ವಾವ್ರಿಂಕಾ 
ಕ್ರೀಡೆ

ವ್ಹಾ! ವಾವ್ರಿಂಕಾ

ವಿಶ್ವದ ನಂಬರ್‍ಒನ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರ ಕೈಯ್ಯಿಂದ ಮತ್ತೊಮ್ಮೆ _ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಂ ಕಿರೀಟ ಜಾರಿದೆ....

ಪ್ಯಾರಿಸ್: ವಿಶ್ವದ ನಂಬರ್‍ಒನ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರ ಕೈಯ್ಯಿಂದ ಮತ್ತೊಮ್ಮೆ _ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಂ ಕಿರೀಟ ಜಾರಿದೆ.

 ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಪುರುಷರ ಸಿಂಗಲ್ಸ್ _ಫೈನಲ್ ಪಂದ್ಯದಲ್ಲಿ ಜೊಕೊವಿಚ್ ಅವರು, ಸ್ವಿಜರ್ಲೆಂಡ್‍ನ ಸ್ಟಾನಿಸ್ಲಾಸ್ ವಾವ್ರಿಂಕಾ ವಿರುದ್ಧ 6-4, 6-4, 6-3 ಹಾಗೂ 6-4 ಸೆಟ್‍ಗಳ ಅಂತರದಲ್ಲಿ ಸೋಲು ಕಂಡರು.

 2012 ಹಾಗೂ 2014ರಲ್ಲಿ _ಫೈನಲ್‍ಗೆ ಕಾಲಿಟ್ಟಿದ್ದ ಜೊಕೊವಿಚ್ ಆ ಎರಡೂ ಬಾರಿ ರಾಫೆಲ್ ನಡಾಲ್ ಅವರಿಗೆ ಶರಣಾಗಿದ್ದರು. ಇದೀಗ, 8ನೇ ಶ್ರೇಯಾಂಕದ ವಾವ್ರಿಂಕಾ ಅವರಿಗೆ ತಲೆಬಾಗಿದ್ದಾರೆ. ಈ ಮೂಲಕ, ಅವರ 28 ಪಂದ್ಯಗಳ ಸತತ ಗೆಲವಿನ ನಾಗಾಲೋಟಕ್ಕೂ ಬ್ರೇಕ್ ಬಿದ್ದಿದೆ. ಇದೇ ಪಂದ್ಯಾವಳಿಯಲ್ಲಿ ಒಂಭತ್ತು ಬಾರಿ ಚಾಂಪಿಯನ್ ಆದ ರಾಫೆಲ್ ನಡಾಲ್ ಹಾಗೂ ವಿಶ್ವದ 3ನೇ ಶ್ರೇಯಾಂಕಿತ ಆಟಗಾರ ಆಂಡಿ ಮರ್ರೆ ಅವರನ್ನು ಸೋಲಿಸಿ _ಫೈನಲ್ ಪ್ರವೇಶಿಸಿದ್ದ ಜೊಕೊವಿಚ್‍ಗೆ, ವಾವ್ರಿಂಕಾ ಸೋಲಿನ ಕಹಿ ನೀಡಿದರು.

ಇಲ್ಲಿನ ಫಿಲಿಪ್- ಚಾರ್ಟಿಯರ್ ಅಂಕಣದಲ್ಲಿ ಸುಮಾರು 3 ಗಂಟೆ 12 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ, ಇಬ್ಬರ ಹೋರಾಟ ಮದಗಜಗಳ ಕಾದಾಟದಂತೆ ಸಾಗಿತ್ತು. ವಾವ್ರಿಂಕಾ ಅವರ ಚುರುಕಿನ ಆಟದ ಮಧ್ಯೆಯೂ ಮೊದಲ ಸೆಟ್‍ನಲ್ಲಿ ಗೆಲವು ಪಡೆಯುವಲ್ಲಿ ಸಫಲರಾಗಿದ್ದ ಜೊಕೊವಿಚ್, ನಂತರ ಎರಡೂ ಸೆಟ್‍ಗಳಲ್ಲಿ ಸೋಲು ಕಂಡರು. ಮುಂದೆ ನಾಲ್ಕನೇ ಸೆಟ್‍ನಲ್ಲಿ ತಮ್ಮ ಬಿರುಸಿನ ಆಟದಿಂದಾಗಿ, ಅಗ್ರಮಾನ್ಯ ಆಟಗಾರ ಜೊಕೊವಿಚ್ ಅವರನ್ನು ಮಂಕುಗೊಳಿಸಿದ ವಾವ್ರಿಂಕಾ ನೋಡನೋಡುತ್ತಿದ್ದಂತೆ ಅಂಕಗಳನ್ನು ಪೇರಿಸುತ್ತಾ ಸಾಗಿದರು. ಈ ಸೆಟ್‍ನಲ್ಲಿ ಶಕ್ತಿಮೀರಿ ಹೋರಾಡಿದ ಜೊಕೊವಿಚ್ ಅವರು, ಶತಾಯಗತಾಯ ಗೆಲ್ಲಲು ಪ್ರಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ. ಅಂತಿಮವಾಗಿ, ವಾವ್ರಿಂಕಾ ಅವರು ಇಲ್ಲಿ ಜಯಗಳಿಸಿ, ತಮ್ಮ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT