ಭಾರತದ ವನಿತೆಯರ ಹಾಕಿ ತಂಡ(ಸಾಂದರ್ಭಿಕ ಚಿತ್ರ) 
ಕ್ರೀಡೆ

ಭಾರತದ ವನಿತೆಯರಿಗೆ ಜಯ

ಸತತ ಎರಡು ಸೋಲಿನಿಂದ ಕಂಗೆಟ್ಟಿದ ಭಾರತದ ವನಿತೆಯರ ಹಾಕಿ ತಂಡ ಈಗ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ.

ಬೆಲ್ಜಿಯಂ: ಸತತ ಎರಡು ಸೋಲಿನಿಂದ ಕಂಗೆಟ್ಟಿದ ಭಾರತದ ವನಿತೆಯರ ಹಾಕಿ ತಂಡ ಈಗ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ಆ ಮೂಲಕ ವಿಶ್ವ ಹಾಕಿ ಲೀಗ್ ಸೇಮಿಫಿಲ್ ಟೂರ್ನಿಯಲ್ಲಿ ಜಯದ ನಗೆಬೀರಿದೆ.

ಮೂರನೆ ಗುಂಪು ಹಂತದ ಪಂದ್ಯದದಲ್ಲಿ ಭಾರತ ವನಿತೆಯರು 3 -1, ಗೋಲುಗಳ ಅಂತರದಿಂದ ಪೋಲೆಂಡ್ ವಿರುದ್ಧ ಆಟಗಾರ್ತಿಯರ ಮೇಲೆ ನಿಯಂತ್ರಣ ಸಾಧಿಸಿ ಪೂರ್ಣ ಪ್ರಮಾಣದಲ್ಲಿ ಪ್ರಾಬಲ್ಯ ಮೆರೆದರು. ಪಂದ್ಯದ ಎರಡನೆ ಕ್ವಾರ್ಟರ್ ನ ಆರಂಭದಲ್ಲಿ ಅಂದರೆ, 21 ನೇ ನಿಮಿಷದಲ್ಲಿ ಪೂನಂ ರಾಣಿ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಸೇರಿಸಿದರು.

ನಂತರ 29 ನೇ ನಿಮಿಷದಲ್ಲಿ ಸುನಿತಾ ಲಕ್ರಾ ಎದುರಾಳಿ ಗೋಲ್ ಕೀಪರ್ ಕಣ್ತಪ್ಪಿಸಿ ಚೆಂಡನ್ನು ಗೋಲುಪೆಟ್ಟಿಗೆಯೊಳಗೆ ನುಸುಳಿದರು, ಈ ಮೂಲಕ ಪಂದ್ಯದ ಮೊದಲಾರ್ಧದ ಮುಕ್ತಾಯಕ್ಕೆ ಭಾರತ 2 -0 ಗೋಲುಗಳ ಮುನ್ನಡೆ ಸಾಧಿಸಿ ಪೋಲೆಂಡ್ ಆಟಗಾರ್ತಿಯರ ಮೇಲೆ ಒತ್ತಡ ಹೇರುವಲ್ಲಿ ಸಫಲವಾಯಿತು.

ಪಂದ್ಯದ ಮೂರನೇ ಕ್ವಾರ್ಟರ್ ನಲ್ಲೂ ಭಾರತ ವನಿತೆಯರು ಪೋಲೆಂಡ್ ಆಟಗಾರ್ತಿಯರನ್ನು ಕಾಡುವಲ್ಲಿ ಯಶಸ್ವಿಯಾದರು. ಈ ಅವಧಿಯಲ್ಲಿ ಯಾವುದೇ ಗೋಲು ದಾಖಲಾಗದಿದ್ದರೂ ಭಾರತ ವನಿತೆಯರ ಪ್ರಾಬಲ್ಯ ಹೆಚ್ಚಿತ್ತು.

ಪಂದ್ಯದ ನಾಲ್ಕನೆ ಹಾಗೂ ಅಂತಿಮ ಕ್ವಾರ್ಟರ್ ನಲ್ಲಿ ಉಭಯ ಆಟಗಾರ್ತಿಯರು ಜಿದ್ದಾಜಿದ್ದಿನ ಹೋರಾಟ ನಡೆಸಿದರು. ಈ ವೇಳೆ ಪಂದ್ಯದಲ್ಲಿ ಪ್ರತಿರೋಧ ನೀಡಿದ ಪೋಲೆಂಡ್ ಆಟಗಾರ್ತಿಯರು ಗೋಳಿನ ಖಾತೆ ತೆರೆದರು. 49 ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡ ಪೋಲೆಂಡ್ ಫೀಲ್ಡ್ ಗೋಲು ದಾಖಲಿಸಿತು.ಇದು ಅವರು ಟೂರ್ನಿಯಲ್ಲಿ ಹಳಿಸಿದ ಮೊದಲ ಗೋಲು.

54 ನೇ ನಿಮಿಷದಲ್ಲಿ ಲಕ್ರಾ ಹಾಗೂ ರಾಣಿ ಅವರ ಪಾಸ್ ನಿಂದ ಬಂದ ಚೆಂಡನ್ನು ವಂದನಾ ಗೋಲಿನತ್ತ ಸಾಗುವಂತೆ ಮಾಡಿದರು. ನಂತರ ಒತ್ತಡ ಮುಂದುವರೆಸಿದ ಭಾರತ ಆಟಗಾರ್ತಿಯರು ಪಂದ್ಯದಲ್ಲಿ ಗೆಲವು ದಾಖಲಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT