ರಮಣ್ ದೀಪ್ ಸಿಂಗ್ ಗಳಿಸಿದ ಗೋಲ್ ನಿಂದ ಭಾರತ ಪುರುಷರ ಹಾಕಿ ತಂಡ ಫ್ರಾನ್ಸ್ ವಿರುದ್ಧ ಜಯ ದಾಖಲಿಸಿತು. 
ಕ್ರೀಡೆ

ಭಾರತದ ಗೆಲುವಿನ ಶುಭಾರಂಭ

ಶನಿವಾರ ನಡೆದ ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಭಾರತ 3-2 ಗೋಲುಗಳ ರೋಚಕ ಜಯ ದಾಖಲಿಸಿತು...

ಬೆಲ್ಜಿಯಂ: ಪಂದ್ಯದ ಅಂತಿಮ ಘಟ್ಟದಲ್ಲಿ ರಮಣ್ ದೀಪ್ ಸಿಂಗ್ ಗಳಿಸಿದ ಗೋಲ್ ನ ಸಹಾಯದಿಂದಾಗಿ, ಭಾರತ ಪುರುಷರ ಹಾಕಿ ತಂಡ, ಶನಿವಾರ ನಡೆದ ವಿಶ್ವ ಹಾಕಿ ತಂಡ, ಶನಿವಾರ ನಡೆದ ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 3-2 ಗೋಲುಗಳ ರೋಚಕ ಜಯ ದಾಖಲಿಸಿತು.

ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ ಸರ್ದಾರ್ ಪಡೆ, ಫ್ರಾನ್ಸ್ ಗೆ ಪ್ರತಿ ಹಂತದಲ್ಲೂ ಸವಾಲೆಸೆಯುತ್ತಾ ಸಾಗಿತು. ಆದರೆ, ಪಂದ್ಯದ 4ನೇ ನಿಮಿಷದಲ್ಲಿ ಎದುರಾಳಿ ತಂಡದ ಮಿಡ್ ಫೀಲ್ಡರ್ ಸ್ಯಾಂಚೆಜ್ ಅವರು, ಗೋಲು ಗಳಿಸುವ ಮೂಲಕ ತಮ್ಮ ತಂಡಕ್ಕೆ 1-0 ಅಂತರದ ಮುನ್ನಡೆ ತಂದುಕೊಟ್ಟರು.

ಇದಾದ ನಂತರ, 27ನೇ ನಿಮಿಷದಲ್ಲಿ ಭಾರತಕ್ಕೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ, ಧರಮ್ ವೀರ್ ಸಿಂಗ್ ಅವರಿಂದ ಚೆಂಡನ್ನು ಪಾಸ್ ಪಡೆದ ಮನ್ ಪ್ರೀತ್ ಸಿಂಗ್ ಅವರು ಚೆಂಡನ್ನು ನೇರವಾಗಿ ಫ್ರಾನ್ಸ್ ನ ಗೋಲು ಪೆಟ್ಟಿಗೆಯೊಳಗೆ ಸೇರಿಸುವಲ್ಲಿ ಯಶಸ್ವಿಯಾದರು. ಈ ಮೂಲಕ, ಭಾರತ ತಂಡ, ಫ್ರಾನ್ಸ್ ವಿರುದ್ಧ 1-1ರ ಸಮಬಲ ಸಾಧಿಸಿತು.

ನಂತರ,29ನೇ ನಿಮಿಷದಲ್ಲಿ ಭಾರತ ಮತ್ತೊಂದು ಗೋಲು ದಾಖಲಿಸಿತು. ವಾಲ್ಮೀಕಿ ಈ ಗೋಲು ಗಳಿಸಿಕೊಟ್ಟರು. ಇದು ಫ್ರಾನ್ಸ್ ಎದುರು ಭಾರತಕ್ಕೆ 2-1ರ ಮುನ್ನಡೆ ಸಾಧಿಸಲು ನೆರವಾಯಿತು.

ಆದರೆ, 43ನೇ ನಿಮಿಷದಲ್ಲಿ, ಎದುರಾಳಿ ತಂಡದ ಮಿಡ್ ಫೀಲ್ಡರ್ ಮಾರ್ಟಿನ್ ಅವರು ಗೋಲು ಗಳಿಸುವ ಮೂಲಕ, ಪಂದ್ಯದಲ್ಲಿ ಫ್ರಾನ್ಸ್ ಸಮಬಲ ಸಾಧಿಸುವಲ್ಲಿ ನೆರವಾದರು. ಇದಾದ ಮೇಲೆ, ಇತ್ತಂಡಗಳು ಪೈಪೋಟಿಯಲ್ಲಿ ಆಡಿದ ಕಾರಣದಿಂದ ಪಂದ್ಯ ಅಂತಿಮ ಘಟ್ಟಕ್ಕೆ ಕಾಲಿಟ್ಟರೂ, ಯಾರು ಗೆಲ್ಲುತ್ತಾರೆಂಬ ಕುತೂಹಲ ಎಲ್ಲರನ್ನೂ ಕಾಡಿತು. ಈ ಎಲ್ಲರ ಕುತೂಹಲಕ್ಕೆ ತೆರೆ ಎಳೆದ ರಮಣ್ ದೀಪ್ ಸಿಂಗ್ ಅವರು, ಪಂದ್ಯದ 59ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಇದೇ ಅಂತರದಲ್ಲಿ, ಭಾರತ ಜಯಶಾಲಿಯಾಗಿ ಹೊರಹೊಮ್ಮಿತು.

ಆದರೆ ವಿಶ್ವ ಹಾಕಿ ಲೀಗ್ ನ ಸೆಮಿಫೈನಲ್ ಟೂರ್ನಿಯಲ್ಲಿ ಭಾರತೀಯ ಮಹಿಳೆಯರು ಆರಂಭದಲ್ಲೇ ಸೋಲಿನ ಕಹಿ ಕಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

SCROLL FOR NEXT