ವಿರೇಂದ್ರ ಸೆಹ್ವಾಗ್ 
ಕ್ರೀಡೆ

ನಿವೃತ್ತಿ ವದಂತಿ ತಳ್ಳಿಹಾಕಿದ ವೀರೇಂದ್ರ ಸೆಹ್ವಾಗ್

ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ತಾವು ನಿವೃತ್ತಿ ವದಂತಿಗಳನ್ನು ಸುಳ್ಳೆಂದು ಹೇಳಿರುವ ಹಿರಿಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ನಿವತ್ತಿಯ ಬಗ್ಗೆ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ....

ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ತಾವು ನಿವೃತ್ತಿ ಹೇಳಿರುವುದಾಗಿ ಶನಿವಾರ ಹಬ್ಬಿದ್ದ ವದಂತಿಗಳನ್ನು ಸುಳ್ಳೆಂದು  ಹೇಳಿರುವ ಹಿರಿಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ನಿವತ್ತಿಯ ಬಗ್ಗೆ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ, ಮುಂದಿನ ವರ್ಷ ನಡೆಯಲಿರುವ ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್‍ನಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ. ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್‍ನಲ್ಲಿ ಕೇವಲ ನಿವೃತ್ತ ಕ್ರಿಕೆಟಿಗರಷ್ಟೇ ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ, ಸೆಹ್ವಾಗ್ ಅವರು ಶೀಘ್ರವೇ ನಿವೃತ್ತಿ ಘೋಷಿಸುತ್ತಾರೆಂಬ ಪರೋಕ್ಷವಾಗಿ  ಸೂಚನೆ ಸಿಕ್ಕಿದೆ.  ಸದ್ಯಕ್ಕೆ ರಣಜಿ ಟೂರ್ನಿಯಲ್ಲಿ ಹರ್ಯಾಣ ತಂಡದಲ್ಲಿ ಆಡುತ್ತಿರುವ ಅವರು, ಟೂರ್ನಿ ಮುಂದಿದ ನಂತರ ನಿವೃತ್ತಿ ಷೋಷಿಸಬಹುದು ಎನ್ನಲಾಗಿದೆ.

ಕಿಚ್ಚು ಹಚ್ಚಿದ ಸುದ್ದಿ: ಭಾರತೀಯ ಕ್ರಿಕೆಟ್ ಕಂಡ ಸ್ಫೋಟಕ ಬ್ಯಾಟ್ಸ್‍ಮನ್ ವೀರೇಂದ್ರ ಸೆಹ್ವಾಗ್ ನಿವೃತ್ತಿ ಘೋಷಿಸಿ ದ್ದಾರೆಂಬ ಸುದ್ದಿ ಅಂತರ್ಜಾಲ ಮಾಧ್ಯಮಗಳಲ್ಲಿ ಭಾರಿ ಸಂಚಲನ
ಉಂಟು ಮಾಡಿತು. ಹಲವಾರು ಪ್ರಮುಖ ಸುದ್ದಿ ವಾಹಿನಿಗಳ ಜಾಲ ತಾಣಗಳು ಇದನ್ನು ದೊಡ್ಡಮಟ್ಟದಲ್ಲಿ ಬಿತ್ತರಿಸಿದವಲ್ಲದೇ ಸೆಹ್ವಾಗ್ ಅವರ ಹಿಂದಿನ ಸಾಧನೆಗಳ ಗುಣಗಾನ ಮಾಡಿದವು.

ಸ್ಪಷ್ಟೀಕರಣ: ಕೆಲವೇ ನಿಮಿಷಗಳಲ್ಲಿ ಅದು ಸುಳ್ಳೆಂಬ ಸುದ್ದಿ ಹೊರಬಿತ್ತು. ಯಾವ ಜಾಲತಾಣಗಳು ಸೆಹ್ವಾಗ್ ನಿವೃತ್ತಿಯ ಸುದ್ದಿಯನ್ನು ನೀಡಿದ್ದವೋ ಅದೇ ತಾಣಗಳು
`ವಿದಾಯದ ವದಂತಿ ಅಧಿಕೃತವಲ್ಲ: ವೀರೂ ' ಎಂಬ ಶೀರ್ಷಿಕೆಯಡಿ ಸ್ಪಷ್ಟೀಕರಣದ ಸುದ್ದಿಯನ್ನು ನೀಡಿದವು. ಆದರೂ ಮುಂದಿನ ವರ್ಷ ನಡೆಯಲಿರುವ ಮಾಸ್ಟರ್ಸ್  ಚಾಂಪಿಯನ್ಸ್ ಲೀಗ್ ನಲ್ಲಿ ಆಡುವ ಇಂಗಿತ ವ್ಯಕ್ತಪಡಿಸುವುದರೊಂದಿಗೆ ಸೆಹ್ವಾಗ್ ಅಂಚಿನಲ್ಲಿರುವುದಂತೂ ಸ್ಪಷ್ಟವಾಗಿದೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್