ವಿಕಾಸ್ ಗೌಡ 
ಕ್ರೀಡೆ

ಖೇಲ್ ರತ್ನಕ್ಕೆ ವಿಕಾಸ್, ಗಿರೀಶ್ ಹೆಸರು ಶಿಫಾರಸು

ರಾಜ್ಯದ ಕ್ರೀಡಾಳುಗಳಾದ ವಿಕಾಸ್ ಗೌಡ (ಡಿಸ್ಕಸ್ ತ್ರೋ) ಹಾಗೂ ಎಚ್.ಎನ್. ಗಿರೀಶ (ಪ್ಯಾರಾ ಅಥ್ಲೆಟಿಕ್ಸ್) ಅವರಿಗೆ ಪ್ರತಿಷ್ಠಿತ ರಾಜೀವ್ ಗಾಂಧಿ...

ನವದೆಹಲಿ: ರಾಜ್ಯದ ಕ್ರೀಡಾಳುಗಳಾದ ವಿಕಾಸ್ ಗೌಡ (ಡಿಸ್ಕಸ್ ತ್ರೋ) ಹಾಗೂ ಎಚ್.ಎನ್.
ಗಿರೀಶ (ಪ್ಯಾರಾ ಅಥ್ಲೆಟಿಕ್ಸ್) ಅವರಿಗೆ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡುವಂತೆ ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟ (ಎಎಫ್ಐ) ಕೇಂದ್ರ ಕ್ರೀಡಾ ಇಲಾಖೆಗೆ ಶಿಫಾರಸು ಮಾಡಿದೆ.

ಅಲ್ಲದೆ, ಕನ್ನಡದ ಓಟಗಾರ್ತಿ ಎಂ.ಆರ್. ಪೂವಮ್ಮ ಅವರಿಗೆ ಅರ್ಜುನ ಪ್ರಶಸ್ತಿ ನೀಡುವಂತೆ ಅದು ಸಚಿವಾಲಯವನ್ನು ಕೋರಿದೆ. ಪೂವಮ್ಮ ಜೊತೆಗೆ ಟ್ರಿಪಲ್ ಜಂಪರ್ ಅರ್ಪಿಂದರ್ ಸಿಂಗ್, ಓಟಗಾರ್ತಿ ಒ.ಪಿ. ಜೈಶಾ ಹಾಗೂ ಸೀಮಾ ಅವರಿಗೂ ಅರ್ಜುನ ಪ್ರಶಸ್ತಿ ನೀಡುವಂತೆ ಕೇಂದ್ರವನ್ನು ಎಎಫ್ಐ ಕೇಳಿಕೊಂಡಿದೆ.

ಪ್ಯಾರಾ ಅಥ್ಲೆಟಿಕ್ಸ್ ವಿಭಾಗದಲ್ಲಿ ಎಚ್.ಎನ್. ಗಿರೀಶ ಜೊತೆಗೆ, ದೇವೇಂದ್ರ ಝಝಾರಿಯಾ ಅವರಿಗೂ ಖೇಲ್ ರತ್ನ ಪಶಸ್ತಿಗಾಗಿ ಶಿಫಾರಸು ಮಾಡಲಾಗಿದೆ. ಇದರ ಜೊತೆಗೆ, ಮಹಿಳೆಯ ಡಿಸ್ಕರ್ ತ್ರೋ ವಿಭಾಗದಲ್ಲಿ ಗಣನೀಯ ಸಾಧನೆ ಮಾಡಿರುವ ಸೀಮಾ ಪೂನಿಯಾ ಅವರಿಗೂ ಖೇಲ್ ರತ್ನ ನೀಡುವಂತೆ ಶಿಫಾರಸು ಮಾಡಲಾಗಿದೆ. 2014ರ ಏಷ್ಯನ್ ಕ್ರೀಡಾಕೂಟದಲ್ಲಿ ಸೀಮಾ ಅವರು ಚಿನ್ನದ ಪದಕ ಗೆದ್ದಿದ್ದರು.

ವಿಕಾಸ್ ಅವರು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರಲ್ಲದೆ, 2014ರ ಇಂಚಿಯಾನ್ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿಯ ಗೌರವ ಪಡೆದಿದ್ದರು. ಮಹಿಳೆಯರ ಡಿಸ್ಕಸ್ ತ್ರೋ ವಿಭಾಗದಲ್ಲಿ ಗಣನೀಯ ಸಾಧನೆ ಮಾಡಿರುವ ಸೀಮಾ ಪೂನಿಯಾ ಅವರಿಗೂ ಖೇಲ್ ರತ್ನ ನೀಡುವಂತೆ ಶಿಫಾರಸು ಮಾಡಲಾಗಿದೆ. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸೀಮಾ, ಬೆಳ್ಳಿ ಪದಕದ ಗೌರವ ತಂದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT