ಸಚಿನ್ ಕ್ಷಮೆ ಯಾಚಿಸಿದ ಬ್ರಿಟೀಷ್ ಏರ್ ವೇಸ್ (ಸಂಗ್ರಹ ಚಿತ್ರ) 
ಕ್ರೀಡೆ

ಸಚಿನ್ ಕ್ಷಮೆ ಕೋರಿದ ಬ್ರಿಟಿಷ್ ಏರ್‌ವೇಸ್

ಅಭಿಮಾನಿಗಳು ಬ್ರಿಟಿಷ್ ಏರ್ ವೇಸ್ ವಿರುದ್ಧ ಛೀಮಾರಿ ಹಾಕಿ ಟೀಕೆಗಳ ಸುರಿಮಳೆ ಸುರಿಸುತ್ತಲೇ ಎಚ್ಚೆತ್ತುಕೊಂಡ ಏರ್‌ವೇಸ್, ಸಚಿನ್ ಅವರಲ್ಲಿ ಕ್ಷಮೆ ಯಾಚಿಸಿದೆ...

ಮುಂಬೈ: ಕುಟುಂಬ ವರ್ಗಕ್ಕಾಗಿ ಕಾಯ್ದಿರಿಸಲಾಗಿದ್ದ ಸೀಟುಗಳನ್ನು ವಿಮಾನದಲ್ಲಿ ಸೀಟು ಖಾಲಿ ಇದ್ದರೂ, ದೃಢೀಕರಿಸದ ಬ್ರಿಟಿಷ್ ಏರ್‌ವೇಸ್ ವಿರುದ್ಧ ಹೆಸರಾಂತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅಸಮಾಧಾನ ವ್ಯಕ್ತಪಡಿಸುತ್ತಿದ್ದಂತೆಯೇ ಮತ್ತು ಅವರ ಅಭಿಮಾನಿಗಳು ಬ್ರಿಟಿಷ್ ಏರ್ ವೇಸ್ ವಿರುದ್ಧ ಛೀಮಾರಿ ಹಾಕಿ ಟೀಕೆಗಳ ಸುರಿಮಳೆ ಸುರಿಸುತ್ತಲೇ ಎಚ್ಚೆತ್ತುಕೊಂಡ ಏರ್‌ವೇಸ್, ಸಚಿನ್ ಅವರಲ್ಲಿ ಕ್ಷಮೆ ಯಾಚಿಸಿದೆ.

“ನನಗೆ ಸಿಟ್ಟು, ನಿರಾಸೆ ಹಾಗೂ ಹತಾಶೆ ಒಮ್ಮೆಲೇ ಆವರಿಸಿದ್ದು ತೀವ್ರ ಬೇಸರಗೊಂಡಿದ್ದೇನೆ. ಕುಟುಂಬ ಸದಸ್ಯರಿಗಾಗಿ ಕಾಯ್ದಿರಿಸಿದ್ದ ಸೀಟುಗಳನ್ನು ದೃಢೀಕರಿಸದ ಏರ್‌ವೇಸ್ ಬಹಳಷ್ಟು  ಬೇಸರ ತರಿಸಿದೆ" ಎಂದು ಸಚಿನ್, ತಮ್ಮ ಈ ಅಸಮಾಧಾನವನ್ನು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹೊರಹಾಕಿದ್ದಾರೆ. ಸಚಿನ್ ಟ್ವಿಟರ್‌ನಲ್ಲಿ ಹೀಗೆ ತಮ್ಮ ಅಸಮಾಧಾನ ತೋಡಿಕೊಂಡ  ಬೆನ್ನಲ್ಲೇ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಿಗೆ ತಮ್ಮ ಸಿಬ್ಬಂದಿಯಿಂದ ಕಿರುಕುಳ ಉಂಟಾಗಿದ್ದಕ್ಕಾಗಿ ಬ್ರಿಟಿಷ್ ಏರ್‌ವೇಸ್, ಸಚಿನ್ ಅವರ ಕ್ಷಮೆ ಕೋರಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಂಪನಿ, “ಪ್ರಿಯ ಸಚಿನ್ ಅವರೇ, ನಿಮಗೆ ನಮ್ಮ ಸಿಬ್ಬಂದಿಯಿಂದ ತೊಂದರೆಯಾದ ಪ್ರಕರಣ ತಡವಾಗಿ ತಿಳಿದುಬಂದಿದ್ದು, ಅದಕ್ಕಾಗಿ ವಿಷಾದಿಸುತ್ತೇವೆ. ನಿಮ್ಮ ಪೂರ್ಣ ಹೆಸರು, ವಿವರ ಮತ್ತು ವಿಳಾಸವನ್ನು ನೀಡಿದರೆ ನಿಮ್ಮ ಲಗ್ಗೇಜನ್ನು ನಿಮಗೆ ತಲುಪಿಸುತ್ತೇವೆ" ಎಂದು ಹೇಳಿದೆ. ಅಂದಹಾಗೆ ಪ್ರಸಕ್ತ ಆಲ್‌ಸ್ಟಾರ್ಸ್  ಕ್ರಿಕೆಟ್ ಸರಣಿಗಾಗಿ ಸಚಿನ್ ಅಮೆರಿಕ ಪ್ರವಾಸದಲ್ಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘಕಾಲ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

ಅಮೆರಿಕದ ಸುಂಕ: ಜವಳಿ ವಲಯದ ಒತ್ತಡ ಕಡಿಮೆ ಮಾಡಲು 40 ಪ್ರಮುಖ ಆಮದು ದೇಶ ಗುರುತು

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

SCROLL FOR NEXT