾನದ ಸಂಗತಿ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ, 50 ಓವರ್‍ಗಳಲ್ಲಿ 287 ರನ್ ಗಳಿಸಿತ್ತು. ಆನಂತರ ಬ್ಯಾಟಿಂಗ್‍ಗೆ ಇಳಿದ ಕಿವೀಸ್ ಪಡೆ, 45.2 ಓವರ್‍ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 253ಕ್ಕೆ
ಶರಣಾಯಿತು.

71 ರನ್‍ಗಳಿಗೆ 1 ವಿಕೆಟ್ ಕಳೆದುಕೊಂಡಿದ್ದಾಗ, ಶ್ರೀಲಂಕಾದ ಇನಿಂಗ್ಸ್ ಜವಾಬ್ದಾರಿ ಹೊತ್ತಿದ್ದ ಸಂಗಕ್ಕಾರ 105 ಎಸೆತಗಳಲ್ಲಿ 113 ರನ್ ದಾಖಲಿಸಿ, ತಂಡ ಉತ್ತಮ ಪೇರಿಸುವಲ್ಲಿ ನೆರವಾದರು. ಸಂಗಕ್ಕಾರ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ವಿಲಿಯಮ್ಸ್ ಸರಣಿ ಶ್ರೇಷ್ಠ ಗೌರವ ಪಡೆದರು.

ಹೊಸ ದಾಖಲೆ
ಈ ಪಂದ್ಯದ ಮೂಲಕ, ಅತಿ ಹೆಚ್ಚು ಬ್ಯಾಟ್ಸ್‍ಮನ್‍ಗಳನ್ನು ಪೆವಿಲಿಯನ್‍ಗೆ ಅಟ್ಟಿದ ವಿಕೆಟ್ ಕೀಪರ್ ಎಂಬ ಕೀರ್ತಿಗೆ ಸಂಗಕ್ಕಾರ ಭಾಜನರಾಗಿದ್ದಾರೆ. ಈ ಮೂಲಕ, ಆಸ್ಟ್ರೇಲಿಯಾದ ಆಟಗಾರ ಗಿಲ್ ಕ್ರಿಸ್ಟ್ ಹೆಸರಲ್ಲಿದ್ದ ಹಿಂದಿನ ದಾಖಲೆಯನ್ನು ಅಳಿಸಿಹಾಕಿದರು. ಇದೀಗ, ಅತಿ ಹೆಚ್ಚು ವಿಕೆಟ್ ಉರುಳಿಸಿದ ವಿಕೆಟ್ ಕೀಪರ್‍ಗಳ ಪಟ್ಟಿಯ ಮೊದಲ ಸ್ಥಾನದಲ್ಲಿ ಸಂಗಕ್ಕಾರ (474) ಇದ್ದರೆ, ಆನಂತರದ ಸ್ಥಾನಗಳಲ್ಲಿ ಗಿಲ್ ಕ್ರಿಸ್ಟ್ (472), ದಕ್ಷಿಣ ಆಪಿs್ರಕಾದ ಮÁರ್ಕ್ ಬೌಚರ್ (424) ಹಾಗೂ ಭಾರತದ ಮಹೇಂದ್ರ ಸಿಂಗ್ ಧೋನಿ (314) ಇದ್ದಾರೆ.

ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ 287 (50 ಓವರ್)
ಸಂಗಕ್ಕಾರ 113, ದಿಲ್ಶಾನ್ 81
ಬೌಲಿಂಗ್: ಆ್ಯಂಡರ್ಸನ್ 59ಕ್ಕೆ 3, ಸೌಥೀ 50ಕ್ಕೆ 2
ನ್ಯೂಜಿಲೆಂಡ್ 45.2 ಓವರ್‍ನಲ್ಲಿ 253ಕ್ಕೆ ಆಲೌಟ್
ವಿಲಿಮ್ಸನ್ 54, ರೊಂಚಿ 47
ಬೌಲಿಂಗ್: ಎರಂಗಾ 34ಕ್ಕೆ 2, ಕುಲಸೇಕರ 55ಕ್ಕೆ 2.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT