ಭಾರತೀಯ ವನಿತೆಯರ ಹಾಕಿ ತಂಡ 
ಕ್ರೀಡೆ

ವಿಶ್ವ ಹಾಕಿ: ವನಿತೆಯರ ಆಸೆ ಇನ್ನೂ ಜೀವಂತ

ತನಗಿಂತ ಕೆಳ ಶ್ರೇಯಾಂಕದ ಇಟಲಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ ವನಿತಾ ಹಾಕಿ ತಂಡ, ಆ ಮೂಲಕ ಮುಂದಿನ ವರ್ಷ ರಿಯೋದಲ್ಲಿ...

ಆ್ಯಂಟ್ವೆರ್ಪ್(ಬೆಲ್ಜಿಯಂ): ತನಗಿಂತ ಕೆಳ ಶ್ರೇಯಾಂಕದ ಇಟಲಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ ವನಿತಾ ಹಾಕಿ ತಂಡ, ಆ ಮೂಲಕ ಮುಂದಿನ ವರ್ಷ ರಿಯೋದಲ್ಲಿ ನಡೆಯಲಿರುವ ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟದ ಆಸೆಯನ್ನು ಜೀವಂತ ವಾಗಿಟ್ಟುಕೊಂಡಿದೆ.
ಗುರುವಾರ ಕೆಎಚ್‍ಸಿ ಡ್ರ್ಯಾಗನ್ಸ್ ಕ್ರೀಡಾಂಗಣದಲ್ಲಿ ನಡೆದ 5-8ನೇ ಸ್ಥಾನಕ್ಕಾಗಿನ ಕಾದಾಟದಲ್ಲಿ 13ನೇ ಶ್ರೇಯಾಂಕಿತ ಭಾರತ ವನಿತೆಯರು 16ನೇ ಶ್ರೇಯಾಂಕಿತ ಇಟಲಿ ವಿರುದ್ಧ 5-4ರ ಪೆನಾಲ್ಟಿ ಶೂಟೌಟ್‍ನ ರೋಚಕ ಗೆಲುವಿನೊಂದಿಗೆ ಸಂಭ್ರಮಿಸಿತು. ಇದೀಗ ಶನಿವಾರ ನಡೆಯಲಿರುವ ಐದು ಹಾಗೂ ಆರನೇ ಸ್ಥಾನಕ್ಕಾಗಿನ ಸ್ಪರ್ಧಾವಳಿಯಲ್ಲಿ ರಿತು ರಾಣಿ ಸಾರಥ್ಯದ ಭಾರತ ತಂಡ ಮತ್ತೊಂದು ಅಗ್ನಿಪರೀಕ್ಷೆ ಎದುರಿಸಬೇಕಿದೆ. ವರ್ಗೀಕರಣದ ಮತ್ತೊಂದು ಪ್ಲೇ-ಆಫ್ ಪಂದ್ಯದಲ್ಲಿ ಬೆಲ್ಜಿಯಂ ಹಾಗೂ ಜಪಾನ್ ಪರಸ್ಪರ ಸೆಣಸಲಿದ್ದು, ಇಲ್ಲಿ ಗೆದ್ದ ತಂಡದೊಟ್ಟಿಗೆ ಭಾರತ ವನಿತಾ ತಂಡ ಕಾದಾಡಲಿದೆ.
ಈ ಪಂದ್ಯಾವಳಿಯಲ್ಲಿ ಮೂರು ತಂಡಗಳು ಒಲಿಂಪಿಕ್ಸ್‍ಗೆ ಅರ್ಹತೆ ಗಳಿಸುವ ಅವಕಾಶವಿದೆ. ಆದಾಗ್ಯೂ ಕೆಲ ತಂಡಗಳು ಸೆಮಿಫೈನಲ್‍ಗೆ ಅರ್ಹತೆ ಗಿಟ್ಟಿಸದೆ ಹೋದರೂ, ಬಹುತೇಕ ರಿಯೋಗೆ ಅರ್ಹತೆ ಪಡೆಯುವ ಸಾಧ್ಯತೆ ಇದೆ. ಇನ್ನು 60 ನಿಮಿಷಗಳ ಪೂರ್ಣಾವಧಿಯ ಪಂದ್ಯವು 1-1 ಗೋಲುಗಳಿಂದ ಸಮಬಲ ಸಾಧಿಸಿದಾಗ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಗೆ ಮೊರೆ ಹೋಗಲಾಯಿತು. ಪಂದ್ಯದಾದ್ಯಂತ ಸಿಕ್ಕ ಕೆಲವೊಂದು ಅಪೂರ್ವ ಅವಕಾಶಗಳನ್ನು ಕೈಚೆಲ್ಲಿದ ಭಾರತ ವನಿತೆಯರು, ಪೆನಾಲ್ಟಿ ಶೂಟೌಟ್ ನಲ್ಲಿ ಮಾತ್ರ ಎಚ್ಚರಿಕೆ ವಹಿಸಿತು. ಭಾರತದ ಪರ ಅನುಭವಿ ಆಟಗಾರ್ತಿ ವಂದನಾ ಕಟಾರಿಯಾ, ನವಜೋತ್ ಕೌರ್, ಅನುರಾಧ ಥೊಕ್‍ಚೊಮ್, ರಾಣಿ ರಾಂಪಾಲ್ ಹಾಗೂ ದೀಪಿಕಾ ಗೋಲು ಬಾರಿಸಿದರು.
ಇಟಲಿ ಪರ ವಾಲೆಂಟಿನಾ ಬ್ರಕೋನಿ, ಮಾರ್ಸೆಲಾ ಕ್ಯಾಸಲಿ, ಗುಲಿಯಾನ ರುಗ್ಗೇರಿ ಮತ್ತು ಚಿಯಾರ ಟಿಡ್ಡಿ ಗೋಲು ದಾಖಲಿಸುವಲ್ಲಿ ಯಶ ಕಂಡರು. ಆದರೆ ಡಲಿಲಾ ಮಿರಾಬೆಲ್ಲಾ ಬಾರಿಸಿದ ಗೋಲನ್ನು ಭಾರತದ ಗೋಲಿ ಹುಸಿಯಾಗಿಸಿದ್ದರಿಂದ ರಿತು ರಾಣಿ ಪಡೆ ವಿಜಯೀಭವವಾಯಿತು. ಭಾರತ ವನಿತಾ ತಂಡ 1980ರ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದು ಬಿಟ್ಟರೆ ಇಲ್ಲೀವರೆಗೂ ಒಲಿಂಪಿಕ್ಸ್ ಕೂಟದಲ್ಲಿ ಭಾಗವಹಿಸಲು ಅವಿರತವಾಗಿ ಶ್ರಮಿಸುತ್ತಲೇ ಬಂದಿದೆಯಾದರೂ, ಅದೇನೂ ಕೈಗೂಡಿಲ್ಲ. ಈ ದಿಸೆಯಲ್ಲಿ ಶನಿವಾರ ನಡೆಯಲಿರುವ ಪಂದ್ಯವು ಅತ್ಯಂತ ಮಹತ್ವಪೂರ್ಣವೆನಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT