ಅಭಿನವ್ ಮುಕುಂದ್ ಮತ್ತು ಶ್ರೇಯಸ್ ಅಯ್ಯರ್ (ಕೃಪೆ: ಬಿಸಿಸಿಐ) 
ಕ್ರೀಡೆ

ಸೋಲಿನ ಭೀತಿಯಲ್ಲಿ ಪೂಜಾರ ಪಡೆ

ಮೊದಲ ಇನ್ನಿಂಗ್ಸ್‍ನಲ್ಲಿ ಅನುಭವಿಸಿದ್ದ ಬ್ಯಾಟಿಂಗ್ ವೈಫಲ್ಯವನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲವಾದ ಆತಿಥೇಯ ಭಾರತ ಎ ತಂಡ, ಪ್ರವಾಸಿ...

ಚೆನ್ನೈ: ಮೊದಲ ಇನ್ನಿಂಗ್ಸ್‍ನಲ್ಲಿ ಅನುಭವಿಸಿದ್ದ ಬ್ಯಾಟಿಂಗ್  ವೈಫಲ್ಯವನ್ನು ಮೆಟ್ಟಿ ನಿಲ್ಲುವಲ್ಲಿ  ವಿಫಲವಾದ ಆತಿಥೇಯ ಭಾರತ ಎ ತಂಡ, ಪ್ರವಾಸಿ ಆಸ್ಟ್ರೇಲಿಯಾ ಎ ತಂಡದ ವಿರುದ್ಧ ನಡೆಯುತ್ತಿರುವ ಎರಡನೇ ಹಾಗೂ ಅಂತಿಮ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ನೋಲಿನ ಭೀತಿಗೆ ಸಿಲುಕಿದೆ.

ಚೇಪಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶುಕ್ರವಾರದಂದು  ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ  83 ಓವರ್ಗಳಲ್ಲಿ 6 ವಿಕೆಟ್ಗೆ  267 ರನ್ ಮಾಡಿರುವ ಭಾರತ ಎ ತಂಡ ಆ ಮೂಲಕ  53 ರನ್ ಗಳ ಅಲ್ಪ ಮುನ್ನಡೆ ಕಂಡಿದೆ.

ಶನಿವಾರ ಪಂದ್ಯದ ಕೊನೇ ದಿನವಾಗಿದ್ದು ಪ್ರವಾಸಿಗರು ಗೆಲುವಿನ ಕನಸು ಹೊತ್ತಿದ್ದರೆ, ಉಳಿದ ನಾಲ್ಕು ವಿಕೆಟ್ ಗಳಿಂದ ಇನ್ನಷ್ಟು ರನ್ ಕಲೆಹಾಕಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಅವಕಾಶಕ್ಕಾಗಿ ಪೂಜಾರ ಪಡೆ
ಶ್ರಮಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ದಿನದಾಟದ ಅಂತ್ಯಕ್ಕೆ ಬಾಬಾ ಅಪರಾಜಿತ್ (28) ಮತ್ತು ಕರ್ನಾಟಕದ ಶ್ರೇಯಸ್ ಗೋಪಾಲ್ (0) ಕ್ರೀಸ್‍ನಲ್ಲಿದ್ದರು. ಈ ಈರ್ವರು ಆಟಗಾರರು ತೋರುವ ಪ್ರದರ್ಶನದ ಮೇಲೆ ಪಂದ್ಯದ ಫಲಿತಾಂಶ
ನಿರ್ಧಾರವಾಗಲಿದೆ.
ಮತ್ತೆ ತಡವರಿಸಿದ ಬ್ಯಾಟಿಂಗ್: ಇನ್ನು ಪಂದ್ಯದ ಎರಡನೇ ದಿನದಂದು 9 ವಿಕೆಟ್‍ಗೆ 329 ರನ್ ಗಳಿಸಿದ್ದ ಆಸ್ಟ್ರೇಲಿಯಾ `ಎ'ತಂಡ, ಶುಕ್ರವಾರ ಆಟ ಮುಂದುವರೆಸಿ 20 ರನ್ ಗಳನ್ನು ಕಲೆಹಾಕುವುದರೊಂದಿಗೆ  107.5 ಓವರ್ ಗಳಲ್ಲಿ 349ಕ್ಕೆ ಆಲೌಟ್ ಆಯಿತು. ಬಳಿಕ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಮತ್ತೆ ಸ್ಥಿರ ಪ್ರದರ್ಶನದ ಕೊರತೆಯಿಂದ ಕಂಗೆಟ್ಟಿತು.ವಿರಾಟ್ ಕೊ ಹ್ಲಿ (45) ಅಭಿನವ್ ಮುಕುಂದ್ (59) ಕರುಣ್  ನಾಯರ್ (31) ಶ್ರೇಯಸ್ ಅಯ್ಯರ್ (49) ಮತ್ತು ನಮನ್ ಓಜಾ 30 ರನ್ ಗಳಿಸಿ ಔಟಾದರು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ`ಎ' ಮೊದಲ ಇನ್ನಿಂಗ್ಸ್ 107.5 ಓವರ್‍ಗಳಲ್ಲಿ 349, ಭಾರತ `ಎ' ಎರಡನೇ ಇನ್ನಿಂಗ್ಸ್ 83 ಓವರ್‍ಗಳಲ್ಲಿ 6 ವಿಕೆಟ್‍ಗೆ
267 (ಅಭಿನವ್ 59, ಕೊಹ್ಲಿ 45, ಶ್ರೇಯಸ್ ಐಯ್ಯರ್ 49; ಸ್ಟೀಫನ್ ಒ'ಕೇಫಿ 83ಕ್ಕೆ 3)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT