ಕೋಚ್ ಬಿಸ್ವೇಶ್ವರ್ ನಂದಿ ಅವರೊಂದಿಗೆ ತವರಿಗೆ ಆಗಮಿಸಿದ ದೀಪಾ ಕರ್ಮಾಕರ್ 
ಕ್ರೀಡೆ

"ಮಹಿಳಾ ಶಕ್ತಿ ಏನೆಂದು ತಿಳಿಯತೇ?": ಜಿಮ್ನಾಸ್ಟ್ ದೀಪಾ ಕರ್ಮಾಕರ್

ರಿಯೊ ಒಲಿಂಪಿಕ್ಸ್ ನ ಜಿಮ್ನಾಸ್ಟ್ ವಾಲ್ಟ್ ಫೈನಲ್ ಪ್ರವೇಶಿಸಿ ಇಡೀ ವಿಶ್ವದ ಗಮನ ಸೆಳೆದಿದ್ದ ಜಿಮ್ನಾಸ್ಟ್ ದೀಪಾ ಕರ್ಮಾಕರ್ ತವರಿಗೆ ಆಗಮಿಸಿದ್ದು, ಅವರಿಗೆ ಅದ್ದೂರಿ ಸ್ವಾಗತ ದೊರೆತಿದೆ.

ಅಗರ್ತಲಾ: ರಿಯೊ ಒಲಿಂಪಿಕ್ಸ್ ನ ಜಿಮ್ನಾಸ್ಟ್ ವಾಲ್ಟ್ ಫೈನಲ್ ಪ್ರವೇಶಿಸಿ ಇಡೀ ವಿಶ್ವದ ಗಮನ ಸೆಳೆದಿದ್ದ ಜಿಮ್ನಾಸ್ಟ್ ದೀಪಾ ಕರ್ಮಾಕರ್ ತವರಿಗೆ ಆಗಮಿಸಿದ್ದು, ಅವರಿಗೆ ಅದ್ದೂರಿ ಸ್ವಾಗತ ದೊರೆತಿದೆ.

ಅತ್ತ ಬ್ಯಾಡ್ಮಿಂಟನ್ ಗೆದ್ದ ಪಿವಿ ಸಿಂಧೂಗೆ ಹೈದರಾಬಾದ್ ನಲ್ಲಿ ಅಭೂತಪೂರ್ವ ಸ್ವಾಗತ ದೊರೆತಿರುವಂತೆಯೇ ಇತ್ತ ತಮ್ಮ ತವರು ಅಗರ್ತಲಾಗೆ ಆಗಮಿಸಿದ ಜಿಮ್ನಾಸ್ಟ್ ದೀಪಾಕರ್ಮಾಕರ್  ಅವರಿಗೆ ಅದ್ಧೂರಿ ಸ್ವಾಗತ ದೊರೆತಿದೆ. ವಿಮಾನ ನಿಲ್ದಾಣಕ್ಕೆ ಆಗಮಿಸಿದ ದೀಪಾ ಪೋಷಕರು ಅವರಿಗೆ ಮತ್ತು ಕೋಚ್ ಬಿಶ್ವೇಶ್ವರ್ ನಂದಿ ಅವರಿಗೆ ಸಿಹಿ ತಿನ್ನಿಸುವ ಮೂಲಕ ಆದರದಿಂದ ಬರ  ಮಾಡಿಕೊಂಡರು. ದೀಪಾ ಅವರನ್ನು ಬರ ಮಾಡಿಕೊಳ್ಳಲು ತ್ರಿಪುರಾ ಸರ್ಕಾರದ ಪ್ರತಿನಿಧಿಗಳು, ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳು ಸೇರಿದಂತೆ ಸಾವಿರಾರು ಕ್ರೀಡಾಭಿಮಾನಿಗಳು,  ವಿದ್ಯಾರ್ಥಿಗಳು ಆಗಮಿಸಿದ್ದರು.

ಈ ವೇಳೆ ದೀಪಾ ಅವರನ್ನು ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ ಕರೆದೊಯ್ದು ಸನ್ಮಾನಿಸಲಾಯಿತು. ಸ್ವತಃ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರು, ದೀಪಾ ಕರ್ಮಾಕರ್  ಹಾಗೂ ಕೋಚ್ ಬಿಸ್ವೇಶ್ವರ್ ನಂದಿ ಅವರನ್ನು ಸನ್ಮಾನಿಸಿದರು. ಕಾರ್ಯಕ್ರಮದ ಬಳಿಕ ಮಾತನಾಡಿದ ದೀಪಾ ಕರ್ಮಾಕರ್, ತಮಗೆ ದೊರೆತ ಸ್ವಾಗತ ನಿಜಕ್ಕೂ ಅದ್ಬುತವಾಗಿತ್ತು. ನನ್ನ ಮೇಲೆ  ಇಷ್ಟೊಂದು ಪ್ರೀತಿ ಇಟ್ಟಿರುವ ಜನತೆಗೆ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಇದೇ ವೇಳೆ ಮಹಿಳಾ ಕ್ರೀಡೆಯನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದ ದೀಪಾ "ಬೇಟಿ ಬಚಾವೋ, ಭೇಟಿ ಪಡಾವೋ, ಔರ್ ಭೇಟಿ ಖಿಲಾವೋ" ಎಂದೂ ಸಂದೇಶ ಸಾರಿದರು.

ಅಂತೆಯೇ ರಿಯೊ ಒಲಿಂಪಿಕ್ಸ್ ಗೂ ಮೊದಲು ತಮಗಿದ್ದ ಸಮಸ್ಯೆಗಳನ್ನು ವಿವರಿಸಿದ ದೀಪಾ, ಕ್ರೀಡಾಕೂಟಕ್ಕೂ ಮೊದಲು ನಾವು ಅವಧಿ ಮೀರಿದ ಹಾಗೂ ತುಂಬಾ ಹಳೆಯದಾದ ಕ್ರೀಡಾ  ಪರಿಕರಗಳನ್ನು ಬಳಕೆ ಮಾಡುತ್ತಿದ್ದೆವು. ಇಂದಿಗೂ ಕೂಡ ನಮಗೆ ಸೂಕ್ತ ಕ್ರೀಡಾ ಪರಿಕರಗಳಿಲ್ಲ ಎಂದು ಹೇಳಿದ್ದಾರೆ.

ರಿಯೊ ಒಲಿಂಪಿಕ್ಸ್ ನಲ್ಲಿ ಜಿಮ್ನಾಸ್ಟ್ ಮಹಿಳೆಯರ ವಿಭಾಗ ಫೈನಲ್ ಪ್ರವೇಶಿಸಿದ್ದ ದೀಪಾ, ಭಾರತಕ್ಕೆ ಮೊದಲ ಪದಕ ದೊರಕಿಸಿಕೊಡುವ ಭರವಸೆ ಮೂಡಿಸಿದ್ದರು. ಆದರೆ ಫೈನಲ್ ನಲ್ಲಿ 4ನೇ  ಸ್ಥಾನ ಪಡೆಯುವ ಮೂಲಕ ಅದು ನಿರಾಸೆಯಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT