ಕ್ರೀಡೆ

ನರಸಿಂಗ್ ಯಾದವ್ ಬೆಂಬಲಿಗರಿಂದಲೇ ಸೋಲನ್ನು ಕಂಡಿದ್ದಾರೆ: ಭಾರತೀಯ ಒಲಿಂಪಿಕ್ ಸಂಸ್ಥೆ

Sumana Upadhyaya
ರಿಯೊ ಡಿ ಜನೈರೊ: ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ಸ್(ಸಿಎಎಸ್) ನಿಂದ 4 ವರ್ಷಗಳ ಕಾಲ ನಿಷೇಧಕ್ಕೊಳಗಾದ ಭಾರತೀಯ ಕುಸ್ತಿಪಟು ನರಸಿಂಗ್ ಯಾದವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅತ್ಯಂತ ಬೇಸರಗೊಂಡಿರುವ ಭಾರತೀಯ ಒಲಿಂಪಿಕ್ ಸಂಸ್ಥೆಯ(ಐಒಎ) ಅಧಿಕಾರಿಗಳು, ಎಂಬಾಟಲ್ಡ್ ಕುಸ್ತಿಪಟು ವಿರೋಧಿಗಳ ಬದಲಾಗಿ ಬೆಂಬಲಿಗರಿಂದ ಸೋಲನುಭವಿಸಿದರು ಎಂದಿದ್ದಾರೆ.
ಒಲಿಂಪಿಕ್ಸ್ ನಲ್ಲಿ ಭಾಗವಹಿಸಬೇಕೆಂಬ ನರಸಿಂಗ್ ಯಾದವ್ ಕನಸು ನುಚ್ಚುನೂರಾಗಿದೆ. ಇದು ಕೋರ್ಟ್ ಆಫ್ ಆರ್ಬಿಟ್ರೇಷನ್ ನಿಂದ ನರಸಿಂಗ್ ಯಾದವ್ ಗೆ ಆದ ನಷ್ಟ ಮಾತ್ರವಲ್ಲ, ಅವರು ಒಲಿಂಪಿಕ್ ನಲ್ಲಿ ಭಾಗವಹಿಸುವುದನ್ನು ಇಷ್ಟಪಡದ ಅವರ ಬೆಂಬಲಿಗರಿಂದಲೇ ಸಿಕ್ಕಿದ ಹೊಡೆತವಾಗಿದೆ. ಅವರ ವಿರೋಧಿಗಳಿಂದಲ್ಲ ಎಂದು ಐಒಎಯ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಪ್ರತಿಕ್ರಿಯಿಸಿದ್ದಾರೆ.
ಇಡೀ ಘಟನೆ ಸ್ಪಷ್ಟವಾಗಿದೆ, ಯಾರು ಮೋಸದಾಟ ಆಡಿದರು ಎಂದು ನಾನಾಗಲಿ, ಬೇರೆಯವರಾಗಲಿ ಹೇಳಬೇಕಾಗಿಲ್ಲ. ನೀವು ಹಿಂತಿರುಗಿ ನೋಡಿದಾಗ ನರಸಿಂಗ್ ಯಾದವ್ ವಿರುದ್ಧ ಪಿತೂರಿ ನಡೆಸಿದವರು ಯಾರು ಎಂಬುದು ನಿಮಗೆ ಗೊತ್ತಾಗುತ್ತದೆ ಎಂದರು.
ಎದುರಿನಿಂದ ಬೆಂಬಲಿಗರಂತೆ ಕಾಣುವ ವಿರೋಧಿಗಳು ಆತ ಒಲಿಂಪಿಕ್ ಆಡದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಾವು ಈ ತೀರ್ಪು ವಿರುದ್ಧ ಮೇಲ್ಮನವಿ ಸಲ್ಲಿಸಿ ನಿಷೇಧವನ್ನು ಕಡಿಮೆಗೊಳಿಸಲು ಪ್ರಯತ್ನಿಸುತ್ತೇವೆ. ಇದು ದೇಶಕ್ಕೆ ತುಂಬಲಾರದ ನಷ್ಟ ಎಂದು ಹೇಳಿದರು.
ನರಸಿಂಗ್ ಯಾದವ್ ವಿರುದ್ಧ ಪಿತೂರಿ ನಡೆಸಲಾಗಿದೆ ಎಂದ ರಾಜೀವ್ ಮೆಹ್ತಾ, ಈ ವಿಷಯದ ಬಗ್ಗೆ ಆಮೂಲಾಗ್ರ ತನಿಖೆ ನಡೆಸಲು ಸರ್ಕಾರ ಸಿಬಿಐ ತನಿಖೆಗೆ ವಹಿಸಬೇಕು. ಇದೊಂದು ಸಣ್ಣ ವಿಚಾರವಲ್ಲ. ನಮ್ಮ ದೇಶದ ಕ್ರೀಡೆಗೆ ಅಂಟಿದ ರೋಗವಾಗಿದ್ದು, ಅದನ್ನು ಮೊಗ್ಗಿನಲ್ಲಿರುವಾಗಲೇ ಚಿವುಟಿ ಹಾಕಬೇಕೆಂದರು.
ನರಸಿಂಗ್ ಯಾದವ್ ದೆಹಲಿ ಹೈಕೋರ್ಟ್ ನಲ್ಲಿ ಗೆದ್ದಾಗ ಸೋನಿಪತ್ ನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ಕೆಲವು ಡೋಪಿಂಗ್ ಚಟುವಟಿಕೆಗಳ ಬಗ್ಗೆ ನನಗೆ ದೂರವಾಣಿ ಕರೆ ಬಂತು. ನಂತರ ಯಾದವ್ ವಿರುದ್ಧ ತನಿಖೆ ನಡೆದು ಅದರಲ್ಲಿ ಪಾಸಿಟಿವ್ ಫಲಿತಾಂಶ ಬಂತು. ಇದು ಕಾಕತಾಳೀಯ ಘಟನೆಯಲ್ಲ ಎಂದರು.
ನರಸಿಂಗ್ ಯಾದವ್ ಗೆ ನಾಡಾ ನೀಡಿದ್ದ ಕ್ಲೀನ್ ಚಿಟ್ ವಿರುದ್ಧ ವಾಡಾ(ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆ) ಯಾದವ್ ಒಲಿಂಪಿಕ್ ನಲ್ಲಿ ಭಾಗವಹಿಸುವ ಮೂರು ದಿನಗಳಿಗೆ ಮುಂಚೆ ಎಎಸ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ಸಂಬಂಧ ಸತತ 4 ಗಂಟೆಗಳ ಕಾನ ನಿನ್ನೆ ವಿಚಾರಣೆ ನಡೆಸಿ ನರಸಿಂಗ್ ಯಾದವ್ ಗೆ ನಾಲ್ಕು ವರ್ಷಗಳ ನಿಷೇಧ ಹೇರಿದೆ.
SCROLL FOR NEXT