ಒ.ಪಿ.ಜೈಶಾ 
ಕ್ರೀಡೆ

ನಾನೇಕೆ ಸುಳ್ಳು ಹೇಳಲಿ? ಘಟನೆ ಬಗ್ಗೆ ಸಮಗ್ರ ತನಿಖೆಯಾಗಬೇಕು: ಒ ಪಿ ಜೈಶಾ

ರಿಯೊ ಒಲಿಂಪಿಕ್ ಮ್ಯಾರಥಾನ್ ನಲ್ಲಿ ಓಡಿದ ಕೇರಳ ಮೂಲದ ಒ.ಪಿ.ಜೈಶಾ ಶಕ್ತಿವರ್ಧಕ ಪಾನೀಯಗಳನ್ನು ಕುಡಿಯಲು ...

ಬೆಂಗಳೂರು: ರಿಯೊ ಒಲಿಂಪಿಕ್ ಮ್ಯಾರಥಾನ್ ನಲ್ಲಿ ಓಡಿದ ಕೇರಳ ಮೂಲದ ಒ.ಪಿ.ಜೈಶಾ ಶಕ್ತಿವರ್ಧಕ ಪಾನೀಯಗಳನ್ನು ಕುಡಿಯಲು ನಿರಾಕರಿಸಿದ್ದರು ಎಂಬ ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್ ಆರೋಪದ ಬಗ್ಗೆ ತನಿಖೆಯಾಗಬೇಕೆಂದು ಅಥ್ಲೆಟ್ ಒಪಿ ಜೈಶಾ ಒತ್ತಾಯಿಸಿದ್ದಾರೆ.
33 ವರ್ಷದ ಜೈಶಾ ಮೊನ್ನೆ ರಿಯೊ ಒಲಿಂಪಿಕ್ ನಲ್ಲಿ 42 ಕಿಲೋ ಮೀಟರ್ ಉದ್ದದ ಮ್ಯಾರಥಾನ್ ನಲ್ಲಿ ಓಡುವಾಗ ಅಂತಿಮ ಸುತ್ತಿನಲ್ಲಿ ಕುಡಿಯಲು ನೀರು ಮತ್ತು ಇತರ ಶಕ್ತಿವರ್ಧಕ ಪಾನೀಯ ಸಿಗದೆ ಬಾಯಾರಿಕೆಗೊಂಡು ಕುಸಿದುಬಿದ್ದಿದ್ದಳು. 
ಅಥ್ಲೀಟ್ ಗಳಿಗೆ ಪ್ರತಿ 2.5 ಕಿ.ಮೀ ಮ್ಯಾರಥಾನ್ ಮುಗಿದ ಬಳಿಕ ರಿಫ್ರೆಶ್ ಮೆಂಟ್ ಪಾಯಿಂಟ್ ಬಳಿ ಇತರೆ ದೇಶಗಳ ಕ್ರೀಡಾಪಟುಗಳ ಜತೆ ಆಯಾ ದೇಶಗಳ ಅಧಿಕಾರಿಗಳು ಇದು ದುಬಾರಿ ಗ್ಲುಕೋಸ್, ಜೇನುತುಪ್ಪ, ಶಕ್ತಿವರ್ಧಕ ಹಾಗೂ ಪಾನಿಯಾ ನೀಡುತ್ತಾರೆ. ಆದರೆ ನನಗೆ ಕನಿಷ್ಠ ನೀರು ನೀಡುವವರೂ ಇರಲಿಲ್ಲ. ಇಂಥ ನಿರಾಸಕ್ತ ಭಾರತದ ಅಧಿಕಾರಿಗಳಿಗೆ ಕೃತಜ್ಞತೆ ಎಂದು ಜೈಶಾ ತಮ್ಮ ಅಳಲು ತೋಡಿಕೊಂಡಿದ್ದರು. 
ಇದಕ್ಕೆ ಭಾರತ ಅಥ್ಲೀಟ್ ಫೆಡರೇಶನ್ ನ ಮುಖ್ಯಸ್ಥ  ಸಿಕೆ ವಲ್ಸನ್ ಪ್ರತಿಕ್ರಿಯೆ ನೀಡಿ, ಅಧಿಕಾರಿಗಳು ಅಲ್ಲಿರಲಿಲ್ಲ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಭಾರತೀಯ ಅಧಿಕಾರಿಗಳು ಇದ್ದ ರಿಫ್ರೆಶ್ ಮೆಂಟ್ ಕೌಂಟರ್ ನಲ್ಲಿ ಪಾನೀಯಗಳನ್ನು ತೆಗೆದುಕೊಳ್ಳಲು ಜೈಶಾ ಮತ್ತವರ ಕೋಚ್ ನಿರಾಕರಿಸಿದ್ದರು. ಆದರೂ ಕೂಡ ಯಾವುದಾದರೂ ರೀತಿಯಲ್ಲಿ ಅಥ್ಲೀಟ್ ಸೇವೆಗೆ ಕುಂದುಕೊರತೆಯುಂಟಾಗಿದೆಯೇ ಎಂದು ತನಿಖೆ ನಡೆಸಲಾಗುವುದು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿರುವ ಜೈಶಾ, ನನ್ನ ಇಲ್ಲಿಯವರೆಗಿನ ಕ್ರೀಡಾ ಜೀವನದಲ್ಲಿ ಒಂದು ಬಾರಿ ಕೂಡ ದೂರು, ಆಪಾದನೆ ಮಾಡದಿರುವಾಗ ಈಗ ಈ ವಿಷಯಕ್ಕೆ ನಾನೇಕೆ ಸುಳ್ಳು ಹೇಳಲಿ? ನನಗೆ ಸರ್ಕಾರ ಅಥವಾ ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಆದರೆ ದೇವರು ಮತ್ತು ನನಗೆ ಸತ್ಯ ಏನೆಂಬುದು ಗೊತ್ತು, ಅದನ್ನು ನಾನು ಕ್ರೀಡೆಗೆ ಬಿಟ್ಟುಬಿಡುತ್ತೇನೆ, ಆದರೂ ಈ ಘಟನೆ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಎಂದು ಜೈಶಾ ಒತ್ತಾಯಿಸಿದರು. ಅವರು ಎಎನ್ಐ ಸುದ್ದಿಸಂಸ್ಥೆಗೆ ಇಂದು ಪ್ರತಿಕ್ರಿಯೆ ನೀಡಿದರು.   
ರಿಯೊ ಮ್ಯಾರಥಾನ್ ಮಹಿಳೆಯರ ಸ್ಪರ್ಧೆಯಲ್ಲಿ ಜೈಶಾ 89ನೆಯವರಾಗಿ ಸ್ಪರ್ಧೆ ಮುಗಿಸಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT