ಬಿಜಾಪುರ ಬುಲ್ಸ್ 
ಕ್ರೀಡೆ

ಬುಲ್ಸ್ ಗೆ ರಾಕ್‍ಸ್ಟಾರ್ಸ್ ಬಲಿ

ಇನಿಂಗ್ಸ್ ನ ಅಂತಿಮ ಹಂತದಲ್ಲಿ ನಾಯಕ ಬಾಲಚಂದ್ರ ಅಖಿಲ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಬಿಜಾಪುರ ಬುಲ್ಸ್ ಭರ್ಜರಿ ಜಯ ಗಳಿಸಿದೆ...

ಮೈಸೂರು: ಇನಿಂಗ್ಸ್ ನ ಅಂತಿಮ ಹಂತದಲ್ಲಿ ನಾಯಕ ಬಾಲಚಂದ್ರ ಅಖಿಲ್ (ಅಜೇಯ 69 ರನ್, 22 ಎಸೆತ, 6 ಬೌಂಡರಿ, 6 ಸಿಕ್ಸರ್) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಬಿಜಾಪುರ ಬುಲ್ಸ್ ಭರ್ಜರಿ ಜಯ ಗಳಿಸಿದೆ.
ಭಾನುವಾರ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬಿಜಾಪುರ ಬುಲ್ಸ್ ತಂಡ 97 ರನ್‍ಗಳ ಅಂತರದಲ್ಲಿ ರಾಕ್‍ಸ್ಟಾರ್ಸ್ ವಿರುದ್ಧ ಗೆಲವು ದಾಖಲಿಸಿತು. ಟಾಸ್ ಗೆದ್ದ ರಾಕ್ ಸ್ಟಾರ್ಸ್ ತಂಡ ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಂತರ ಬ್ಯಾಟಿಂ ಗ್ ಮಾಡಿದ ಬಿಜಾಪುರ ಬುಲ್ಸ್ ತಂಡ 20 ಓವರ್‍ಗಳಲ್ಲಿ 5 ವಿಕೆಟ್‍ಗೆ 197 ರನ್ ದಾಖಲಿಸಿತು. ನಂತರ ರಾಕ್‍ಸ್ಟಾರ್ಸ್ ತಂಡ 20 ಓವರ್ ಗಳಲ್ಲಿ 9 ವಿಕೆಟ್‍ಗೆ 100 ದಾಖಲಿಸಲಷ್ಟೇ ಶಕ್ತವಾಯಿತು. 
ಅಬ್ಬರಿಸಿದ ಅಖಿಲ್: ಮೊದಲು ಬ್ಯಾಟಿಂಗ್ ಮಾಡಲಿಳಿದ ಬಿಜಾಪುರ ಬುಲ್ಸ್ ತಂಡಕ್ಕೆ ಆರಂಭಿಕರಾದ ಆರ್.ಸಮರ್ಥ್ (17) ಮತ್ತು ನಿಧೇಶ್ (57 ರನ್, 45 ಎಸೆತ, 4 ಬೌಂಡರಿ, 2 ಸಿಕ್ಸರ್) ಸಾಧಾರಣ ಆರಂಭ ನೀಡಿದರು. ನಾಯಕ ಬಿ ಅಖಿಲ್ ಮಿಂಚಿನ ಬ್ಯಾಟಿಂಗ್ ಪ್ರದರ್ಶನದ ಮೂಲಕ ತಂಡಕ್ಕೆ ನೆರವಾದರು. ರಾಕ್‍ಸ್ಟಾರ್ಸ್ ಬೌಲಿಂಗ್ ದಾಳಿಯನ್ನು ಮನಬಂದಂತೆ ದಂಡಿಸಿದ ಅಖಿಲ್, ತಂಡವನ್ನು 200ರ ಗಡಿ ಸಮೀಪಕ್ಕೆ ಕೊಂಡೊಯ್ದರು. 
ತತ್ತರಿಸಿದ ರಾಕ್‍ಸ್ಟಾರ್ಸ್: ಕಠಿಣ ಗುರಿಯನ್ನು ಬೆನ್ನಟ್ಟಿದ ರಾಕ್ ಸ್ಟಾರ್ಸ್ ತಂಡ ಬುಲ್ಸ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ. ಆರಂಭಿಕ ರಾಜು ಗೌಡ (26), ಮಧ್ಯಮ ಕ್ರಮಾಂಕದಲ್ಲಿ ಚಂದ್ರಶೇಖರ್ ರಘು (13) ಹಾಗೂ ಕಳೆ ಕ್ರಮಾಂಕದಲ್ಲಿ ಚರಣ್ ತೇಜಾ (24) ಎರಡಂಕಿ ರನ್ ದಾಖಲಿಸಲು ಮಾತ್ರ ಯಶಸ್ವಿಯಾದರು. 
ಸಂಕ್ಷಿಪ್ತ ಸ್ಕೋರ್: ಬಿಜಾಪುರ ಬುಲ್ಸ್ 20 ಓವರ್‍ಗಳಲ್ಲಿ 5 ವಿಕೆಟ್ ಗೆ 197 (ಅಖಿಲ್ ಅಜೇಯ 69, ನಿಧೇಶ್ 57, ಚಂದ್ರಶೇಖರ್ ರಘು 23ಕ್ಕೆ 2) ರಾಕ್‍ಸ್ಟಾರ್ಸ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 100 (ರಾಜು ಗೌಡ 26, ಚರಣ್ ತೇಜಾ 24, ಕಾರ್ಯಪ್ಪ 8ಕ್ಕೆ 2) ಪಂದ್ಯಶ್ರೇಷ್ಠ: ಬಿ. ಅಖಿಲ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT