ಪಾಟ್ನಾ ಪೈರೆಟ್ಸ್ ತಂಡ 
ಕ್ರೀಡೆ

ಪಾಟ್ನಾ ಪೈರೆಟ್ಸ್ ಗೆ ಮೊದಲ ಜಯ

ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಬೇಕೆಂಬ ಹಠದೊಂದಿಗೆ ಆತಿಥೇಯ ಜೈಪುರ ಪಿಂಕ್‍ಪ್ಯಾಂಥರ್ಸ್ ವಿರುದ್ಧ ಕಣಕ್ಕಿಳಿದ ಪಾಟ್ನಾ ಪೈರೆಟ್ಸ್, ರೋಚಕ...

ಜೈಪುರ: ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಬೇಕೆಂಬ ಹಠದೊಂದಿಗೆ ಆತಿಥೇಯ ಜೈಪುರ ಪಿಂಕ್‍ಪ್ಯಾಂಥರ್ಸ್ ವಿರುದ್ಧ  ಕಣಕ್ಕಿಳಿದ ಪಾಟ್ನಾ ಪೈರೆಟ್ಸ್, ರೋಚಕ ಹಣಾಹಣಿಯಲ್ಲಿ ತಮ್ಮ ಜಾಣ್ಮೆಯ ಆಟ ಪ್ರದರ್ಶಿಸಿ ಜಯ ಸಾಧಿಸಿತು. ಭಾನುವಾರ ಸವಾಯ್ ಮಾನ್‍ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೆಟ್ಸ್ ತಂಡ 29-23 ಅಂಕಗಳ ಅಂತರದಲ್ಲಿ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಗೆಲುವು ಸಂಪಾದಿಸಿತು. ಟೂರ್ನಿಯ ಆರಂಭಿಕ ಎರಡೂ ಪಂದ್ಯಗಳಲ್ಲಿ ಉಭಯ ತಂಡಗಳು ಸೋಲಿನ ಕಹಿ ಉಂಡಿದೆ. ಪಂದ್ಯದ ಆರಂಭಿಕ 5 ನಿಮಿಷದಲ್ಲಿ 3-2 ಅಂತರದ ಮುನ್ನಡೆ ಸಾಧಿಸಿದ್ದ ಪೈರೆಟ್ಸ್ ಪಡೆ ನಂತರದ ಹಂತದಲ್ಲಿ ಎದುರಾಳಿ ಪಡೆಯಿಂದ ಪ್ರತಿರೋಧ ಎದುರಿಸಿತು.

ಪಂದ್ಯದ ಬಹುತೇಕ ಹಂತದಲ್ಲಿ 1 ಅಥವಾ 2 ಅಂಕಗಳ ಅಂತರದಲ್ಲಿ ಉಭಯ ತಂಡಗಳು ಮೇಲುಗೈ ಸಾಧಿಸುತ್ತ ಪಂದ್ಯದ ರೋಚಕತೆಯನ್ನು ಹೆಚ್ಚಿಸಿದರು. ಉಭಯ ತಂಡಗಳ ಪೈಪೊಟಿ ತೀವ್ರವಾಗಿದ್ದ ಪರಿಣಾಮ ಪಿಂಕ್ ಪ್ಯಾಂಥರ್ಸ್ ಪಂದ್ಯದ ಮೊದಲಾರ್ಧದಲ್ಲಿ 11 10 ಅಂತರದ ಅಲ್ಪ ಮುನ್ನಡೆ ಸಾಧಿಸಿತ್ತು. ಪಂದ್ಯದ ಕಡೇಯ ಐದು ನಿಮಿಷದ ಆಟ ಬಾಕಿ ಉಳಿದಿದ್ದಾಗ ಗೆಲುವು ಯಾರ ಪಾಲಾಗಲಿದೆ ಎಂಬುದನ್ನು ನಿರ್ಧರಿಸಲು ಯಾರಿಂದಲೂ ಸಾಧ್ಯವಾಗದ ಪರಿಸ್ಥಿತಿ ಎದುರಾಗಿತ್ತು. ಈ ಹಂತದಲ್ಲಿ ಜೈಪುರ ತಂಡದ ರೈಡರ್ ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದ ಪಾಟ್ನಾ ರಕ್ಷಣಾತ್ಮಕ ವಿಭಾಗ ತಂಡ ಮೇಲುಗೈ ಸಾಧಿಸುವಂತೆ ಮಾಡಿದರು.

ಮುಂಬೈ ಅಜೇಯ ಯಾತ್ರೆ: ಪ್ರಸಕ್ತ ಟೂರ್ನಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡುತ್ತಿರುವ ಯುಮುಂಬಾ ತಂಡ ತನ್ನ ಅಜೇಯ ಯಾತ್ರೆ ಮುಂದುವರಿಸಿದೆ. ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಯು ಮುಂಬಾ ತಂಡ 27-26 ಅಂಕಗಳ ಅಂತರದಲ್ಲಿ ತೆಲುಗು ಟೈಟಾನ್ಸ್ ತಂಡವನ್ನು ಮಣಿಸಿತು. ಪಂದ್ಯದ ಆರಂಭದಲ್ಲಿ ಮುಂಬೈ ತಂಡ ಹಿನ್ನಡೆ ಅನುಭವಿಸಿತ್ತಾದರೂ ಅಂತಿಮ ಹಂತದಲ್ಲಿ ಹೋರಾಟಕಾರಿ ಪ್ರದರ್ಶನ ನೀಡುವ ಮೂಲಕ ಪಂದ್ಯದಲ್ಲಿ ನಿಯಂತ್ರಣ ಸಾಧಿಸಿತು. ತೆಲುಗು ಟೈಟಾನ್ಸ್ ತಂಡ ಆರಂಭಿಕ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತಾದರೂ ಈ ಪಂದ್ಯದಲ್ಲಿ ಮುಗ್ಗರಿಸಿ ಟೂರ್ನಿಯಲ್ಲಿ ಮೊದಲ ಆಘಾತ ಅನುಭವಿಸಿತು.

ನಿಲೇಶ್ ಶಿಂದೆಗೆ ಗಾಯ

ಕೊಲ್ಕೋತಾ: ದಬಾಂಗ್ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ನ ರಕ್ಷಣಾತ್ಮಕ ಆಟಗಾರ ನಿಲೇಶ್ ಶಿಂದೆ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಶನಿವಾರ ನಡೆದ ಪಂದ್ಯದ ವೇಳೆ ಬೆನ್ನು ನೋವಿಗೆ ಸಿಲುಕಿದ ನಿಲೇಷ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನು ಒಂದು ದಿನಗಳ ಕಾಲ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. 2 ದಿನಗಳ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

'ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ': ಕಿಚ್ಚ ಸುದೀಪ್ ದಿಢೀರ್ ಪೋಸ್ಟ್; ಇಲ್ಲಿದೆ ಕಾರಣ...

ಕಾನ್ಪುರದಲ್ಲಿ ತರಬೇತಿ ವಿಮಾನ ಪತನ: ಕರ್ನಾಟಕದ ಪೈಲಟ್‌ ಅಭಿಷೇಕ್​ ಸೇರಿ ಇಬ್ಬರು ಸಾವು; Video

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal flood: ಮೃತರ ಸಂಖ್ಯೆ 270ಕ್ಕೆ ಏರಿಕೆ, ಸುಮಾರು 288 ಭಾರತೀಯರು ನಾಪತ್ತೆ! 800ಕ್ಕೂ ಹೆಚ್ಚು ಜನರ ರಕ್ಷಣೆ