ಕ್ರೀಡೆ

ವಿಶ್ವ ಜೂನಿಯರ್ ಗಾಲ್ಫ್ ಪ್ರಶಸ್ತಿ ಗೆದ್ದ ಬಾಲಪ್ರತಿಭೆ ಶುಭಂ ಜಗ್ಲಾನ್

ಲಾಸ್ ವೇಗಾಸ್ ನಲ್ಲಿ ಗುರುವಾರ ನಡೆದ ಐಜೆಜಿಎ ವಿಶ್ವ ತಾರೆಯರ ಜೂನಿಯರ್ ಗಾಲ್ಫ್ ಸ್ಪರ್ಧೆಯಲ್ಲಿ ಭಾರತದ ಅಪ್ರತಿಮ ಬಾಲಪ್ರತಿಭೆ ಶುಭಂ ಜಗ್ಲಾನ್...

ನವದಹೆಲಿ: ಲಾಸ್ ವೇಗಾಸ್ ನಲ್ಲಿ ಗುರುವಾರ ನಡೆದ ಐಜೆಜಿಎ ವರ್ಲ್ಡ್ ಸ್ಟಾರ್ಸ್ ಆಫ್ ಜೂನಿಯರ್ ಗಾಲ್ಫ್ ಸ್ಪರ್ಧೆಯಲ್ಲಿ ಭಾರತದ ಅಪ್ರತಿಮ ಬಾಲ ಪ್ರತಿಭೆ ಶುಭಂ ಜಗ್ಲಾನ್ ಗಾಲ್ಫ್ ಪ್ರಶಸ್ತಿ ಗೆದ್ದುಕೊಂಡಿದ್ದಾನೆ.

10 ವರ್ಷದ ಹರೆಯ ಶುಭಂ ಜಗ್ಲಾನ್ ಹರಿಯಾಣದ ಗ್ರಾಮೀಣ ಪ್ರತಿಭೆಯಾಗಿದ್ದು, ಕಳೆದ ಭಾನುವಾರವಷ್ಟೇ ಕ್ಯಾಲಿಫೋರ್ನಿಯದ ವೆಲ್ಕ್ ರಿಸಾರ್ಟ್ ಫೌಂಟೇನ್ ಕೋರ್ಸ್ ನಲ್ಲಿ ನಡೆದಿದ್ದ ಜೂನಿಯರ್ ವಿಶ್ವ ಗಾಲ್ಫ್ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಗೆದ್ದಿದ್ದ. ಇದೀಗ ಮತ್ತೆ ಐಜೆಜಿಎ ವಿಶ್ವ ತಾರೆಯರ ಜೂನಿಯರ್ ಗಾಲ್ಫ್ ಸ್ಪರ್ಧೆಯಲ್ಲಿ ಮತ್ತೊಂದು ಪ್ರಶಸ್ತಿ ಗಳಿಸುವ ಮೂಲಕ ಇತಿಹಾಸ ಪುಸ್ತಕದಲ್ಲಿ ತನ್ನ ಹೆಸರನ್ನು ದಾಖಲಿಸ ಹೊರಟಿದ್ದಾನೆ.

ಗುರುವಾರ ಲಾಸ್ ವೇಗಾಸ್ ನಲ್ಲಿ ನಡೆದ ಐಜೆಜಿಎ ವಿಶ್ವ ತಾರೆಯರ ಜೂನಿಯರ್ ಗಾಲ್ಫ್ ಸ್ಪರ್ಧೆಯಲ್ಲಿ ಶುಭಂ ಜಗ್ಲಾನ್ 3 ಸುತ್ತುಗಳ ಹೋರಾಟದಲ್ಲಿ 106 ಅಂಕಗಳನ್ನು ಗಳಿಸಿದ್ದ. ಈ ಮೂಲಕ ಜಸ್ಟಿನ ಡ್ಯಾಂಗ್, ಸಿಹಾನ್ ಸಂಧು ಹಾಗೂ ಥಯ್ಲಾಂಡ್  ನ ಪಾಂಗ್ಸಪಕ್ ಲೋಪಾಕ್ ದೀ ವಿರುದ್ಧ 5 ಸ್ಟ್ರೋಕ್ ಗಳ ವಿಜಯ ದಾಖಲಿಸಿ 9-10 ವರ್ಷ ಹುಡುಗರ ವರ್ಗದಲ್ಲಿ ಪ್ರಶಸ್ತಿ ಗೆದ್ದಿದ್ದಾನೆ.

ತನ್ನ ಪ್ರಶಸ್ತಿ ಹಾಗೂ ಸಾಧನೆ ಕುರಿತಂತೆ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಸಂತಸ ವ್ಯಕ್ತಪಡಿಸಿರುವ ಶುಭಂ ಜಗ್ಲಾನ್, ನನ್ನ ಗೆಲವು ಬಹುವರ್ಷಗಳ ಕನಸಾಗಿದ್ದು, ಎಲ್ಲವೂ ಒಂದು ಕನಸು ಎಂಬಂತಿದೆ. ಪ್ರಶಸ್ತಿ ಗೆದ್ದಿದ್ದು ಬಹಳ ಸಂತೋಷವಾಗುತ್ತಿದ್ದು, ನನ್ನ ಎಲ್ಲಾ ಗೆಳೆಯರು ತಮ್ಮ ಶುಭಹಾರೈಕೆಗಳನ್ನು ತಿಳಿಸುತ್ತಿದ್ದಾರೆ ಎಂದು ಹೇಳಿದ್ದಾನೆ.

ಇದೀಗ ನಾನು ಏನೇ ಮಾಡಿದ್ದರೂ ಅದು ನನ್ನ ಕುಟುಂಬ ಬೆಂಬಲದಿಂದ ಹಾಗೂ ನನ್ನ ಕೋಚ್ ನೀಡಿದ ತರಬೇತಿಯಿಂದಷ್ಟೇ. ನನ್ನ ಶಾಲೆ ನನ್ನ ಸಾಧನೆಗೆ ಸಾಕಷ್ಟು ಸಹಾಯ ಮಾಡಿತ್ತು. ಅಮೆರಿಕಗೆ ಹೋಗಲು, ಆಟವಾಡಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಶಾಲೆ ನೀಡಿತ್ತು. ಪ್ರಾಮಾಣಿಕವಾಗಿ ನಾನು ಆಟವಾಡುತ್ತೇನೆ. ಅದಕ್ಕಾಗಿ ಶ್ರಮ ಪಡುತ್ತೇನೆ. ಗೆಲ್ಲುವ ಪ್ರಯತ್ನದಲ್ಲಿ ಯಾವುದೇ ಕಾರಣಕ್ಕೂ ಅಡ್ಡ ದಾರಿ ಹಿಡಿಯುವ ಪ್ರಯತ್ನ ಮಾಡಿಲ್ಲ ಎಂದು ಹೇಳಿಕೊಂಡಿದ್ದಾನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT